ಚಿತ್ರದುರ್ಗ: ಇಲ್ಲಿನ ರೈಲು ನಿಲ್ದಾಣದಲ್ಲಿ ಟೀ ವ್ಯಾಪಾರಿಯಿಂದ ಲಂಚ ಪಡೆಯುತ್ತಿದ್ದ ಆರ್ ಪಿಎಫ್ ಅಧಿಕಾರಿ ಗುರುಸ್ವಾಮಿ ಸಿಬಿಐ ಬಲೆಗೆ ಬಿದ್ದಿದ್ದಾರೆ.
ನಗರದ ರೈಲ್ವೆ ನಿಲ್ದಾಣದ ಕಚೇರಿಯಲ್ಲಿ ಟೀ ವ್ಯಾಪಾರಿ ಶಿವಗಂಗಮ್ಮ ಕೃಷ್ಣಪ್ಪ ಎಂಬುವರಿಂದ ಲಂಚ ಪಡೆಯುತ್ತಿದ್ದಾಗ ಸಿಬಿಐ ಡಿವೈಎಸ್ಪಿ ರಾಜು ನೇತೃತ್ವದ ತಂಡ ದಾಳಿ ನಡೆಸಿದೆ.
ರೈಲು ನಿಲ್ದಾಣದಲ್ಲಿ ಟೀ ಮಾರುವವ ಗುತ್ತಿಗೆಯನ್ನು ಎರಡು ವರ್ಷದಿಂದ ಶಿವಂಗಮ್ಮ ಪಡೆದಿದ್ದರು. ನಿಯಮ ಉಲ್ಲಂಘನೆ ಆರೋಪದ ನೆಪದಲ್ಲಿ ಗುರಿಸ್ವಾಮಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಪ್ರತಿ ತಿಂಗಳಿಗೆ ಸುಮಾರು ₹ 40 ಸಾವಿರ ಹಣಕ್ಕೆ ಪಿಡಿಸುತ್ತಿದ್ದ.
ಇದರಿಂದ ಮನನೊಂದ ಶಿವಗಂಗಾ ಸಹೋದರ ಕೃಷ್ಣಪ್ಪ ಅವರು ಅಧಿಕಾರಿ ವಿರುದ್ಧ ದೂರು ನೀಡಿದ್ದರು. ಅಧಿಕಾರಿ ಕರೆ ಮಾಡಿ ಮಾತನಾಡಿದ ಆಡಿಯೊ ಕೂಡ ದೂರಿನೊಂದಿಗೆ ನೀಡಿದ್ದರು. ಬುಧವಾರ ಸಂಜೆ ರೈಲ್ವೆ ನಿಲ್ದಾಣದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದಾಗ ಅಧಿಕಾರಿ ಸಿಕ್ಕಿಬಿದ್ದಿದ್ದಾರೆ.