‘ಕಸಬಾ, ರಾಮಗಿರಿ, ಬಿ.ದುರ್ಗ ಹೋಬಳಿಗಳಲ್ಲಿ ಮೆಕ್ಕೆಜೋಳ ತೆನೆಯೊಡೆದಿದ್ದು, ಕಾಳುಕಟ್ಟುವ ಹಂತದಲ್ಲಿದೆ. ಈ ಪ್ರದೇಶದ ಬೆಳೆಗೆಮಳೆ ಅಗತ್ಯವಾಗಿದ್ದು, ಒಂದುಬಾರಿ ಉತ್ತಮ ಮಳೆ ಬಂದರೆಹೆಚ್ಚು ಇಳುವರಿ ಬರಲಿದೆ. ತಾಳ್ಯ ಹೋಬಳಿಯ ಶಿವಗಂಗಾ, ಚಿತ್ರಹಳ್ಳಿ, ಟಿ.ನುಲೇನೂರು, ಬಿ.ಜಿ.ಹಳ್ಳಿ ಸುತ್ತಲಿನ ಪ್ರದೇಶದಲ್ಲಿ ಮೆಕ್ಕೆಜೋಳ ತಡವಾಗಿ ಬಿತ್ತನೆ ಆಗಿದ್ದರಿಂದ ಈಗ ತೆನೆ ಬಿಡುವ ಹಂತದಲ್ಲಿದೆ. ಈ ಭಾಗಕ್ಕೆ ಇನ್ನೂ ಎರಡು ಮಳೆ ಬೇಕಾಗುತ್ತದೆ. ತಾಲ್ಲೂಕಿನ ಎಲ್ಲಾ ಭಾಗದಲ್ಲೂ ಸಮೃದ್ಧವಾಗಿ ಮೆಕ್ಕೆಜೋಳ ಬೆಳೆದಿದ್ದು, ಹೆಚ್ಚು ಉತ್ಪಾದನೆ
ನಿರೀಕ್ಷೆ ಮಾಡಲಾಗಿದೆ’ ಎಂದು ಪ್ರಭಾರ ಸಹಾಯಕ ಕೃಷಿ ನಿರ್ದೇಶಕ ವಿ.ಸಿ. ಉಮೇಶ್ ಹೇಳಿದರು.