<p><strong>ಶ್ರೀರಾಂಪುರ: </strong>ಹೋಬಳಿಯಾದ್ಯಂತ ಬಿತ್ತನೆಯಾಗಿದ್ದ ರಾಗಿ ಎಡೆಕುಂಟೆ ಹೊಡೆಯುವ ಹಂತಕ್ಕೆ ಬಂದಿದ್ದು, ರೈತರು ಶುಕ್ರವಾರ ಬೆಳಿಗ್ಗೆ ಯೂರಿಯಾ ಖರೀದಿಗೆ ಮುಗಿಬಿದ್ದರು.</p>.<p>ಯೂರಿಯಾ ಬಂದಿರುವ ಸುದ್ದಿ ತಿಳಿಯುತ್ತಿದ್ದಂತೆ ಶ್ರೀರಾಂಪುರ ಸೇರಿ ಸುತ್ತಲಿನ ಹಳ್ಳಿಗಳ ರೈತರು ಇಲ್ಲಿನ ಅಂಬೇಡ್ಕರ್ ಸರ್ಕಲ್ ಬಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಹಾಗೂ ಖಾಸಗಿ ಗೊಬ್ಬರದ ಅಂಗಡಿಗಳ ಮುಂದೆ ಜಮಾಯಿಸಿದರು.</p>.<p>‘ಒಂದು ಚೀಲ ಯೂರಿಯಾಗೆ ₹ 300 ಕೊಟ್ಟು ಖರೀದಿಸಿದ್ದೇವೆ. ಈಗಾಗಲೇ ರಾಗಿ ಬೆಳೆಗೆ ಒಂದೆರಡು ಬಾರಿ ಎಡೆಕುಂಟೆ ಹೊಡೆದಿದ್ದೇವೆ. ಶೀಘ್ರ ಮಳೆ ಬಂದರೆ ಈ ಬಾರಿ ಉತ್ತಮ ಫಸಲು ಬರುವುದರಲ್ಲಿ ಸಂದೇಹವಿಲ್ಲ’ ಎಂದು ರೈತ ಶಿವಣ್ಣ ಹೇಳಿದರು.</p>.<p>‘ಶ್ರೀರಾಂಪುರ 40 ಟನ್ ಹಾಗೂ ಬೆಲಗೂರು 40 ಟನ್ ಯೂರಿಯಾ ಬಂದಿದ್ದು, ಒಂದೇ ದಿನದಲ್ಲಿ ಖಾಲಿಯಾಗಿದೆ. ಯೂರಿಯಾಗೆ ಕೊರತೆಯಾಗುವುದಿಲ್ಲ. ಒಂದೆರಡು ದಿನಗಳಲ್ಲಿ ಮತ್ತೆ ಬರಲಿದೆ. ಮಳೆ ಬಂದರೆ ಯೂರಿಯಾಗೆ ಬೇಡಿಕೆ ಹೆಚ್ಚಾಗಲಿದೆ. ಒಬ್ಬ ರೈತರಿಗೆ ಗರಿಷ್ಠ 3 ಚೀಲ ವಿತರಿಸಲಾಗಿದೆ’ ಎಂದು ಕೃಷಿ ಅಧಿಕಾರಿ ಕರಿಬಸವಯ್ಯ ಮಾಹಿತಿ ನೀಡಿದರು.</p>.<p>ಹಳ್ಳಿಗಳಿಗೆ ಬಸ್ ವ್ಯವಸ್ಥೆ ಇಲ್ಲದಿದ್ದರಿಂದ ರೈತರು ಬೈಕ್, ಆಟೊಗಳಲ್ಲಿ ಯೂರಿಯಾ ಚೀಲಗಳನ್ನು ಹೊತ್ತೊಯ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀರಾಂಪುರ: </strong>ಹೋಬಳಿಯಾದ್ಯಂತ ಬಿತ್ತನೆಯಾಗಿದ್ದ ರಾಗಿ ಎಡೆಕುಂಟೆ ಹೊಡೆಯುವ ಹಂತಕ್ಕೆ ಬಂದಿದ್ದು, ರೈತರು ಶುಕ್ರವಾರ ಬೆಳಿಗ್ಗೆ ಯೂರಿಯಾ ಖರೀದಿಗೆ ಮುಗಿಬಿದ್ದರು.</p>.<p>ಯೂರಿಯಾ ಬಂದಿರುವ ಸುದ್ದಿ ತಿಳಿಯುತ್ತಿದ್ದಂತೆ ಶ್ರೀರಾಂಪುರ ಸೇರಿ ಸುತ್ತಲಿನ ಹಳ್ಳಿಗಳ ರೈತರು ಇಲ್ಲಿನ ಅಂಬೇಡ್ಕರ್ ಸರ್ಕಲ್ ಬಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಹಾಗೂ ಖಾಸಗಿ ಗೊಬ್ಬರದ ಅಂಗಡಿಗಳ ಮುಂದೆ ಜಮಾಯಿಸಿದರು.</p>.<p>‘ಒಂದು ಚೀಲ ಯೂರಿಯಾಗೆ ₹ 300 ಕೊಟ್ಟು ಖರೀದಿಸಿದ್ದೇವೆ. ಈಗಾಗಲೇ ರಾಗಿ ಬೆಳೆಗೆ ಒಂದೆರಡು ಬಾರಿ ಎಡೆಕುಂಟೆ ಹೊಡೆದಿದ್ದೇವೆ. ಶೀಘ್ರ ಮಳೆ ಬಂದರೆ ಈ ಬಾರಿ ಉತ್ತಮ ಫಸಲು ಬರುವುದರಲ್ಲಿ ಸಂದೇಹವಿಲ್ಲ’ ಎಂದು ರೈತ ಶಿವಣ್ಣ ಹೇಳಿದರು.</p>.<p>‘ಶ್ರೀರಾಂಪುರ 40 ಟನ್ ಹಾಗೂ ಬೆಲಗೂರು 40 ಟನ್ ಯೂರಿಯಾ ಬಂದಿದ್ದು, ಒಂದೇ ದಿನದಲ್ಲಿ ಖಾಲಿಯಾಗಿದೆ. ಯೂರಿಯಾಗೆ ಕೊರತೆಯಾಗುವುದಿಲ್ಲ. ಒಂದೆರಡು ದಿನಗಳಲ್ಲಿ ಮತ್ತೆ ಬರಲಿದೆ. ಮಳೆ ಬಂದರೆ ಯೂರಿಯಾಗೆ ಬೇಡಿಕೆ ಹೆಚ್ಚಾಗಲಿದೆ. ಒಬ್ಬ ರೈತರಿಗೆ ಗರಿಷ್ಠ 3 ಚೀಲ ವಿತರಿಸಲಾಗಿದೆ’ ಎಂದು ಕೃಷಿ ಅಧಿಕಾರಿ ಕರಿಬಸವಯ್ಯ ಮಾಹಿತಿ ನೀಡಿದರು.</p>.<p>ಹಳ್ಳಿಗಳಿಗೆ ಬಸ್ ವ್ಯವಸ್ಥೆ ಇಲ್ಲದಿದ್ದರಿಂದ ರೈತರು ಬೈಕ್, ಆಟೊಗಳಲ್ಲಿ ಯೂರಿಯಾ ಚೀಲಗಳನ್ನು ಹೊತ್ತೊಯ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>