ಚಿತ್ರದುರ್ಗ: ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿ ಅಸ್ವಸ್ಥರಾಗಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರನ್ನು ಬೆಂಗಳೂರಿನ ಹಾಸ್ಟರ್ ಆಸ್ಪತ್ರೆಗೆ ಆಂಬುಲೆನ್ಸ್ನಲ್ಲಿ ಕರೆದೊಯ್ಯಲಾಯಿತು.
ಚಿತ್ರದುರ್ಗದಿಂದ ಬೆಂಗಳೂರು ವರೆಗೆ ಜೀರೋ ಟ್ರಾಫಿಕ್ ನಲ್ಲಿ ಸ್ಥಳಾಂತರ ಮಾಡಲಾಯಿತು. ಸದಾನಂದಗೌಡರು, ಬಸವೇಶ್ವರ ಆಸ್ಪತ್ರೆಯಲ್ಲಿ ಜ್ಯೂಸ್ ಕುಡಿದು ಸಹಜವಾದಂತೆ ಕಂಡುಬಂದರು.
ಏಕಾಏಕಿ ಅಸ್ವಸ್ಥರಾಗಿದ್ದ ಅವರು ಪ್ರಜ್ಞೆ ತಪ್ಪಿದ್ದರು. ತಕ್ಷಣ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆಗೆ ಸ್ಪಂದಿಸಿ, ಚೆನ್ನಾಗಿಯೇ ಮಾತನಾಡಿದರು. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳಿಸಲಾಗಿದೆ ಎಂದು ವೈದ್ಯ ಡಾ. ಅಭಿಷೇಕ್ ಮಾಹಿತಿ ನೀಡಿದರು.
ಆಂಬುಲೆನ್ಸ್ನಲ್ಲಿ ಸದಾನಂದ ಗೌಡರ ಜತೆಗೆ ಡಾ. ಜಗದೀಶ್ ಕೂಡ ಬೆಂಗಳೂರಿಗೆ ತೆರಳಿದರು.