<p><strong>ಚಿತ್ರದುರ್ಗ</strong>: ‘ಗ್ರಾಮದಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುವವರ ಮನೆಗಳಿಗೆ ಬೆಂಕಿ ಹಚ್ಚುತ್ತೇವೆ’ ಎಂದು ಹೇಳಿದ ಮಹಿಳೆಯರಿಗೆ, ‘ಆಯ್ತು ಬೆಂಕಿ ಹಚ್ಚಿ. ಏಕೆ ಯೋಚನೆ ಮಾಡುತ್ತೀರಿ’ ಎಂದು ಶಾಸಕ ಕೆ.ಸಿ. ವೀರೇಂದ್ರ ಸಲಹೆ ನೀಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.</p>.<p>ತಾಲ್ಲೂಕಿನ ಹಿರೇಗುಂಟನೂರು ಗ್ರಾಮದಲ್ಲಿ ಈಚೆಗೆ ತಮ್ಮನ್ನು ಭೇಟಿಯಾಗಿ, ಮದ್ಯ ಅಕ್ರಮ ಮಾರಾಟ ತಡೆಯುವಂತೆ ಮನವಿ ಮಾಡಿಕೊಂಡ ಮಹಿಳೆಯರಿಗೆ ಈ ರೀತಿ ಹೇಳಿದ್ದಾರೆ.</p>.<p>‘ಗ್ರಾಮದಲ್ಲಿ ಮದ್ಯವನ್ನು ಎಗ್ಗಿಲ್ಲದೇ ಮಾರಾಟ ಮಾಡುತ್ತಿರುವುದರಿಂದ ತೊಂದರೆ ಉಂಟಾಗಿದೆ. ಗಂಡಂದಿರು ಕುಡಿದು ಬಂದು ನಿತ್ಯ ಮನೆಗಳಲ್ಲಿ ಗಲಾಟೆ ಮಾಡುತ್ತಿದ್ದಾರೆ. ಮದ್ಯ ಮಾರಾಟ ತಡೆಯಲು ಈವರೆಗೆ ಯಾರೂ ಕ್ರಮ ಕೈಗೊಂಡಿಲ್ಲ. ಕೈ ಮುಗಿಯುತ್ತೇವೆ, ಈ ಬಗ್ಗೆ ಕ್ರಮ ಕೈಗೊಳ್ಳಿ’ ಎಂದು ಮಹಿಳೆಯರು ಶಾಸಕರಲ್ಲಿ ಮನವಿ ಮಾಡಿದ್ದರು.</p>.<p>ಇದೇ ವೇಳೆ ಮಹಿಳೆಯೊಬ್ಬರು, ‘ಇಷ್ಟು ಹೇಳಿದ್ದೇವೆ, ಮುಂದೆ ಮದ್ಯ ಮಾರುವವರ ಮನೆಗಳಿಗೆ ಬೆಂಕಿ ಇಡುತ್ತೇವೆ’ ಎಂದು ಹೇಳಿದಾಗ, ಶಾಸಕ ವೀರೇಂದ್ರ, ‘ನೀನು ಬೆಂಕಿ ಇಡಮ್ಮ ನಾನಿದ್ದೇನೆ, ಯಾಕೆ ಯೋಚನೆ ಮಾಡ್ತೀಯಾ’ ಎಂದು ಹೇಳಿದ್ದಾರೆ.</p>.<p>‘ಹುಳು ಇರುವ ಅನ್ನ ನೀಡುವ ಹಾಸ್ಟೆಲ್ ವಾರ್ಡನ್ನನ್ನು ರೂಮಿನಲ್ಲಿ ಕೂಡಿಹಾಕಿ, ಹುಳ ತಿನ್ನಿಸಿ ಹೊಡೆಯಿರಿ’ ಎಂದು ವೀರೇಂದ್ರ ಶನಿವಾರವಷ್ಟೇ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ</strong>: ‘ಗ್ರಾಮದಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುವವರ ಮನೆಗಳಿಗೆ ಬೆಂಕಿ ಹಚ್ಚುತ್ತೇವೆ’ ಎಂದು ಹೇಳಿದ ಮಹಿಳೆಯರಿಗೆ, ‘ಆಯ್ತು ಬೆಂಕಿ ಹಚ್ಚಿ. ಏಕೆ ಯೋಚನೆ ಮಾಡುತ್ತೀರಿ’ ಎಂದು ಶಾಸಕ ಕೆ.ಸಿ. ವೀರೇಂದ್ರ ಸಲಹೆ ನೀಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.</p>.<p>ತಾಲ್ಲೂಕಿನ ಹಿರೇಗುಂಟನೂರು ಗ್ರಾಮದಲ್ಲಿ ಈಚೆಗೆ ತಮ್ಮನ್ನು ಭೇಟಿಯಾಗಿ, ಮದ್ಯ ಅಕ್ರಮ ಮಾರಾಟ ತಡೆಯುವಂತೆ ಮನವಿ ಮಾಡಿಕೊಂಡ ಮಹಿಳೆಯರಿಗೆ ಈ ರೀತಿ ಹೇಳಿದ್ದಾರೆ.</p>.<p>‘ಗ್ರಾಮದಲ್ಲಿ ಮದ್ಯವನ್ನು ಎಗ್ಗಿಲ್ಲದೇ ಮಾರಾಟ ಮಾಡುತ್ತಿರುವುದರಿಂದ ತೊಂದರೆ ಉಂಟಾಗಿದೆ. ಗಂಡಂದಿರು ಕುಡಿದು ಬಂದು ನಿತ್ಯ ಮನೆಗಳಲ್ಲಿ ಗಲಾಟೆ ಮಾಡುತ್ತಿದ್ದಾರೆ. ಮದ್ಯ ಮಾರಾಟ ತಡೆಯಲು ಈವರೆಗೆ ಯಾರೂ ಕ್ರಮ ಕೈಗೊಂಡಿಲ್ಲ. ಕೈ ಮುಗಿಯುತ್ತೇವೆ, ಈ ಬಗ್ಗೆ ಕ್ರಮ ಕೈಗೊಳ್ಳಿ’ ಎಂದು ಮಹಿಳೆಯರು ಶಾಸಕರಲ್ಲಿ ಮನವಿ ಮಾಡಿದ್ದರು.</p>.<p>ಇದೇ ವೇಳೆ ಮಹಿಳೆಯೊಬ್ಬರು, ‘ಇಷ್ಟು ಹೇಳಿದ್ದೇವೆ, ಮುಂದೆ ಮದ್ಯ ಮಾರುವವರ ಮನೆಗಳಿಗೆ ಬೆಂಕಿ ಇಡುತ್ತೇವೆ’ ಎಂದು ಹೇಳಿದಾಗ, ಶಾಸಕ ವೀರೇಂದ್ರ, ‘ನೀನು ಬೆಂಕಿ ಇಡಮ್ಮ ನಾನಿದ್ದೇನೆ, ಯಾಕೆ ಯೋಚನೆ ಮಾಡ್ತೀಯಾ’ ಎಂದು ಹೇಳಿದ್ದಾರೆ.</p>.<p>‘ಹುಳು ಇರುವ ಅನ್ನ ನೀಡುವ ಹಾಸ್ಟೆಲ್ ವಾರ್ಡನ್ನನ್ನು ರೂಮಿನಲ್ಲಿ ಕೂಡಿಹಾಕಿ, ಹುಳ ತಿನ್ನಿಸಿ ಹೊಡೆಯಿರಿ’ ಎಂದು ವೀರೇಂದ್ರ ಶನಿವಾರವಷ್ಟೇ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>