<p><strong>ಧರ್ಮಪುರ:</strong> ಸಮೀಪದ ಹರಿಯಬ್ಬೆ ಬಳಿ ಬೆಸ್ಕಾಂ ಸಿಬ್ಬಂದಿ ಜಂಗಲ್ ತೆಗೆಯುವಾಗ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ತಂತಿ ಮೇಲೆ ಕೊಂಬೆ ಬಿದ್ದ ಕಾರಣ ವಿದ್ಯುತ್ ಶಾರ್ಟ್ ಸರ್ಕೀಟ್ ಉಂಟಾಗಿ ಮನೆಯ ಮುಂದೆ ಬಿಸಿಲಿಗೆ ಹಾಕಿದ್ದ 9 ಕ್ವಿಂಟಲ್ ಬೀಜೋತ್ಪಾದನೆಯ ಹತ್ತಿ ಸಂಪೂರ್ಣ ಸುಟ್ಟು ಅಪಾರ ನಷ್ಟ ಉಂಟಾಗಿದೆ.</p>.<p>ಹರಿಯಬ್ಬೆ ರೈತ ಎಂಜಾರಪ್ಪ ಅವರು ಮೂರು ಎಕೆರೆ ಭೂಮಿಯಲ್ಲಿ ರಾಶಿ 555 ಕಂಪನಿಯ ಬೀಜೋತ್ಪಾದನೆಯ ಹತ್ತಿಯನ್ನು ಸಮೃದ್ಧವಾಗಿ ಬೆಳೆದಿದ್ದು ಮಂಗಳವಾರ ತಮ್ಮ ಮನೆಯ ಮುಂದೆ ಬಿಸಿಲಿಗೆ ಹಾಕಿದ್ದರು. </p>.<p>ವಿದ್ಯುತ್ ಶಾರ್ಟ್ ಸರ್ಕೀಟ್ನಿಂದದ 40 ಮನೆಗಳಲ್ಲಿ ಟಿವಿ, ಫ್ಯಾನ್, ರೆಫ್ರಿಜರೇಟರ್ ಸಂಪೂರ್ಣ ಸುಟ್ಟು ಹೋಗಿವೆ.</p>.<p>ಹರಿಯಬ್ಬೆ ಬೆಸ್ಕಾಂ ಸಿಬ್ಬಂದಿ ಜಂಗಲ್ ತೆಗೆಯಲು ಪಂಪ್ಸೆಟ್ ಲೈನ್ ಮಾತ್ರ ಎಲ್ಸಿ ತೆಗೆದುಕೊಂಡಿದ್ದಾರೆ. ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕದ ಎಲ್ಸಿ ತೆಗೆದುಕೊಳ್ಳದೆ ಕಾಮಗಾರಿ ಮಾಡುತ್ತಿದ್ದಾಗ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕದ ತಂತಿ ಮೇಲೆ ಕಾಗೆ ಬಿದ್ದಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.</p>.<p>ಬೆಸ್ಕಾಂ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧರ್ಮಪುರ:</strong> ಸಮೀಪದ ಹರಿಯಬ್ಬೆ ಬಳಿ ಬೆಸ್ಕಾಂ ಸಿಬ್ಬಂದಿ ಜಂಗಲ್ ತೆಗೆಯುವಾಗ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ತಂತಿ ಮೇಲೆ ಕೊಂಬೆ ಬಿದ್ದ ಕಾರಣ ವಿದ್ಯುತ್ ಶಾರ್ಟ್ ಸರ್ಕೀಟ್ ಉಂಟಾಗಿ ಮನೆಯ ಮುಂದೆ ಬಿಸಿಲಿಗೆ ಹಾಕಿದ್ದ 9 ಕ್ವಿಂಟಲ್ ಬೀಜೋತ್ಪಾದನೆಯ ಹತ್ತಿ ಸಂಪೂರ್ಣ ಸುಟ್ಟು ಅಪಾರ ನಷ್ಟ ಉಂಟಾಗಿದೆ.</p>.<p>ಹರಿಯಬ್ಬೆ ರೈತ ಎಂಜಾರಪ್ಪ ಅವರು ಮೂರು ಎಕೆರೆ ಭೂಮಿಯಲ್ಲಿ ರಾಶಿ 555 ಕಂಪನಿಯ ಬೀಜೋತ್ಪಾದನೆಯ ಹತ್ತಿಯನ್ನು ಸಮೃದ್ಧವಾಗಿ ಬೆಳೆದಿದ್ದು ಮಂಗಳವಾರ ತಮ್ಮ ಮನೆಯ ಮುಂದೆ ಬಿಸಿಲಿಗೆ ಹಾಕಿದ್ದರು. </p>.<p>ವಿದ್ಯುತ್ ಶಾರ್ಟ್ ಸರ್ಕೀಟ್ನಿಂದದ 40 ಮನೆಗಳಲ್ಲಿ ಟಿವಿ, ಫ್ಯಾನ್, ರೆಫ್ರಿಜರೇಟರ್ ಸಂಪೂರ್ಣ ಸುಟ್ಟು ಹೋಗಿವೆ.</p>.<p>ಹರಿಯಬ್ಬೆ ಬೆಸ್ಕಾಂ ಸಿಬ್ಬಂದಿ ಜಂಗಲ್ ತೆಗೆಯಲು ಪಂಪ್ಸೆಟ್ ಲೈನ್ ಮಾತ್ರ ಎಲ್ಸಿ ತೆಗೆದುಕೊಂಡಿದ್ದಾರೆ. ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕದ ಎಲ್ಸಿ ತೆಗೆದುಕೊಳ್ಳದೆ ಕಾಮಗಾರಿ ಮಾಡುತ್ತಿದ್ದಾಗ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕದ ತಂತಿ ಮೇಲೆ ಕಾಗೆ ಬಿದ್ದಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.</p>.<p>ಬೆಸ್ಕಾಂ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>