<p><strong>ಚಿತ್ರದುರ್ಗ:</strong> ‘ದುರ್ಗದ ಇತಿಹಾಸದಲ್ಲಿ ಗಂಡೋಬಳವ್ವ ನಾಗತಿಯ ಸಾಹಸ, ಸೇವೆ ಅನನ್ಯವಾದುದು. ಸಮಯೋಚಿತವಾಗಿ ಯೋಜಿಸಿ ಮದಕರಿ ನಾಯಕನನ್ನು ರಾಜನಾಗಿ ಆಯ್ಕೆ ಮಾಡಿ, ಪಟ್ಟ ಕಟ್ಟಿ ಸಂಸ್ಥಾನವನ್ನು ಉಳಿಸಿದ ಕೀರ್ತಿ ಆಕೆಗೆ ಸಲ್ಲುತ್ತದೆ’ ಎಂದು ಹಿರಿಯ ಸಾಹಿತಿ ಬಿ.ಎಲ್. ವೇಣು ಹೇಳಿದರು.</p>.<p>ಚಿತ್ರದುರ್ಗ ಇತಿಹಾಸ ಕೂಟದ ಸದಸ್ಯರಾದ ಕುಮಾರ್ ಬಡಪ್ಪ ಅವರು ಕಲಾವಿದ ಸುಲ್ತಾನ್ ಅವರಿಂದ ಬರೆಸಿರುವ ಚಿತ್ರದುರ್ಗ ಸಂಸ್ಥಾನದ ರಾಣಿ ಗಂಡೋಬಳವ್ವ ನಾಗತಿಯ ಕಲಾಕೃತಿಯನ್ನು ಭಾನುವಾರ ಅನಾವರಣಗೊಳಿಸಿ ಮಾತನಾಡಿದರು.</p>.<p>‘ಗಂಡೋಬಳವ್ವ ನಾಗತಿ ಅನೇಕ ಯುದ್ಧಗಳನ್ನು ಎದುರಿಸಬೇಕಾಗುತ್ತದೆ. 1754–1756 ವರೆಗೆ ಸರ್ವಾಧಿಕಾರತ್ವ ನಡೆಸಿದ ಓಬಳವ್ವ ನಾಗತಿಯು 1756ರಲ್ಲಿ ಕಾಲವಾದಳು. ಈಕೆಯ ಶೌರ್ಯ, ದಿಟ್ಟತನ, ಹೋರಾಟ, ಸಮಯೋಚಿತ ಗುಣಸ್ವಭಾವ ಚಿತ್ರದುರ್ಗ ಇತಿಹಾಸದಲ್ಲಿ ದಾಖಲಾಗಿದೆ. ಆಕೆಯ ಶೌರ್ಯ, ಸಾಹಸಗಳು ಮುಂದಿನ ಪೀಳಿಗೆಯ ಹೆಣ್ಣುಮಕ್ಕಳಿಗೆ ಮಾದರಿಯಾಗಬೇಕು’ ಎಂದರು.</p>.<p>ನಗರಸಭೆಯ ಮಾಜಿ ಅಧ್ಯಕ್ಷರಾದ ಬಿ. ಕಾಂತರಾಜ್, ಕಲಾವಿದ ಸುಲ್ತಾನ್, ಮದಕರಿ ಸಂಘದ ಅಧ್ಯಕ್ಷರಾದ ಡಿ. ಗೋಪಾಲಸ್ವಾಮಿ ನಾಯಕ, ಚಿತ್ರದುರ್ಗ ಸಂಸ್ಥಾನದ ರಾಜವಂಶಸ್ಥ ಮದಕರಿ ಜಯಚಂದ್ರ ನಾಯಕ, ಇತಿಹಾಸ ಸಂಶೋಧಕ ಎನ್.ಎಸ್. ಮಹಂತೇಶ, ಅಜಯ್, ಕಣ್ಣನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ:</strong> ‘ದುರ್ಗದ ಇತಿಹಾಸದಲ್ಲಿ ಗಂಡೋಬಳವ್ವ ನಾಗತಿಯ ಸಾಹಸ, ಸೇವೆ ಅನನ್ಯವಾದುದು. ಸಮಯೋಚಿತವಾಗಿ ಯೋಜಿಸಿ ಮದಕರಿ ನಾಯಕನನ್ನು ರಾಜನಾಗಿ ಆಯ್ಕೆ ಮಾಡಿ, ಪಟ್ಟ ಕಟ್ಟಿ ಸಂಸ್ಥಾನವನ್ನು ಉಳಿಸಿದ ಕೀರ್ತಿ ಆಕೆಗೆ ಸಲ್ಲುತ್ತದೆ’ ಎಂದು ಹಿರಿಯ ಸಾಹಿತಿ ಬಿ.ಎಲ್. ವೇಣು ಹೇಳಿದರು.</p>.<p>ಚಿತ್ರದುರ್ಗ ಇತಿಹಾಸ ಕೂಟದ ಸದಸ್ಯರಾದ ಕುಮಾರ್ ಬಡಪ್ಪ ಅವರು ಕಲಾವಿದ ಸುಲ್ತಾನ್ ಅವರಿಂದ ಬರೆಸಿರುವ ಚಿತ್ರದುರ್ಗ ಸಂಸ್ಥಾನದ ರಾಣಿ ಗಂಡೋಬಳವ್ವ ನಾಗತಿಯ ಕಲಾಕೃತಿಯನ್ನು ಭಾನುವಾರ ಅನಾವರಣಗೊಳಿಸಿ ಮಾತನಾಡಿದರು.</p>.<p>‘ಗಂಡೋಬಳವ್ವ ನಾಗತಿ ಅನೇಕ ಯುದ್ಧಗಳನ್ನು ಎದುರಿಸಬೇಕಾಗುತ್ತದೆ. 1754–1756 ವರೆಗೆ ಸರ್ವಾಧಿಕಾರತ್ವ ನಡೆಸಿದ ಓಬಳವ್ವ ನಾಗತಿಯು 1756ರಲ್ಲಿ ಕಾಲವಾದಳು. ಈಕೆಯ ಶೌರ್ಯ, ದಿಟ್ಟತನ, ಹೋರಾಟ, ಸಮಯೋಚಿತ ಗುಣಸ್ವಭಾವ ಚಿತ್ರದುರ್ಗ ಇತಿಹಾಸದಲ್ಲಿ ದಾಖಲಾಗಿದೆ. ಆಕೆಯ ಶೌರ್ಯ, ಸಾಹಸಗಳು ಮುಂದಿನ ಪೀಳಿಗೆಯ ಹೆಣ್ಣುಮಕ್ಕಳಿಗೆ ಮಾದರಿಯಾಗಬೇಕು’ ಎಂದರು.</p>.<p>ನಗರಸಭೆಯ ಮಾಜಿ ಅಧ್ಯಕ್ಷರಾದ ಬಿ. ಕಾಂತರಾಜ್, ಕಲಾವಿದ ಸುಲ್ತಾನ್, ಮದಕರಿ ಸಂಘದ ಅಧ್ಯಕ್ಷರಾದ ಡಿ. ಗೋಪಾಲಸ್ವಾಮಿ ನಾಯಕ, ಚಿತ್ರದುರ್ಗ ಸಂಸ್ಥಾನದ ರಾಜವಂಶಸ್ಥ ಮದಕರಿ ಜಯಚಂದ್ರ ನಾಯಕ, ಇತಿಹಾಸ ಸಂಶೋಧಕ ಎನ್.ಎಸ್. ಮಹಂತೇಶ, ಅಜಯ್, ಕಣ್ಣನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>