<p><strong>ಹಿರಿಯೂರು:</strong> ನಗರದ ದುರ್ಗಮ್ಮ ದೇವಸ್ಥಾನದ ರಸ್ತೆಯಲ್ಲಿ ಬುಧವಾರ ಮನೆಯಕಾಂಪೌಂಡ್ನಲ್ಲಿ ಆಡುತ್ತಿದ್ದ ಮಗುವಿನ ಮೇಲೆ ನಾಯಿ ದಾಳಿ ಮಾಡಿದ್ದು,ಸೈಯದ್ ರಹಮತ್ ಉಲ್ಲಾ ಅವರ ಮಗ ಮೂರು ವರ್ಷದ ಸೈಯದ್ ಜುಹೇರ್ ಗಂಭೀರವಾಗಿ ಗಾಯಗೊಂಡಿದ್ದಾನೆ. </p>.<p>ದಾರಿಹೋಕರು ಕಲ್ಲು ತೆಗೆದುಕೊಂಡ ಕಾರಣ ಬಿಟ್ಟು ಓಡಿ ಹೋಗಿದೆ ಎಂದು ಸ್ಥಳೀಯ ನಿವಾಸಿ ಸಾದತ್ ಉಲ್ಲಾ ತಿಳಿಸಿದರು.</p>.<p>ಯಾವುದೋ ಹಳ್ಳಿಯಿಂದ ದೇವಸ್ಥಾನಕ್ಕೆ ಮನೆಯ ಹಿರಿಯರ ಜತೆ ಬರುತ್ತಿದ್ದ ಮತ್ತೊಬ್ಬ ಬಾಲಕನಿಗೂ ಅದೇ ನಾಯಿ ಕಚ್ಚಿದೆ. ಜತೆಯಲ್ಲಿದ್ದ ಹಿರಿಯರ ಪಂಚೆಗೆ ಬಾಯಿ ಹಾಕುತ್ತಿದ್ದಂತೆ ಸುತ್ತಮುತ್ತಲ ಜನ ಕಲ್ಲು ದೊಣ್ಣೆಗಳಿಂದ ಬಡಿದು ನಾಯಿಯನ್ನು ಸಾಯಿಸಿದ್ದಾರೆ ಎಂದು ಅವರು ಹೇಳಿದರು.</p>.<p>‘ನಗರಸಭೆಯಲ್ಲಿ ಈಚೆಗೆ ನಡೆದ ಅಧಿಕಾರಿಗಳ ಸಭೆಯಲ್ಲಿ ನಾಯಿಗಳ ಹಾವಳಿ ನಿಯಂತ್ರಿಸುವಂತೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದೆ. ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಗಮನಕ್ಕೂ ತಂದಿದ್ದೆ. ಆದರೆ ನಗರಸಭೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈಗಲಾದರೂ ಬೀದಿ ನಾಯಿಗಳನ್ನು ನಿಯಂತ್ರಿಸದೇ ಹೋದಲ್ಲಿ ಸದಸ್ಯರ ಜತೆ ನಗರಸಭೆ ಎದುರು ಧರಣಿ ನಡೆಸುತ್ತೇನೆ’ ಎಂದು ವಾರ್ಡ್ ಸದಸ್ಯೆ ಷಂಶುನ್ನೀಸಾ ಎಚ್ಚರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರಿಯೂರು:</strong> ನಗರದ ದುರ್ಗಮ್ಮ ದೇವಸ್ಥಾನದ ರಸ್ತೆಯಲ್ಲಿ ಬುಧವಾರ ಮನೆಯಕಾಂಪೌಂಡ್ನಲ್ಲಿ ಆಡುತ್ತಿದ್ದ ಮಗುವಿನ ಮೇಲೆ ನಾಯಿ ದಾಳಿ ಮಾಡಿದ್ದು,ಸೈಯದ್ ರಹಮತ್ ಉಲ್ಲಾ ಅವರ ಮಗ ಮೂರು ವರ್ಷದ ಸೈಯದ್ ಜುಹೇರ್ ಗಂಭೀರವಾಗಿ ಗಾಯಗೊಂಡಿದ್ದಾನೆ. </p>.<p>ದಾರಿಹೋಕರು ಕಲ್ಲು ತೆಗೆದುಕೊಂಡ ಕಾರಣ ಬಿಟ್ಟು ಓಡಿ ಹೋಗಿದೆ ಎಂದು ಸ್ಥಳೀಯ ನಿವಾಸಿ ಸಾದತ್ ಉಲ್ಲಾ ತಿಳಿಸಿದರು.</p>.<p>ಯಾವುದೋ ಹಳ್ಳಿಯಿಂದ ದೇವಸ್ಥಾನಕ್ಕೆ ಮನೆಯ ಹಿರಿಯರ ಜತೆ ಬರುತ್ತಿದ್ದ ಮತ್ತೊಬ್ಬ ಬಾಲಕನಿಗೂ ಅದೇ ನಾಯಿ ಕಚ್ಚಿದೆ. ಜತೆಯಲ್ಲಿದ್ದ ಹಿರಿಯರ ಪಂಚೆಗೆ ಬಾಯಿ ಹಾಕುತ್ತಿದ್ದಂತೆ ಸುತ್ತಮುತ್ತಲ ಜನ ಕಲ್ಲು ದೊಣ್ಣೆಗಳಿಂದ ಬಡಿದು ನಾಯಿಯನ್ನು ಸಾಯಿಸಿದ್ದಾರೆ ಎಂದು ಅವರು ಹೇಳಿದರು.</p>.<p>‘ನಗರಸಭೆಯಲ್ಲಿ ಈಚೆಗೆ ನಡೆದ ಅಧಿಕಾರಿಗಳ ಸಭೆಯಲ್ಲಿ ನಾಯಿಗಳ ಹಾವಳಿ ನಿಯಂತ್ರಿಸುವಂತೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದೆ. ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಗಮನಕ್ಕೂ ತಂದಿದ್ದೆ. ಆದರೆ ನಗರಸಭೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈಗಲಾದರೂ ಬೀದಿ ನಾಯಿಗಳನ್ನು ನಿಯಂತ್ರಿಸದೇ ಹೋದಲ್ಲಿ ಸದಸ್ಯರ ಜತೆ ನಗರಸಭೆ ಎದುರು ಧರಣಿ ನಡೆಸುತ್ತೇನೆ’ ಎಂದು ವಾರ್ಡ್ ಸದಸ್ಯೆ ಷಂಶುನ್ನೀಸಾ ಎಚ್ಚರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>