<p><strong>ಚಿತ್ರದುರ್ಗ: </strong>ಯೋಜನೆ ಸಿದ್ಧಪಡಿಸಿದ್ದರೆ ನಿಮ್ಮ ಬಳಿಯೇ ಇಟ್ಟುಕೊಳ್ಳಿ. ಅದನ್ನು ನನಗೆ ತೋರಿಸುವ ಅಗತ್ಯವಿಲ್ಲ. ನಿಮ್ಮ ಪ್ರಗತಿಯನ್ನು ತೋರಿಸಿ. ಸುಮ್ಮನೆ ಸಮಯ ವ್ಯರ್ಥ ಮಾಡಬೇಡಿ. ನನಗೆ ಬೇಕಾದಷ್ಟು ಕೆಲಸಗಳಿವೆ...</p>.<p>ಗುರುವಾರ ನಡೆದ ಜಿಲ್ಲಾ ಕೌಶಲ ಮಿಷನ್ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ,ಉದ್ಯೋಗ ವಿನಿಮಯಕೇಂದ್ರದ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಪರಿ ಇದು.</p>.<p>‘ಕೌಶಲ ಪಡೆಯುವ ತವಕ ಇದ್ದವರು ನೋಂದಣಿ ಮಾಡಿಕೊಳ್ಳಬೇಕು. ಅಂಥವರಿಗೆ ಸೂಕ್ತ ತರಬೇತಿ ನೀಡಿ ವಿದ್ಯಾರ್ಹತೆ, ಕೌಶಲಕ್ಕೆ ಅನುಗುಣವಾಗಿ ಉದ್ಯೋಗ ಕೊಡಿಸುವ ಕೆಲಸವಾಗಬೇಕು. ಈ ಮಾರ್ಗವನ್ನು ಸರಿಯಾಗಿ ಅನುಸರಿಸುತ್ತಿದ್ದರೆ ಮಾಹಿತಿ ನೀಡಿ’ ಎಂದು ಕೇಳಿದರು.</p>.<p>‘ನೋಂದಣಿ ಮಾಡಿಕೊಂಡು ತರಬೇತಿ ನೀಡುತ್ತಿದ್ದೇವೆ. ಆದರೆ, ಬಹುತೇಕರು ಸರ್ಕಾರಿ ಉದ್ಯೋಗ ಬೇಕು ಎನ್ನುತ್ತಾರೆ. ಖಾಸಗಿ ಉದ್ಯೋಗ ಕೊಡಿಸಿದರೆ ಹೋಗಲು ಹಿಂದೇಟು ಹಾಕುತ್ತಾರೆ’ ಎಂದು ಉದ್ಯೋಗ ವಿನಿಯಮ ಕೇಂದ್ರದ ಅಧಿಕಾರಿಗಳು ಸಭೆಗೆ ತಿಳಿಸಿದರು.</p>.<p>‘ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗಲು ಸಾಧ್ಯವಿಲ್ಲ. ಆದ್ದರಿಂದ ಖಾಸಗಿ ಉದ್ಯೋಗ ಕೊಡಿಸುವ ಪ್ರಯತ್ನ ಹೆಚ್ಚಾಗಬೇಕು’ ಎಂದ ಜಿಲ್ಲಾಧಿಕಾರಿ, ‘ನೋಡಿ ನೀವು ಕಳೆದ ಬಾರಿ ತೋರಿಸಿದ ಅಂಕಿ-ಅಂಶವನ್ನೇ ಈ ಬಾರಿಯ ಸಭೆಗೂ ನೀಡಿದ್ದೀರಾ. ಅನೇಕ ವರ್ಷಗಳಿಂದ ಅದೇ ಮಾಹಿತಿ ನೀಡುತ್ತಿದ್ದೀರಿ. ಪ್ರಗತಿ ತೋರಿಸದೇ ಇದ್ದರೆ ಸಭೆ ಏಕೆ ಮಾಡಬೇಕು’ ಎಂದು ಪ್ರಶ್ನಿಸಿದರು.</p>.<p>‘ಉದ್ಯೋಗದ ಹಂಬಲ ಇರುವವರಿಗೆ ಮಾತ್ರ ಅವಕಾಶ ನೀಡಿ. ಜಿಲ್ಲೆಯಲ್ಲಿ ಮಾನ್ಯತೆ ಪಡೆದ ತರಬೇತಿ ಸಂಸ್ಥೆಗಳು ಎಷ್ಟಿವೆ ಎಂಬುದನ್ನು ಗುರುತಿಸಿ. ಅವು ಅಧಿಕೃತವಾಗಿ ನೋಂದಣಿ ಆಗಿವೆಯೇ ಎಂಬ ಮಾಹಿತಿ ಕಲೆಹಾಕಿ’ ಎಂದು ಸೂಚನೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ: </strong>ಯೋಜನೆ ಸಿದ್ಧಪಡಿಸಿದ್ದರೆ ನಿಮ್ಮ ಬಳಿಯೇ ಇಟ್ಟುಕೊಳ್ಳಿ. ಅದನ್ನು ನನಗೆ ತೋರಿಸುವ ಅಗತ್ಯವಿಲ್ಲ. ನಿಮ್ಮ ಪ್ರಗತಿಯನ್ನು ತೋರಿಸಿ. ಸುಮ್ಮನೆ ಸಮಯ ವ್ಯರ್ಥ ಮಾಡಬೇಡಿ. ನನಗೆ ಬೇಕಾದಷ್ಟು ಕೆಲಸಗಳಿವೆ...</p>.<p>ಗುರುವಾರ ನಡೆದ ಜಿಲ್ಲಾ ಕೌಶಲ ಮಿಷನ್ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ,ಉದ್ಯೋಗ ವಿನಿಮಯಕೇಂದ್ರದ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಪರಿ ಇದು.</p>.<p>‘ಕೌಶಲ ಪಡೆಯುವ ತವಕ ಇದ್ದವರು ನೋಂದಣಿ ಮಾಡಿಕೊಳ್ಳಬೇಕು. ಅಂಥವರಿಗೆ ಸೂಕ್ತ ತರಬೇತಿ ನೀಡಿ ವಿದ್ಯಾರ್ಹತೆ, ಕೌಶಲಕ್ಕೆ ಅನುಗುಣವಾಗಿ ಉದ್ಯೋಗ ಕೊಡಿಸುವ ಕೆಲಸವಾಗಬೇಕು. ಈ ಮಾರ್ಗವನ್ನು ಸರಿಯಾಗಿ ಅನುಸರಿಸುತ್ತಿದ್ದರೆ ಮಾಹಿತಿ ನೀಡಿ’ ಎಂದು ಕೇಳಿದರು.</p>.<p>‘ನೋಂದಣಿ ಮಾಡಿಕೊಂಡು ತರಬೇತಿ ನೀಡುತ್ತಿದ್ದೇವೆ. ಆದರೆ, ಬಹುತೇಕರು ಸರ್ಕಾರಿ ಉದ್ಯೋಗ ಬೇಕು ಎನ್ನುತ್ತಾರೆ. ಖಾಸಗಿ ಉದ್ಯೋಗ ಕೊಡಿಸಿದರೆ ಹೋಗಲು ಹಿಂದೇಟು ಹಾಕುತ್ತಾರೆ’ ಎಂದು ಉದ್ಯೋಗ ವಿನಿಯಮ ಕೇಂದ್ರದ ಅಧಿಕಾರಿಗಳು ಸಭೆಗೆ ತಿಳಿಸಿದರು.</p>.<p>‘ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗಲು ಸಾಧ್ಯವಿಲ್ಲ. ಆದ್ದರಿಂದ ಖಾಸಗಿ ಉದ್ಯೋಗ ಕೊಡಿಸುವ ಪ್ರಯತ್ನ ಹೆಚ್ಚಾಗಬೇಕು’ ಎಂದ ಜಿಲ್ಲಾಧಿಕಾರಿ, ‘ನೋಡಿ ನೀವು ಕಳೆದ ಬಾರಿ ತೋರಿಸಿದ ಅಂಕಿ-ಅಂಶವನ್ನೇ ಈ ಬಾರಿಯ ಸಭೆಗೂ ನೀಡಿದ್ದೀರಾ. ಅನೇಕ ವರ್ಷಗಳಿಂದ ಅದೇ ಮಾಹಿತಿ ನೀಡುತ್ತಿದ್ದೀರಿ. ಪ್ರಗತಿ ತೋರಿಸದೇ ಇದ್ದರೆ ಸಭೆ ಏಕೆ ಮಾಡಬೇಕು’ ಎಂದು ಪ್ರಶ್ನಿಸಿದರು.</p>.<p>‘ಉದ್ಯೋಗದ ಹಂಬಲ ಇರುವವರಿಗೆ ಮಾತ್ರ ಅವಕಾಶ ನೀಡಿ. ಜಿಲ್ಲೆಯಲ್ಲಿ ಮಾನ್ಯತೆ ಪಡೆದ ತರಬೇತಿ ಸಂಸ್ಥೆಗಳು ಎಷ್ಟಿವೆ ಎಂಬುದನ್ನು ಗುರುತಿಸಿ. ಅವು ಅಧಿಕೃತವಾಗಿ ನೋಂದಣಿ ಆಗಿವೆಯೇ ಎಂಬ ಮಾಹಿತಿ ಕಲೆಹಾಕಿ’ ಎಂದು ಸೂಚನೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>