ಸಾನ್ನಿಧ್ಯ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ವರ್ತಮಾನ ಸರಿಯಿದ್ದರೆ ಭೂತ, ಭವಿಷ್ಯಗಳೂ ಸರಿಯಾಗಿರುವವು. ವ್ಯಕ್ತಿ ತನ್ನ ಸಂಸ್ಕಾರ, ಹವ್ಯಾಸಗಳಿಂದ ಬಸವಣ್ಣನವರಂತೆ ಭೂತ, ವರ್ತಮಾನ, ಭವಿಷ್ಯದಲ್ಲೂ ಸ್ಮರಣೀಯರಾಗಲು ಸಾಧ್ಯ. ಬೇಗ ಮಲಗಿ ಬೇಗ ಏಳುವ, ಸದಾ ಒಂದಿಲ್ಲೊಂದು ಕಾಯಕ ಮಾಡುವ, ಮತ್ತೊಬ್ಬರನ್ನು ಗೌರವಿಸುವ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಇಂಥ ಹವ್ಯಾಸಗಳೇ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಂಥವು’ ಎಂದು ಸಲಹೆ ನೀಡಿದರು.