ಹಿರಿಯೂರು:ನಗರದ ಸೂರ್ಯಗಂಗಾ ಬಡಾವಣೆಯಲ್ಲಿ ಜ್ವರ, ಕೆಮ್ಮು, ನೆಗಡಿ ಬಂದ ಕಾರಣ ಕೊರೊನಾ ಬಂದಿದೆ ಎಂಬ ಭಯದಲ್ಲಿ ಗೃಹಿಣಿಯೊಬ್ಬರು ಸೋಮವಾರ ಬೆಳಿಗ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಡಾವಣೆಯ ಶಿಲ್ಪಾ (28) ಆತ್ಮಹತ್ಯೆ ಮಾಡಿಕೊಂಡವರು. ಪತಿ ಮಲಗಿದ್ದ ವೇಳೆ, ಶಿಲ್ಪಾ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ ಎಂದು ನಗರ ಪೊಲೀಸ್ ಠಾಣೆ ಎಸ್ಐ ಅನಸೂಯಮ್ಮ ತಿಳಿಸಿದ್ದಾರೆ.