<p>ಹೊಳಲ್ಕೆರೆ: ತಾಲ್ಲೂಕಿನ ಚಿತ್ರಹಳ್ಳಿ ಗೇಟ್ ಹಾಗೂ ರಾಮಗಿರಿಯಲ್ಲಿರುವ ಸುಡುಗಾಡು ಸಿದ್ದರಿಗೆ ಬುಧವಾರ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.</p>.<p>‘ಪ್ರಜಾವಾಣಿ’ಯಲ್ಲಿ ಬುಧವಾರ ‘ತುತ್ತು ಅನ್ನಕ್ಕೂ ಸುಡುಗಾಡು ಸಿದ್ದರ ತತ್ವಾರ’ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟವಾದ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಹಾಗೂ ಸಂಘ ಸಂಸ್ಥೆಗಳು ಜನರ ನೆರವಿಗೆ ಧಾವಿಸಿದವು.</p>.<p>ಚಿತ್ರಹಳ್ಳಿ ಗೇಟ್ನಲ್ಲಿರುವ ಕಾಲೊನಿಗೆ<br />ಭೇಟಿ ನೀಡಿದ ತಹಶೀಲ್ದಾರ್ ಕೆ. ನಾಗರಾಜ್, ಗ್ರಾಮ ಪಂಚಾಯಿತಿ ಸಿಬ್ಬಂದಿ, ಅಧಿಕಾರಿಗಳು ಜನರಿಗೆ ದವಸ– ಧಾನ್ಯ, ಅಗತ್ಯ ವಸ್ತುಗಳನ್ನು ವಿತರಿಸಿದರು.</p>.<p>ಅಲೆಮಾರಿಗಳ ಸಮಸ್ಯೆ ಆಲಿಸಿದ ಅಲೆಮಾರಿ ಬುಡಕಟ್ಟು ಮಹಾ ಸಭಾದ ರಾಜ್ಯ ಸಮಿತಿ ಸದಸ್ಯರಾದ ಚಿತ್ರದುರ್ಗದ ಸಚಿನ್ ಹಾಗೂ ಎಚ್.ಡಿ.ಪುರದ ಜಯಶೀಲಾ ವಿಜಯ್ ಚಿತ್ರಹಳ್ಳಿ,‘ಈಗಾಗಲೇ ತಾಲ್ಲೂಕು ಹಾಗೂ ಜಿಲ್ಲಾಡಳಿತಗಳಿಂದ ನೆರವು ನೀಡಲಾಗಿದೆ. ಮುಂದೆಯೂ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು’ ಎಂದರು.</p>.<p>ರಾಮಗಿರಿಯ ಕಾಲೊನಿಯ 60 ಕುಟುಂಬಗಳಿಗೆ ಪಟ್ಟಣದ ಪ್ರಸನ್ನ ಗಣಪತಿ ಟ್ರಸ್ಟ್ನಿಂದ ಅಕ್ಕಿ, ಬೇಳೆ, ಸಕ್ಕರೆ, ಗೋಧಿಹಿಟ್ಟು, ಕಾಫಿಪುಡಿ, ಸಾಂಬರ್ ಪುಡಿ, ಕಾರದಪುಡಿ, ಅರಿಶಿಣ ಪುಡಿ, ಪೇಸ್ಟ್ ಮತ್ತಿತರ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.</p>.<p>ಪ್ರಸನ್ನ ಗಣಪತಿ ದೇವಸ್ಥಾನ ಟ್ರಸ್ಟ್ನ ನಟರಾಜ್ ಆಚಾರ್, ಎಚ್.ಸಿ.ರಮೇಶ್. ವಿ.ನಟರಾಜ್, ರಾಘವೇಂದ್ರ ನಾಯಕ, ಬಿ.ಎನ್. ಪ್ರಶಾಂತ್ ಕುಮಾರ್, ಎಸ್. ವೇದಮೂರ್ತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಳಲ್ಕೆರೆ: ತಾಲ್ಲೂಕಿನ ಚಿತ್ರಹಳ್ಳಿ ಗೇಟ್ ಹಾಗೂ ರಾಮಗಿರಿಯಲ್ಲಿರುವ ಸುಡುಗಾಡು ಸಿದ್ದರಿಗೆ ಬುಧವಾರ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.</p>.<p>‘ಪ್ರಜಾವಾಣಿ’ಯಲ್ಲಿ ಬುಧವಾರ ‘ತುತ್ತು ಅನ್ನಕ್ಕೂ ಸುಡುಗಾಡು ಸಿದ್ದರ ತತ್ವಾರ’ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟವಾದ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಹಾಗೂ ಸಂಘ ಸಂಸ್ಥೆಗಳು ಜನರ ನೆರವಿಗೆ ಧಾವಿಸಿದವು.</p>.<p>ಚಿತ್ರಹಳ್ಳಿ ಗೇಟ್ನಲ್ಲಿರುವ ಕಾಲೊನಿಗೆ<br />ಭೇಟಿ ನೀಡಿದ ತಹಶೀಲ್ದಾರ್ ಕೆ. ನಾಗರಾಜ್, ಗ್ರಾಮ ಪಂಚಾಯಿತಿ ಸಿಬ್ಬಂದಿ, ಅಧಿಕಾರಿಗಳು ಜನರಿಗೆ ದವಸ– ಧಾನ್ಯ, ಅಗತ್ಯ ವಸ್ತುಗಳನ್ನು ವಿತರಿಸಿದರು.</p>.<p>ಅಲೆಮಾರಿಗಳ ಸಮಸ್ಯೆ ಆಲಿಸಿದ ಅಲೆಮಾರಿ ಬುಡಕಟ್ಟು ಮಹಾ ಸಭಾದ ರಾಜ್ಯ ಸಮಿತಿ ಸದಸ್ಯರಾದ ಚಿತ್ರದುರ್ಗದ ಸಚಿನ್ ಹಾಗೂ ಎಚ್.ಡಿ.ಪುರದ ಜಯಶೀಲಾ ವಿಜಯ್ ಚಿತ್ರಹಳ್ಳಿ,‘ಈಗಾಗಲೇ ತಾಲ್ಲೂಕು ಹಾಗೂ ಜಿಲ್ಲಾಡಳಿತಗಳಿಂದ ನೆರವು ನೀಡಲಾಗಿದೆ. ಮುಂದೆಯೂ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು’ ಎಂದರು.</p>.<p>ರಾಮಗಿರಿಯ ಕಾಲೊನಿಯ 60 ಕುಟುಂಬಗಳಿಗೆ ಪಟ್ಟಣದ ಪ್ರಸನ್ನ ಗಣಪತಿ ಟ್ರಸ್ಟ್ನಿಂದ ಅಕ್ಕಿ, ಬೇಳೆ, ಸಕ್ಕರೆ, ಗೋಧಿಹಿಟ್ಟು, ಕಾಫಿಪುಡಿ, ಸಾಂಬರ್ ಪುಡಿ, ಕಾರದಪುಡಿ, ಅರಿಶಿಣ ಪುಡಿ, ಪೇಸ್ಟ್ ಮತ್ತಿತರ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.</p>.<p>ಪ್ರಸನ್ನ ಗಣಪತಿ ದೇವಸ್ಥಾನ ಟ್ರಸ್ಟ್ನ ನಟರಾಜ್ ಆಚಾರ್, ಎಚ್.ಸಿ.ರಮೇಶ್. ವಿ.ನಟರಾಜ್, ರಾಘವೇಂದ್ರ ನಾಯಕ, ಬಿ.ಎನ್. ಪ್ರಶಾಂತ್ ಕುಮಾರ್, ಎಸ್. ವೇದಮೂರ್ತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>