ಚಿತ್ರದುರ್ಗ ಜಿಲ್ಲೆಯಲ್ಲಿ ಶೇಂಗಾ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಧರ್ಮಪುರ ಹೋಬಳಿ ಸಂಪೂರ್ಣ ಮಳೆಯಾಶ್ರಿತ ಖುಷ್ಕಿ ಭೂಮಿಯಾಗಿದ್ದು, ಶೇಂಗಾವೇ ಪ್ರಧಾನ ಬೆಳೆಯಾಗಿದೆ. ಎರಡು ವರ್ಷಗಳಿಂದ ಮಳೆ ಇಲ್ಲದೇ ಶೇಂಗಾ ಬೆಳೆ ಕೈಗೆ ಬಂದಿಲ್ಲ. ಈ ಬಾರಿ ಸುಮಾರು 17 ಸಾವಿರ ಹೆಕ್ಟೇರ್ನಲ್ಲಿ ಶೇಂಗಾ ಬಿತ್ತನೆಯಾಗುವ ನಿರೀಕ್ಷೆ ಇದೆ. ಕೊರೊನಾ ಲಾಕ್ಡೌನ್ ಸಮಸ್ಯೆಯಿಂದ ಬೆಂಗಳೂರು ಮತ್ತಿತರ ನಗರ ಪ್ರದೇಶಗಳಿಂದ ಊರುಗಳಿಗೆ ಬಂದಿರುವ ರೈತರು ಈಗ ಶೇಂಗಾ ಬೆಳೆಯಲು ಉತ್ಸುಕರಾಗಿದ್ದಾರೆ. ಆದರೆ, ಸರ್ಕಾರ ನಿಗದಿಪಡಿಸಿರುವ ಶೇಂಗಾ ದರ ಅವೈಜ್ಞಾನಿಕವಾಗಿದೆ ಎಂದು ರೈತ ಹರಿಯಬ್ಬೆ ಪರಮೇಶ್
ದೂರಿದ್ದಾರೆ.