<p><strong>ಮೊಳಕಾಲ್ಮುರು:</strong>ಎದೆಗುಂದದೇ ಧೈರ್ಯ ತಂದುಕೊಳ್ಳುವುದೊಂದೇ ಕೊರೊನಾಕ್ಕೆ ಬೇಕಿರುವ ಪರಿಣಾಮಕಾರಿ ಚಿಕಿತ್ಸೆ...!</p>.<p>ಈಚೆಗೆ ಸೋಂಕಿಗೆ ಒಳಗಾಗಿ ಗುಣಮುಖರಾಗಿ ಮನೆಗೆ ವಾಪಸಾಗಿರುವ ತಾಲ್ಲೂಕಿನ ಕೊಂಡ್ಲಹಳ್ಳಿಯ 50 ವರ್ಷದಶಿಕ್ಷಕರೊಬ್ಬರು ಹೇಳುವ ಮಾತು. ಕೋವಿಡ್ ಗೆದ್ದ ಬಗೆಯನ್ನು ‘ಪ್ರಜಾವಾಣಿ’ಗೆ ವಿವರಿಸಿದರು.</p>.<p>‘ಎಸ್ಸೆಸ್ಸೆಲ್ಸಿ ಪರೀಕ್ಷೆ ಮೌಲ್ಯಮಾಪನ ಕಾರ್ಯಕ್ಕೆ ಚಿತ್ರದುರ್ಗಕ್ಕೆ ಒಂದು ವಾರ ಕಾರಿನಲ್ಲಿ ಹೋಗಿ ಬಂದಿದ್ದೆ. ಅಲ್ಲಿ 2 ದಿನ ಆಟೊದಲ್ಲಿ ಓಡಾಡಿದ್ದೆ.ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯವಾಗಿ ಬಳಸಿದ್ದೇನೆ. ಮೌಲ್ಯಮಾಪನ ಮುಗಿದ ಮರುದಿನ ತುಸು ಜ್ವರ ಕಾಣಿಸಿಕೊಂಡಿತು. ಒಂದು ದಿನ ಬಿಟ್ಟು ಪರೀಕ್ಷೆಮಾಡಿಸಲು ಚಳ್ಳಕೆರೆಗೆ ಹೋಗಿದ್ದಾಗ ಕೋವಿಡ್ ಸೋಂಕು ಇರುವುದು ಕಂಡುಬಂತು’ ಎಂದು ಹೇಳಿದರು.</p>.<p>‘ಇದುವರೆಗೂ ಸೋಂಕು ಯಾವ ರೀತಿ ಬಂತು ಎಂದು ನನಗೆ ಗೊತ್ತಾಗಿಲ್ಲ. ಸೋಂಕು ಕಂಡುಬಂದಾಗ ಸ್ವಲ್ಪ ಭಯವಾಗಿತ್ತು. ಮನೆಯಲ್ಲಿಯೂ ಭಯಕ್ಕೆಒಳಗಾಗಿದ್ದರು. ಆದರೆ ನಾನು ಸೋಂಕಿಗೆ ಚಿಕಿತ್ಸೆ ಮಾತ್ರ ಇರುವ ಏಕೈಕ ಮಾತ್ರ ಎಂದು ಮನವರಿಕೆ ಮಾಡಿಕೊಂಡು ಧೈರ್ಯ ತಂದುಕೊಂಡು ಚಿಕಿತ್ಸಾ ಕೇಂದ್ರಕ್ಕೆ ಹೋಗಲು ನಿರ್ಧರಿಸಿದೆ. ವೈದ್ಯರು ಚಿತ್ರದುರ್ಗ ಅಥವಾ ರಾಂಪುರದ ಆಯ್ಕೆ ಇಟ್ಟಾಗ ಇದೇ ತಾಲ್ಲೂಕಿನ ರಾಂಪುರ ಕೋವಿಡ್ ಕೇಂದ್ರವನ್ನು ಆಯ್ಕೆ ಮಾಡಿಕೊಂಡೆ’ ಎಂದು ವಿವರಿಸಿದರು.</p>.<p>ರಾಂಪುರ ಕೇಂದ್ರದಲ್ಲಿ ವೈದ್ಯ ಡಾ. ರಮೇಶ್ ಹಾಗೂ ಸಿಬ್ಬಂದಿ ತುಂಬಾ ಚೆನ್ನಾಗಿ ನೋಡಿಕೊಂಡರು. ಆತ್ಮೀಯವಾಗಿ ಸ್ಪಂದಿಸಿದರು. ಉತ್ತಮ ಚಿಕಿತ್ಸೆನೀಡಿದರು. ಜತೆಗೆ ಗುಣಮಟ್ಟದ ಊಟ, ತಿಂಡಿ ನೀಡಿದರು.</p>.<p>‘ಗುಣಮುಖವಾಗಿ ಬಂದ ನಂತರವೂ ವೈದ್ಯ ಡಾ. ರಮೇಶ್ ಅವರಿಗೆ ಕರೆ ಮಾಡಿ ಹಲವು ಸಾರಿ ಮಾತನಾಡಿದ್ದೇನೆ. ಆತ್ಮೀಯ ನುಡಿ ಆಡುತ್ತಾರೆ. ಇದು ನನಗೆ ಹೆಚ್ಚಿನ ಧೈರ್ಯ ತುಂಬಿತು. ಕೇಂದ್ರದಲ್ಲಿ ಉತ್ತಮ ವ್ಯವಸ್ಥೆಯಿದೆ’ ಎಂದು ಮೆಚ್ಚುಗೆಯ ಮಾತನಾಡಿದರು.</p>.<p>‘ಕೆಲ ಮಾದ್ಯಮಗಳಲ್ಲಿ ವೈರಸ್ ಬಗ್ಗೆ ಅತಿರೇಕವಾಗಿ ತೋರಿಸುವುದು ಸರಿಯಲ್ಲ. ಇದು ಜನರನ್ನು ಭಯಕ್ಕೆ ಈಡು ಮಾಡುತ್ತಿದೆ. ಜನರು ಇಂತಹಸುದ್ದಿಗಳನ್ನು ನೋಡಿ ಭಯಪಡುವುದರಿಂದ ಹೊರಬರಬೇಕು. ಸಮುದಾಯ ಕೋವಿಡ್ ಹಿಮ್ಮೆಟ್ಟಿಸಲು ಅಗತ್ಯವಿರುವ ಏಕೈಕ ಮಾರ್ಗ ಎಂದರೆ ಸ್ವಯಂ ಧೈರ್ಯ ತಂದುಕೊಳ್ಳುವುದು’ ಎಂದು ಕಿವಿಮಾತು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊಳಕಾಲ್ಮುರು:</strong>ಎದೆಗುಂದದೇ ಧೈರ್ಯ ತಂದುಕೊಳ್ಳುವುದೊಂದೇ ಕೊರೊನಾಕ್ಕೆ ಬೇಕಿರುವ ಪರಿಣಾಮಕಾರಿ ಚಿಕಿತ್ಸೆ...!</p>.<p>ಈಚೆಗೆ ಸೋಂಕಿಗೆ ಒಳಗಾಗಿ ಗುಣಮುಖರಾಗಿ ಮನೆಗೆ ವಾಪಸಾಗಿರುವ ತಾಲ್ಲೂಕಿನ ಕೊಂಡ್ಲಹಳ್ಳಿಯ 50 ವರ್ಷದಶಿಕ್ಷಕರೊಬ್ಬರು ಹೇಳುವ ಮಾತು. ಕೋವಿಡ್ ಗೆದ್ದ ಬಗೆಯನ್ನು ‘ಪ್ರಜಾವಾಣಿ’ಗೆ ವಿವರಿಸಿದರು.</p>.<p>‘ಎಸ್ಸೆಸ್ಸೆಲ್ಸಿ ಪರೀಕ್ಷೆ ಮೌಲ್ಯಮಾಪನ ಕಾರ್ಯಕ್ಕೆ ಚಿತ್ರದುರ್ಗಕ್ಕೆ ಒಂದು ವಾರ ಕಾರಿನಲ್ಲಿ ಹೋಗಿ ಬಂದಿದ್ದೆ. ಅಲ್ಲಿ 2 ದಿನ ಆಟೊದಲ್ಲಿ ಓಡಾಡಿದ್ದೆ.ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯವಾಗಿ ಬಳಸಿದ್ದೇನೆ. ಮೌಲ್ಯಮಾಪನ ಮುಗಿದ ಮರುದಿನ ತುಸು ಜ್ವರ ಕಾಣಿಸಿಕೊಂಡಿತು. ಒಂದು ದಿನ ಬಿಟ್ಟು ಪರೀಕ್ಷೆಮಾಡಿಸಲು ಚಳ್ಳಕೆರೆಗೆ ಹೋಗಿದ್ದಾಗ ಕೋವಿಡ್ ಸೋಂಕು ಇರುವುದು ಕಂಡುಬಂತು’ ಎಂದು ಹೇಳಿದರು.</p>.<p>‘ಇದುವರೆಗೂ ಸೋಂಕು ಯಾವ ರೀತಿ ಬಂತು ಎಂದು ನನಗೆ ಗೊತ್ತಾಗಿಲ್ಲ. ಸೋಂಕು ಕಂಡುಬಂದಾಗ ಸ್ವಲ್ಪ ಭಯವಾಗಿತ್ತು. ಮನೆಯಲ್ಲಿಯೂ ಭಯಕ್ಕೆಒಳಗಾಗಿದ್ದರು. ಆದರೆ ನಾನು ಸೋಂಕಿಗೆ ಚಿಕಿತ್ಸೆ ಮಾತ್ರ ಇರುವ ಏಕೈಕ ಮಾತ್ರ ಎಂದು ಮನವರಿಕೆ ಮಾಡಿಕೊಂಡು ಧೈರ್ಯ ತಂದುಕೊಂಡು ಚಿಕಿತ್ಸಾ ಕೇಂದ್ರಕ್ಕೆ ಹೋಗಲು ನಿರ್ಧರಿಸಿದೆ. ವೈದ್ಯರು ಚಿತ್ರದುರ್ಗ ಅಥವಾ ರಾಂಪುರದ ಆಯ್ಕೆ ಇಟ್ಟಾಗ ಇದೇ ತಾಲ್ಲೂಕಿನ ರಾಂಪುರ ಕೋವಿಡ್ ಕೇಂದ್ರವನ್ನು ಆಯ್ಕೆ ಮಾಡಿಕೊಂಡೆ’ ಎಂದು ವಿವರಿಸಿದರು.</p>.<p>ರಾಂಪುರ ಕೇಂದ್ರದಲ್ಲಿ ವೈದ್ಯ ಡಾ. ರಮೇಶ್ ಹಾಗೂ ಸಿಬ್ಬಂದಿ ತುಂಬಾ ಚೆನ್ನಾಗಿ ನೋಡಿಕೊಂಡರು. ಆತ್ಮೀಯವಾಗಿ ಸ್ಪಂದಿಸಿದರು. ಉತ್ತಮ ಚಿಕಿತ್ಸೆನೀಡಿದರು. ಜತೆಗೆ ಗುಣಮಟ್ಟದ ಊಟ, ತಿಂಡಿ ನೀಡಿದರು.</p>.<p>‘ಗುಣಮುಖವಾಗಿ ಬಂದ ನಂತರವೂ ವೈದ್ಯ ಡಾ. ರಮೇಶ್ ಅವರಿಗೆ ಕರೆ ಮಾಡಿ ಹಲವು ಸಾರಿ ಮಾತನಾಡಿದ್ದೇನೆ. ಆತ್ಮೀಯ ನುಡಿ ಆಡುತ್ತಾರೆ. ಇದು ನನಗೆ ಹೆಚ್ಚಿನ ಧೈರ್ಯ ತುಂಬಿತು. ಕೇಂದ್ರದಲ್ಲಿ ಉತ್ತಮ ವ್ಯವಸ್ಥೆಯಿದೆ’ ಎಂದು ಮೆಚ್ಚುಗೆಯ ಮಾತನಾಡಿದರು.</p>.<p>‘ಕೆಲ ಮಾದ್ಯಮಗಳಲ್ಲಿ ವೈರಸ್ ಬಗ್ಗೆ ಅತಿರೇಕವಾಗಿ ತೋರಿಸುವುದು ಸರಿಯಲ್ಲ. ಇದು ಜನರನ್ನು ಭಯಕ್ಕೆ ಈಡು ಮಾಡುತ್ತಿದೆ. ಜನರು ಇಂತಹಸುದ್ದಿಗಳನ್ನು ನೋಡಿ ಭಯಪಡುವುದರಿಂದ ಹೊರಬರಬೇಕು. ಸಮುದಾಯ ಕೋವಿಡ್ ಹಿಮ್ಮೆಟ್ಟಿಸಲು ಅಗತ್ಯವಿರುವ ಏಕೈಕ ಮಾರ್ಗ ಎಂದರೆ ಸ್ವಯಂ ಧೈರ್ಯ ತಂದುಕೊಳ್ಳುವುದು’ ಎಂದು ಕಿವಿಮಾತು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>