ಸೋಮವಾರ ಬೆಳಿಗ್ಗೆ ಆಂಜನೇಯಸ್ವಾಮಿಯ ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕದ ರಾಮತಾರಕ ಹೋಮ, ಪೂರ್ಣಾಹುತಿಯ ನಂತರ 11.30ಕ್ಕೆ ಸ್ವಾಮಿಯವರ ಬ್ರಹ್ಮರಥೋತ್ಸವ ನೆರವೇರಿತು. ನಾಸಿಕ್ ಢೋಲ್, ವೀರಗಾಸೆ ಕುಣಿತ ಬ್ರಹ್ಮರಥೋತ್ಸವಕ್ಕೆ ಮೆರುಗು ನೀಡಿದ್ದವು. ಸಂಜೆ ಆಂಜನೇಯಸ್ವಾಮಿ, ಕೈನಡು ಕರಿಯಮ್ಮ ದೇವಿಗೆ ಹೂವಿನ ಅಲಂಕಾರ, ಬಾಳೆಗೊನೆ ಸೇವೆ, ಪಾನಕ ಪಲ್ಲಾರ ಸೇವೆ ನಂತರ ಲಕ್ಷದೀಪೋತ್ಸವ ನಡೆಸಲಾಯಿತು. ರಾತ್ರಿ ರಸಮಂಜರಿ ಕಾರ್ಯಕ್ರಮದ ನಂತರ ಆಕರ್ಷಕ ಮದ್ದು ಗುಂಡಿನ ಪ್ರದರ್ಶನ ನಡೆಸಲಾಯಿತು.