ದೇವಸ್ಥಾನದ ಆವರಣದಿಂದ ಆರಂಭಗೊಂಡ ಮೆರವಣಿಗೆ ಕೋಟೆಯ ಮುಖ್ಯ ಬೀದಿಗಳಲ್ಲಿ ಸಾಗಿತು. ಭಕ್ತರು ಪಾಲಕ, ಪಲ್ಲಾರ, ಮಜ್ಜಿಗೆ, ಕೊಸಂಬರಿ ವಿತರಿಸಿದರು. ಕೋಟೆ ಬನಶಂಕರಿ, ಗ್ರಾಮದೇವತೆ ದುರ್ಗಾಂಬಿಕಾದೇವಿ, ಕೊಲ್ಲಾಪುರದಮ್ಮ, ವೀರಭದ್ರಸ್ವಾಮಿ, ಈಶ್ವರಸ್ವಾಮಿ, ಆಂಜನೇಯಸ್ವಾಮಿ, ತಾಲ್ಲೂಕಿನ ಬೆಲಗೂರು, ಮತ್ತೋಡು, ಮಾಡದಕೆರೆ, ಬಾಗೂರು, ಬುರುಡೇ ಕಟ್ಟೆ, ಬಳ್ಳೇಕೆರೆ, ಮಲ್ಲಪ್ಪನಹಳ್ಳಿ, ಜಾನಕಲ್ಲು, ಬೋಕಿಕೆರೆ ಸೇರಿ ಹಲವು ದೇವಾಲಯಗಳಲ್ಲಿ ಶ್ರೀರಾಮನವಮಿ ವಿಶೇಷ ಪೂಜೆ, ಭಜನೆ ಕಾರ್ಯಕ್ರಮಗಳು ಜರುಗಿದವು.