<p><strong>ಭರಮಸಾಗರ</strong>: ದೀಪಾವಳಿಯ ಅಂಗವಾಗಿ ಆಚರಿಸುವ ಕೇದಾರ ಗೌರಿ ಪೂಜೆ ದೀಪಾವಳಿ ಅಮಾವಾಸ್ಯೆಯಾದ ಗುರುವಾರದಿಂದ ಆರಂಭವಾಯಿತು.</p>.<p>ಇಲ್ಲಿನ ಬಿಚ್ಚುಗತ್ತಿ ಭರಮಣ್ಣ ನಾಯಕ ದೊಡ್ಡಕೆರೆಯಿಂದ ಗಂಗಾಪೂಜೆ ಮಾಡಿಕೊಂಡು ಗಂಗೆಯನ್ನು ಕಳಸದಲ್ಲಿ ತಂದು ವಿಶೇಷವಾಗಿ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಗಂಗೆಯನ್ನು ತಂದಾಗ ಮನೆಯ ಮಹಿಳೆಯರು ಓಕಳಿ ಬೆಳಗಿ ಆಹ್ವಾನಿಸಿದರು. ಮನೆಯ ಹಿರಿಯರ ಕಾರ್ಯದೊಂದಿಗೆ ಪೂಜೆ ಆರಂಭಗೊಂಡಿತು.</p>.<p>ಕರಿನಾಗಶೆಟ್ರು, ಕಾಡೇಹಳ್ಳಿ, ಮರಿಬೆಶೆಟ್ರು, ಬಸೆಟ್ರು, ತುರುವನೂರು, ಅಮಕುಂಡಿ, ಹುಬ್ಬಳ್ಳಿ ವಂಶದ ಕುಟುಂಬ ಹಾಗೂ ಬಣಜಿಗ ವೀರಶೈವ ಲಿಂಗಾಯತ ಜನಾಂಗದ ಕುಟುಂಬಗಳಲ್ಲಿ ಆಚರಣೆಯಲ್ಲಿ ಬಂದಿರುವ ಈ ಪೂಜೆಯನ್ನು ಭಕ್ತಿಯಿಂದ ಆಚರಿಸಲಾಗುತ್ತಿದೆ.</p>.<p>ಹಬ್ಬದ ಅಂಗವಾಗಿಪಟ್ಟಣದ ತುಂಬಾ ತಳಿರು ತೋರಣ, ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು. ಮನೆಯ ಮುಂದೆ ಕಲಾತ್ಮಕ ರಂಗೋಲಿ ಹಾಕಿ ಹೊಸಬಟ್ಟೆ ತೊಟ್ಟು ಕೇದಾರ ಗೌರಿ ಪ್ರತಿಷ್ಟಾಪಿಸಲ್ಪಟ್ಟ ಮನೆಗೆ ಬಾಗಿನ ಹಿಡಿದು ಪೂಜೆ ಸಲ್ಲಿಸಲು ಕುಟುಂಬಸ್ತರು ಹೋಗುತ್ತಿರುವುದು ಕಂಡುಬಂತು.</p>.<p>ಶನಿವಾರ ಪೂಜೆ ಸಂಪನ್ನಗೊಳ್ಳಲಿದ್ದು ದೊಡ್ಡಪೇಟೆಯಲ್ಲಿ ಮೆರವಣಿಗೆ ಮೂಲಕ ದೊಡ್ಡಕೆರೆಯಲ್ಲಿ ವಿಸರ್ಜಿಸಲಾಗುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭರಮಸಾಗರ</strong>: ದೀಪಾವಳಿಯ ಅಂಗವಾಗಿ ಆಚರಿಸುವ ಕೇದಾರ ಗೌರಿ ಪೂಜೆ ದೀಪಾವಳಿ ಅಮಾವಾಸ್ಯೆಯಾದ ಗುರುವಾರದಿಂದ ಆರಂಭವಾಯಿತು.</p>.<p>ಇಲ್ಲಿನ ಬಿಚ್ಚುಗತ್ತಿ ಭರಮಣ್ಣ ನಾಯಕ ದೊಡ್ಡಕೆರೆಯಿಂದ ಗಂಗಾಪೂಜೆ ಮಾಡಿಕೊಂಡು ಗಂಗೆಯನ್ನು ಕಳಸದಲ್ಲಿ ತಂದು ವಿಶೇಷವಾಗಿ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಗಂಗೆಯನ್ನು ತಂದಾಗ ಮನೆಯ ಮಹಿಳೆಯರು ಓಕಳಿ ಬೆಳಗಿ ಆಹ್ವಾನಿಸಿದರು. ಮನೆಯ ಹಿರಿಯರ ಕಾರ್ಯದೊಂದಿಗೆ ಪೂಜೆ ಆರಂಭಗೊಂಡಿತು.</p>.<p>ಕರಿನಾಗಶೆಟ್ರು, ಕಾಡೇಹಳ್ಳಿ, ಮರಿಬೆಶೆಟ್ರು, ಬಸೆಟ್ರು, ತುರುವನೂರು, ಅಮಕುಂಡಿ, ಹುಬ್ಬಳ್ಳಿ ವಂಶದ ಕುಟುಂಬ ಹಾಗೂ ಬಣಜಿಗ ವೀರಶೈವ ಲಿಂಗಾಯತ ಜನಾಂಗದ ಕುಟುಂಬಗಳಲ್ಲಿ ಆಚರಣೆಯಲ್ಲಿ ಬಂದಿರುವ ಈ ಪೂಜೆಯನ್ನು ಭಕ್ತಿಯಿಂದ ಆಚರಿಸಲಾಗುತ್ತಿದೆ.</p>.<p>ಹಬ್ಬದ ಅಂಗವಾಗಿಪಟ್ಟಣದ ತುಂಬಾ ತಳಿರು ತೋರಣ, ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು. ಮನೆಯ ಮುಂದೆ ಕಲಾತ್ಮಕ ರಂಗೋಲಿ ಹಾಕಿ ಹೊಸಬಟ್ಟೆ ತೊಟ್ಟು ಕೇದಾರ ಗೌರಿ ಪ್ರತಿಷ್ಟಾಪಿಸಲ್ಪಟ್ಟ ಮನೆಗೆ ಬಾಗಿನ ಹಿಡಿದು ಪೂಜೆ ಸಲ್ಲಿಸಲು ಕುಟುಂಬಸ್ತರು ಹೋಗುತ್ತಿರುವುದು ಕಂಡುಬಂತು.</p>.<p>ಶನಿವಾರ ಪೂಜೆ ಸಂಪನ್ನಗೊಳ್ಳಲಿದ್ದು ದೊಡ್ಡಪೇಟೆಯಲ್ಲಿ ಮೆರವಣಿಗೆ ಮೂಲಕ ದೊಡ್ಡಕೆರೆಯಲ್ಲಿ ವಿಸರ್ಜಿಸಲಾಗುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>