‘ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗಲು ಸಾಧ್ಯವಿಲ್ಲ. ಆದ್ದರಿಂದ ಖಾಸಗಿ ಉದ್ಯೋಗ ಕೊಡಿಸುವ ಪ್ರಯತ್ನ ಹೆಚ್ಚಾಗಬೇಕು’ ಎಂದ ಜಿಲ್ಲಾಧಿಕಾರಿ, ‘ನೋಡಿ ನೀವು ಕಳೆದ ಬಾರಿ ತೋರಿಸಿದ ಅಂಕಿ-ಅಂಶವನ್ನೇ ಈ ಬಾರಿಯ ಸಭೆಗೂ ನೀಡಿದ್ದೀರಾ. ಅನೇಕ ವರ್ಷಗಳಿಂದ ಅದೇ ಮಾಹಿತಿ ನೀಡುತ್ತಿದ್ದೀರಿ. ಪ್ರಗತಿ ತೋರಿಸದೇ ಇದ್ದರೆ ಸಭೆ ಏಕೆ ಮಾಡಬೇಕು’ ಎಂದು ಪ್ರಶ್ನಿಸಿದರು.