ಗೋ ಜ್ಞಾನ್ ಫೌಂಡೇಶನ್ನ ಎನ್.ಜಿ.ಒ ಒಂದು ನೀಡಿರುವ ದೂರಿನ ಅನ್ವಯ ಗುರುವಾರ ಬೆಳಿಗ್ಗೆ 7ಕ್ಕೆ ಗೌಸಿಯಾ ನಗರದ ಬೀದಿಗಳಲ್ಲಿ ಪೊಲೀಸರು ದಾಳಿ ಮಾಡಿ 38ಕ್ಕೂ ಹೆಚ್ಚು ದನಕರುಗಳನ್ನು ರಕ್ಷಿಸಿದರು. ‘ಕಸಾಯಿಖಾನೆಗಳಲ್ಲಿ ಅಕ್ರಮ ವಾಗಿ ಗೋಮಾಂಸ ಮಾರಾಟ ಮಾಡಲಾಗುತ್ತಿದೆ. ಅಲ್ಲದೇ ಅವುಗಳ ಹತ್ಯೆ ನಡೆಸಿ ಅದರ ರಕ್ತ ಸೇರಿದಂತೆ ಇನ್ನಿತರ ತ್ಯಾಜ್ಯವನ್ನು ಚರಂಡಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಹಾಕಲಾಗುತ್ತಿದೆ. ಇದರಿಂದ ಇಲ್ಲಿಯ ಜನ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಭೀತಿಯಲ್ಲಿದ್ದಾರೆ. ದನಕರುಗಳನ್ನು ರಕ್ಷಿಸಿ ಗೋಶಾಲೆಗೆ ಕಳುಹಿಸಬೇಕು. ಜೊತೆಗೆ ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ತಿಳಿಸಲಾಗಿದೆ.