ಮುಖಂಡ ಕಾಕಾಸೂರಯ್ಯ, ಸೋಮವಾರ ಜಗಳೂರು ತಾಲ್ಲೂಕಿನಿಂದ ಉಚಿತವಾಗಿ ಮೆಕ್ಕೆಜೋಳದ ಮೇವು ಸಂಗ್ರಹಿಸಿ ಹೋಬಳಿಯ ಮಲ್ಲೇಬೋರನಹಟ್ಟಿ ವಡಲೇಶ್ವರ ದೇವರ ಎತ್ತುಗಳು, ಭೀಮಗೊಂಡನಹಳ್ಳಿ ಮತ್ತು ದಾಸರಮುತ್ತೇನಹಳ್ಳಿ ಓಬಳದೇವರು ದೇವರ ಎತ್ತುಗಳಿಗೆ, ಮಲ್ಲೂರಹಳ್ಳಿ ರಾಜಲುದೇವರು ದೇವರ ಎತ್ತುಗಳಿಗೆ ತಲಾ ಒಂದು ಲೋಡ್ನಷ್ಟು ಮೇವು ವಿತರಿಸಲಾಯಿತು. ನೆಲಗೇತಹಟ್ಟಿ ಚನ್ನಕೇಶವ ದೇವರ ಎತ್ತುಗಳಿಗೆ, ಕುದಾಪುರ, ಬೋಸೆದೇವರಹಟ್ಟಿ, ನನ್ನಿವಾಳ ಗ್ರಾಮಗಳ ದೇವರ ಎತ್ತುಗಳಿಗೆ ಮೇವು ಒದಗಿಸಲಾಗುವುದು. ಮುಂದಿನ ದಿನಗಳಲ್ಲಿ ಮೇವು ಖಾಲಿಯಾದ ತಕ್ಷಣ ಮತ್ತೆ ಮೇವು ಒದಗಿಸಲಾಗುವುದು ಎಂದು ತಿಳಿಸಿದರು.