‘ಶ್ರೀರಾಂಪುರ 40 ಟನ್ ಹಾಗೂ ಬೆಲಗೂರು 40 ಟನ್ ಯೂರಿಯಾ ಬಂದಿದ್ದು, ಒಂದೇ ದಿನದಲ್ಲಿ ಖಾಲಿಯಾಗಿದೆ. ಯೂರಿಯಾಗೆ ಕೊರತೆಯಾಗುವುದಿಲ್ಲ. ಒಂದೆರಡು ದಿನಗಳಲ್ಲಿ ಮತ್ತೆ ಬರಲಿದೆ. ಮಳೆ ಬಂದರೆ ಯೂರಿಯಾಗೆ ಬೇಡಿಕೆ ಹೆಚ್ಚಾಗಲಿದೆ. ಒಬ್ಬ ರೈತರಿಗೆ ಗರಿಷ್ಠ 3 ಚೀಲ ವಿತರಿಸಲಾಗಿದೆ’ ಎಂದು ಕೃಷಿ ಅಧಿಕಾರಿ ಕರಿಬಸವಯ್ಯ ಮಾಹಿತಿ ನೀಡಿದರು.