<p><strong>ಸಿರಿಗೆರೆ</strong>: ಶುಕ್ರವಾರ ಸುರಿದ ಮಳೆಗೆ ಸಿರಿಗೆರೆ ಸಮೀಪದ ಶಾಂತಿವನ ಜಲಾಶಯ 3ನೇ ಬಾರಿ ತುಂಬಿ ಹರಿಯುತ್ತಿದ್ದು, ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವೀಕ್ಷಿಸಿದರು.</p>.<p>ತ್ರಿವೇಣಿ ಸಂಗಮದಂತೆ ಕಾಣುವ ಜಲಾಶಯದಿಂದ ನೀರು ಧುಮ್ಮಿಕ್ಕುವ ನೀರನ್ನು ನೋಡಲು ಸುತ್ತಮುತ್ತಲ ಗ್ರಾಮದ ಜನ ಸಾಗರದಂತೆ ಹರಿದು ಬರುತ್ತಿದ್ದಾರೆ. ಸಂಜೆಯ ವೇಳೆ ಹಕ್ಕಿಗಳ ಚಿಲಿಪಿಲಿಯ ನಿನಾದ ನೊಂದ ಮನಗಳಿಗೆ ಮುದ ನೀಡುತ್ತಿದೆ.</p>.<p>ಅಕ್ಟೋಬರ್ ತಿಂಗಳಿನಲ್ಲಿ ಗಾದ್ರಿಗುಡ್ಡ, ಪುಡಕಲಹಳ್ಳಿ ಗುಡ್ಡಗಳಿಗೆ ಸುರಿದ ಮಳೆಗೆ ಶಾಂತಿವನ ಜಲಾಶಯ ತುಂಬಿ ಹರಿದಿತ್ತು. ಆಗ ಎರಡು ಕ್ರಸ್ಟ್ಗೇಟ್ಗಳನ್ನು ತೆರೆಯಲಾಗಿತ್ತು. ಶನಿವಾರ ನಾಲ್ಕು ಕ್ರಸ್ಟ್ಗೇಟ್ ಮೂಲಕ ನೀರು ಹರಿಯುವ ದೃಶ್ಯ ಮನೋಹರವಾಗಿತ್ತು.</p>.<p>200 ಎಕರೆಗಿಂತ ಹೆಚ್ಚು ಜಮೀನಿನ ಮಧ್ಯಭಾಗದ ಜಲಾಶಯದಲ್ಲಿ ನೀರು ಸಂಗ್ರಹವಾಗುತ್ತಿದೆ. 6 ವರ್ಷಗಳ ನಂತರ ತುಂಬಿ ಹರಿದ ಜಲಾಶಯಕ್ಕೆ ಜನರು ತಂಡೋಪವಾಗಿ ಭೇಟಿ ನೀಡಿ ಮಕ್ಕಳ ಜೊತೆ ಫೋಟೋ ಕ್ಲಿಕ್ಕಿಸುವುದು ಕಂಡುಬಂತು.</p>.<p>ಶಾಂತಿವನ ಜಲಾಶಯ 35 ಅಡಿ ಆಳ ಇದ್ದು, ಹೆಚ್ಚಿನ ನೀರು ಸಂಗ್ರಹವಾಗಿದೆ. ನೀರು ಹರಿದು ಬರುವ ಜಾಗದಲ್ಲಿ ಸುಂದರ ನೀರಿನ ಕಾರಂಜಿ ಹಾಗೂ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.</p>.<p>ಅರಭಘಟ್ಟ ಸಮೀಪದ ಹಳ್ಳವೂ ತುಂಬಿ ಹರಿದಿದೆ. ದೊಡ್ಡಿಗನಾಳು ಹೊಸಟ್ಟಿ ಹಳ್ಳ, ಜಮ್ಮೇನಹಳ್ಳಿ ಬ್ಯಾಡರ<br />ಹಳ್ಳ, ಸೀಗೇಹಳ್ಳಿ ಹಳ್ಳಗಳು ತುಂಬಿದೆ.</p>.<p>ಗ್ರಾಮದ ಹೊಸಕೆರೆಯಲ್ಲಿ ಹೂಳೆತ್ತುವ ಕಾಮಗಾರಿ ನಡೆದಿತ್ತು. ಈ ಬಾರಿ ಉತ್ತಮ ನೀರು ಸಂಗ್ರಹವಾಗಿದೆ. ಬುಕ್ಕರಾಯನಕೆರೆ, ಗೌಡನಕೆರೆಗಳಿಗೆ ಪೈಪ್ಲೈನ್ ಕಾಮಗಾರಿ ನಡೆಯುತ್ತಿದ್ದು, ಮುಂದಿನ ದಿನಗಳಂದು ಕೆರೆತುಂಬಿಸುವ ಕಾರ್ಯಕ್ಕೆ ಸಹಕಾರಿಯಾಗಲಿದೆ ಎಂದು ಗ್ರಾಮದ ಹಿರಿಯರು ಹೇಳಿದರು.</p>.<p>ತರಳಬಾಳು ಶ್ರೀಗಳವ ಮಾರ್ಗದರ್ಶನದಲ್ಲಿ ಕೆರೆ ತುಂಬಿಸುವ ಕಾಯಕ ನಡೆಯುತ್ತಿದ್ದು ರೈತರ ಬವಣೆ ನೀಗುವ ಕಾಲ ಬಂದಿದೆ ಎಂದು ಕೆರೆ ಸಮಿತಿ ಅಧ್ಯಕ್ಷ ಚೌಲಿಹಳ್ಳಿ ಶಶಿಪಾಟೀಲ್ ಸಂತಸ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರಿಗೆರೆ</strong>: ಶುಕ್ರವಾರ ಸುರಿದ ಮಳೆಗೆ ಸಿರಿಗೆರೆ ಸಮೀಪದ ಶಾಂತಿವನ ಜಲಾಶಯ 3ನೇ ಬಾರಿ ತುಂಬಿ ಹರಿಯುತ್ತಿದ್ದು, ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವೀಕ್ಷಿಸಿದರು.</p>.<p>ತ್ರಿವೇಣಿ ಸಂಗಮದಂತೆ ಕಾಣುವ ಜಲಾಶಯದಿಂದ ನೀರು ಧುಮ್ಮಿಕ್ಕುವ ನೀರನ್ನು ನೋಡಲು ಸುತ್ತಮುತ್ತಲ ಗ್ರಾಮದ ಜನ ಸಾಗರದಂತೆ ಹರಿದು ಬರುತ್ತಿದ್ದಾರೆ. ಸಂಜೆಯ ವೇಳೆ ಹಕ್ಕಿಗಳ ಚಿಲಿಪಿಲಿಯ ನಿನಾದ ನೊಂದ ಮನಗಳಿಗೆ ಮುದ ನೀಡುತ್ತಿದೆ.</p>.<p>ಅಕ್ಟೋಬರ್ ತಿಂಗಳಿನಲ್ಲಿ ಗಾದ್ರಿಗುಡ್ಡ, ಪುಡಕಲಹಳ್ಳಿ ಗುಡ್ಡಗಳಿಗೆ ಸುರಿದ ಮಳೆಗೆ ಶಾಂತಿವನ ಜಲಾಶಯ ತುಂಬಿ ಹರಿದಿತ್ತು. ಆಗ ಎರಡು ಕ್ರಸ್ಟ್ಗೇಟ್ಗಳನ್ನು ತೆರೆಯಲಾಗಿತ್ತು. ಶನಿವಾರ ನಾಲ್ಕು ಕ್ರಸ್ಟ್ಗೇಟ್ ಮೂಲಕ ನೀರು ಹರಿಯುವ ದೃಶ್ಯ ಮನೋಹರವಾಗಿತ್ತು.</p>.<p>200 ಎಕರೆಗಿಂತ ಹೆಚ್ಚು ಜಮೀನಿನ ಮಧ್ಯಭಾಗದ ಜಲಾಶಯದಲ್ಲಿ ನೀರು ಸಂಗ್ರಹವಾಗುತ್ತಿದೆ. 6 ವರ್ಷಗಳ ನಂತರ ತುಂಬಿ ಹರಿದ ಜಲಾಶಯಕ್ಕೆ ಜನರು ತಂಡೋಪವಾಗಿ ಭೇಟಿ ನೀಡಿ ಮಕ್ಕಳ ಜೊತೆ ಫೋಟೋ ಕ್ಲಿಕ್ಕಿಸುವುದು ಕಂಡುಬಂತು.</p>.<p>ಶಾಂತಿವನ ಜಲಾಶಯ 35 ಅಡಿ ಆಳ ಇದ್ದು, ಹೆಚ್ಚಿನ ನೀರು ಸಂಗ್ರಹವಾಗಿದೆ. ನೀರು ಹರಿದು ಬರುವ ಜಾಗದಲ್ಲಿ ಸುಂದರ ನೀರಿನ ಕಾರಂಜಿ ಹಾಗೂ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.</p>.<p>ಅರಭಘಟ್ಟ ಸಮೀಪದ ಹಳ್ಳವೂ ತುಂಬಿ ಹರಿದಿದೆ. ದೊಡ್ಡಿಗನಾಳು ಹೊಸಟ್ಟಿ ಹಳ್ಳ, ಜಮ್ಮೇನಹಳ್ಳಿ ಬ್ಯಾಡರ<br />ಹಳ್ಳ, ಸೀಗೇಹಳ್ಳಿ ಹಳ್ಳಗಳು ತುಂಬಿದೆ.</p>.<p>ಗ್ರಾಮದ ಹೊಸಕೆರೆಯಲ್ಲಿ ಹೂಳೆತ್ತುವ ಕಾಮಗಾರಿ ನಡೆದಿತ್ತು. ಈ ಬಾರಿ ಉತ್ತಮ ನೀರು ಸಂಗ್ರಹವಾಗಿದೆ. ಬುಕ್ಕರಾಯನಕೆರೆ, ಗೌಡನಕೆರೆಗಳಿಗೆ ಪೈಪ್ಲೈನ್ ಕಾಮಗಾರಿ ನಡೆಯುತ್ತಿದ್ದು, ಮುಂದಿನ ದಿನಗಳಂದು ಕೆರೆತುಂಬಿಸುವ ಕಾರ್ಯಕ್ಕೆ ಸಹಕಾರಿಯಾಗಲಿದೆ ಎಂದು ಗ್ರಾಮದ ಹಿರಿಯರು ಹೇಳಿದರು.</p>.<p>ತರಳಬಾಳು ಶ್ರೀಗಳವ ಮಾರ್ಗದರ್ಶನದಲ್ಲಿ ಕೆರೆ ತುಂಬಿಸುವ ಕಾಯಕ ನಡೆಯುತ್ತಿದ್ದು ರೈತರ ಬವಣೆ ನೀಗುವ ಕಾಲ ಬಂದಿದೆ ಎಂದು ಕೆರೆ ಸಮಿತಿ ಅಧ್ಯಕ್ಷ ಚೌಲಿಹಳ್ಳಿ ಶಶಿಪಾಟೀಲ್ ಸಂತಸ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>