ಐವರನ್ನು ಬಲಿಪಡೆದ, 200ಕ್ಕೂ ಅಧಿಕ ಜನರು ಅಸ್ವಸ್ಥಗೊಂಡ ಕಲುಷಿತ ನೀರು ಪ್ರಕರಣದ ನಂತರ ಕವಾಡಿಗರಹಟ್ಟಿ ಎಂದಿನಂತಿಲ್ಲ. ಜೀವ ಜಲವಾದ ನೀರು ಜೀವವನ್ನೇ ಕಸಿದುಕೊಂಡ ಘಟನೆಯ ನೆನಪು ಗ್ರಾಮದುದ್ದಕ್ಕೂ ಹಸಿಯಾಗಿಯೇ ಇದೆ. ತಮ್ಮವರನ್ನು ಕಳೆದುಕೊಂಡವರ ಮನೆಗಳಲ್ಲಿ ನೀರವ ಮೌನ ಆವರಿಸಿದೆ. ಈ ಎಲ್ಲವುಗಳ ನಡುವೆ ಬದುಕು ಕಸಿದುಕೊಂಡ ಘಟನೆಯ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.