ಸೋಮವಾರ ಸಂಜೆ ಸರ್ಕಾರ ಲಾಕ್ಡೌನ್ ಮಾಡಲು ತೀರ್ಮಾನಿಸುತ್ತಿದ್ದಂತೆ ಹಲವರು ಸ್ವಗ್ರಾಮಗಳಿಗೆ ಬರಲು ಸಿದ್ಧರಾದರು. ಸೋಮವಾರ ರಾತ್ರಿಯಿಂದಲೂ ಹಲವರು ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್, ಕಾರು, ಟಾಟಾ ಏಸ್, ಟ್ರ್ಯಾಕ್ಸ್, ಬೈಕ್ಗಳಲ್ಲಿ ಬಂದರು. ಮತ್ತೆ ಕೆಲವರು ಗಂಟುಮೂಟೆ ಕಟ್ಟಿಕೊಂಡು ಬಾಡಿಗೆ ವಾಹನದಲ್ಲಿ ಆಗಮಿಸುತ್ತಿದ್ದರು. ಇದರಿಂದ ಪಟ್ಟಣದಲ್ಲಿ ಮಂಗಳವಾರ ವಾಹನ ದಟ್ಟಣೆ ಹೆಚ್ಚಾಯಿತು.