<p>ಧರ್ಮಪುರ: ಮನುಷ್ಯ ದುರಾಸೆಗೆ ಒಳಗಾಗಿ ಸುತ್ತಮುತ್ತಲಿನ ಗಿಡ ಮರಗಳನ್ನು ಕಡಿಯುವುದರ ಮೂಲಕ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಇದರಿಂದ ನಾವು ಕಳೆದ ವರ್ಷ ಭೀಕರ ಬರಗಾಲಕ್ಕೆ ತುತ್ತಾಗಬೇಕಾಯಿತು ಎಂದು ಸಿಪಿಐ ಷಣ್ಮುಖಪ್ಪ ತಿಳಿಸಿದರು.</p>.<p>ಸಮೀಪದ ಅಬ್ಬಿನಹೊಳೆ ಪೊಲೀಸ್ ಠಾಣೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬುಧವಾರ ಗಿಡ ನೆಟ್ಟು ನಂತರ ಅವರು ಮಾತನಾಡಿದರು.</p>.<p>ದಿನೇ ದಿನೇ ಕಾಡು ನಾಶವಾಗುತ್ತಿದ್ದು, ಪ್ರಾಕೃತಿಕ ವಿಕೋಪಗಳಿಗೆ ಜೀವ ಸಂಕುಲ ಬಲಿಯಾಗುತ್ತಿದೆ. ಅದಕ್ಕಾಗಿ ಜಾಗತಿಕ ತಾಪಮಾನ ತಗ್ಗಿಸಲು ಹೆಚ್ಚು ಹೆಚ್ಚು ಮರಗಿಡಗಳನ್ನು ಬೆಳಸಬೇಕೆಂದು ಸಲಹೆ ನೀಡಿದರು.</p>.<p>‘ಈ ವರ್ಷ ದೆಹಲಿಯಂತ ನಗರಗಳಲ್ಲಿ 53 ಡಿಗ್ರಿ ಉಷ್ಣಾಂಶವಿತ್ತು. ಇದರಿಂದ ವೃದ್ಧರು ಮತ್ತು ಮಕ್ಕಳು ಕಷ್ಟ ಅನುಭವಿಸಬೇಕಾಯಿತು. ಅದಕ್ಕಾಗಿ ಕಾಡು ಬೆಳಸಿ, ನಾಡು ಉಳಿಸಬೇಕು’ ಎಂದು ಪಿಎಸ್ಐ ಬಾಹುಬಲಿ ಎಂ.ಪಡನಾಡ ಹೇಳಿದರು.</p>.<p>ಎಎಸ್ಐ ತಿಪ್ಪೇಸ್ವಾಮಿ, ವೆಂಕಟೇಶ್, ನಾಗರಾಜ, ಶ್ರೀನಿವಾಸ್, ಕುಮಾರ್, ಗಗನ, ರಸೂಲ್, ನಿಂಗಣ್ಣ, ರುದ್ರೇಶ್ ಮತ್ತು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧರ್ಮಪುರ: ಮನುಷ್ಯ ದುರಾಸೆಗೆ ಒಳಗಾಗಿ ಸುತ್ತಮುತ್ತಲಿನ ಗಿಡ ಮರಗಳನ್ನು ಕಡಿಯುವುದರ ಮೂಲಕ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಇದರಿಂದ ನಾವು ಕಳೆದ ವರ್ಷ ಭೀಕರ ಬರಗಾಲಕ್ಕೆ ತುತ್ತಾಗಬೇಕಾಯಿತು ಎಂದು ಸಿಪಿಐ ಷಣ್ಮುಖಪ್ಪ ತಿಳಿಸಿದರು.</p>.<p>ಸಮೀಪದ ಅಬ್ಬಿನಹೊಳೆ ಪೊಲೀಸ್ ಠಾಣೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬುಧವಾರ ಗಿಡ ನೆಟ್ಟು ನಂತರ ಅವರು ಮಾತನಾಡಿದರು.</p>.<p>ದಿನೇ ದಿನೇ ಕಾಡು ನಾಶವಾಗುತ್ತಿದ್ದು, ಪ್ರಾಕೃತಿಕ ವಿಕೋಪಗಳಿಗೆ ಜೀವ ಸಂಕುಲ ಬಲಿಯಾಗುತ್ತಿದೆ. ಅದಕ್ಕಾಗಿ ಜಾಗತಿಕ ತಾಪಮಾನ ತಗ್ಗಿಸಲು ಹೆಚ್ಚು ಹೆಚ್ಚು ಮರಗಿಡಗಳನ್ನು ಬೆಳಸಬೇಕೆಂದು ಸಲಹೆ ನೀಡಿದರು.</p>.<p>‘ಈ ವರ್ಷ ದೆಹಲಿಯಂತ ನಗರಗಳಲ್ಲಿ 53 ಡಿಗ್ರಿ ಉಷ್ಣಾಂಶವಿತ್ತು. ಇದರಿಂದ ವೃದ್ಧರು ಮತ್ತು ಮಕ್ಕಳು ಕಷ್ಟ ಅನುಭವಿಸಬೇಕಾಯಿತು. ಅದಕ್ಕಾಗಿ ಕಾಡು ಬೆಳಸಿ, ನಾಡು ಉಳಿಸಬೇಕು’ ಎಂದು ಪಿಎಸ್ಐ ಬಾಹುಬಲಿ ಎಂ.ಪಡನಾಡ ಹೇಳಿದರು.</p>.<p>ಎಎಸ್ಐ ತಿಪ್ಪೇಸ್ವಾಮಿ, ವೆಂಕಟೇಶ್, ನಾಗರಾಜ, ಶ್ರೀನಿವಾಸ್, ಕುಮಾರ್, ಗಗನ, ರಸೂಲ್, ನಿಂಗಣ್ಣ, ರುದ್ರೇಶ್ ಮತ್ತು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>