ಯುವತಿಯರು ಈ ರೀತಿ ಹೂವನ್ನು ತಂದು ಕೊಡುವುದರಿಂದ ಮುಂದಿನ ದಿನಗಳಲ್ಲಿ ಒಳ್ಳೆಯ ವರ ಸಿಗುತ್ತಾನೆ. ಅವರ ಜೀವನ ಉತ್ತಮವಾಗಿರುತ್ತದೆ ಎಂಬುದು ನಂಬಿಕೆ. ಹೀಗಾಗಿ, ಗ್ರಾಮದ ಜನರು ಯಾವುದೇ ನಗರ, ಪಟ್ಟಣಗಳಲ್ಲಿ ಇದ್ದರೂ, ದೀಪಾವಳಿಗೆ ಕುಟುಂಬದವರೊಂದಿಗೆ ಬಂದು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಗ್ರಾಮದ ನಾಯಕರಾದ ಪರಮೇಶ್ವರನಾಯ್ಕ್, ಮೂರ್ತಿನಾಯ್ಕ, ರಾಜಾನಾಯ್ಕ್, ಕಾರಬಾರಿಗಳಾದ ಮಂಜಾನಾಯ್ಕ್, ಲೋಕೇಶ ನಾಯ್ಕ್, ಬಿ. ದುರ್ಗ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜಿಬಾಯಿ ಸುರೇಶ್, ಸುಧಾ ಚಂದ್ರಶೇಖರ್, ಗೋವಿಂದನಾಯ್ಕ್, ತಿಪ್ಪೇಸ್ವಾಮಿ ನಾಯ್ಕ್, ರಾಜಾನಾಯ್ಕ್, ಶೃತಿಕುಮಾರ್ ನಾಯ್ಕ್ ಮಾಹಿತಿ ನೀಡಿದರು.