ತಕ್ಷಣಕ್ಕೆ ಗಾಯತ್ರಿ ಅಥವಾ ವಾಣಿವಿಲಾಸದ ನೀರು ಕೊಡಲು ಆಗದು. ಶಾಶ್ವತ ನೀರಿನ ವ್ಯವಸ್ಥೆ ಆಗಲು ಎರಡು ವರ್ಷ ಬೇಕು. ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ 16 ಕೊಳವೆಬಾವಿ ಕೊರೆಯಿಸಲಾಗಿದೆ. ರೈತರ ಪಂಪ್ಸೆಟ್ಗಳಿಂದ ಬಾಡಿಗೆಗೆ ನೀರು ಪಡೆದು ವಿತರಿಸುತ್ತಿದ್ದೇವೆ. ದಿಂಡಾವರ ಗ್ರಾಮದಲ್ಲಿ 4 ಕೊಳವೆ ಬಾವಿ ಕೊರೆಯಿಸಿದ್ದು, ಒಂದರಲ್ಲಿ ಅರ್ಧ ಇಂಚು, ಮತ್ತೊಂದರಲ್ಲಿ ಒಂದಿಂಚು ನೀರು ಬರುತ್ತಿದ್ದು, ಅದು ಸಾಕಾಗುತ್ತಿಲ್ಲ. ಇಡೀ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂತರ್ಜಲ ಕುಸಿತದಿಂದ ನೀರು ಸಿಗುತ್ತಿಲ್ಲ. ಆದ ಪ್ರಯುಕ್ತ ಟ್ಯಾಂಕರ್ ಮೂಲಕ ತಕ್ಷಣ ನೀರು ಪೂರೈಸಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಇಒ ಸತೀಶ್ ಕುಮಾರ್ ಭರವಸೆ ನೀಡಿದರು.