ಗ್ರಾಮದಲ್ಲಿ ಖಾತ್ರಿ ಯೋಜನೆಯಲ್ಲಿ ಮಾಡಿರುವ ಕಾಮಗಾರಿಯೊಂದಕ್ಕೆ ಬಿಲ್ ನೀಡಲು ಸತಾಯಿಸಲಾಗುತ್ತಿದೆ ಎಂದು ಸದಸ್ಯ ಕುಮಾರ್ ಪ್ರಶ್ನೆ ಮಾಡಿದಾಗ, ಅಧಿಕಾರಿಯು ಪಿಡಿಒಗೆ ಇವರ ಸದಸ್ಯತ್ವ ರದ್ದು ಮಾಡಲು ಪತ್ರ ಬರೆಯುವಂತೆ ಹೇಳುತ್ತಾರೆ. ಆಗ ಸದಸ್ಯ ಕುಮಾರ್ ಏರುಧ್ವನಿಯಲ್ಲಿ ‘ರದ್ದು ಮಾಡಲು ನೀವ್ಯಾರು’ ಎಂದು ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಳ್ಳುವುದು ವಿಡಿಯೊದಲ್ಲಿದೆ.