<p><strong>ಮೊಳಕಾಲ್ಮುರು:</strong> ತಾಲೂಕಿನಾದ್ಯಂತ ಸಂಕಷ್ಟ ನಿವಾರಕ ಗಣಪತಿಯ ಹಬ್ಬವನ್ನು ಸಂಭ್ರಮ, ಸಡಗರದಿಂದ ಶನಿವಾರ ಮತ್ತು ಭಾನುವಾರ ಆಚರಣೆ ಮಾಡಲಾಯಿತು.</p>.<p>ಗ್ರಾಮಗಳ ಮುಖ್ಯ ಬೀದಿಗಳಲ್ಲಿ ಬಂಟ್ಟಿಂಗ್ಸ್ ಕಟ್ಟಿ, ಶುಕ್ರವಾರ ರಾತ್ರಿಯಿಡೀ ಮಂಟಪಗಳ ಅಲಂಕಾರ ಮಾಡಿದರು. ಶನಿವಾರ ಬೆಳಿಗ್ಗೆ ಪೂಜೆ ಸಲ್ಲಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ಗ್ರಾಮಸ್ಥರು ಗಣೇಶನ ದರ್ಶನ ಪಡೆದರು. ಮೂರು ದಿನಗಳವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು, ಗಮನ ಸೆಳೆಯುತ್ತಿವೆ. </p>.<p>ಮೊಳಕಾಲ್ಮುರು ಠಾಣೆ ವ್ಯಾಪ್ತಿಯಲ್ಲಿ 63 ಕಡೆ ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಇದರಲ್ಲಿ ಶನಿವಾರ 6 ಮೂರ್ತಿಗಳ ವಿಸರ್ಜನೆ ನಡೆಯಿತು. ಉಳಿದಂತೆ ಸೋಮವಾರ 43, ಬುಧವಾರ 12 ಮೂರ್ತಿಗಳ ವಿಸರ್ಜನೆ ಜರುಗಲಿದೆ. ಪಟ್ಟಣದ ಹಿಂದೂ ಮಹಾಗಣಪತಿ ಮತ್ತು ವಿವಿಧ ಬಡಾವಣೆಗಳ ಮೂರ್ತಿಗಳ ವಿಸರ್ಜನೆಯನ್ನು ಸೆ.15 ರಂದು ನಡೆಯಲಿದೆ ಎಂದು ಪಿಎಸ್ಐ ಜಿ. ಪಾಂಡುರಂಗಪ್ಪ ತಿಳಿಸಿದರು.</p>.<p>ರಾಂಪುರ ಠಾಣೆ ವ್ಯಾಪ್ತಿಯಲ್ಲಿ 65 ಕಡೆ ಸಾರ್ವಜನಿಕ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗಿದ್ದು, ವಿವಿಧ ಗ್ರಾಮಗಳಲ್ಲಿ ಗ್ರಾಮದೇವತೆ ಮಾರಮ್ಮದೇವಿಯ ಹಬ್ಬವಿರುವ ಕಾರಣ, ರಾಂಪುರದ 2 ಮೂರ್ತಿಗಳನ್ನು ಹೊರತುಪಡಿಸಿದಲ್ಲಿ ಉಳಿದ ಮೂರ್ತಿಗಳ ವಿಸರ್ಜನೆ ಸೋಮವಾರ ಜರುಗಲಿದೆ ಎಂದು ಪಿಎಸ್ಐ ಮಹೇಶ್ ಹೊಸಪೇಟೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊಳಕಾಲ್ಮುರು:</strong> ತಾಲೂಕಿನಾದ್ಯಂತ ಸಂಕಷ್ಟ ನಿವಾರಕ ಗಣಪತಿಯ ಹಬ್ಬವನ್ನು ಸಂಭ್ರಮ, ಸಡಗರದಿಂದ ಶನಿವಾರ ಮತ್ತು ಭಾನುವಾರ ಆಚರಣೆ ಮಾಡಲಾಯಿತು.</p>.<p>ಗ್ರಾಮಗಳ ಮುಖ್ಯ ಬೀದಿಗಳಲ್ಲಿ ಬಂಟ್ಟಿಂಗ್ಸ್ ಕಟ್ಟಿ, ಶುಕ್ರವಾರ ರಾತ್ರಿಯಿಡೀ ಮಂಟಪಗಳ ಅಲಂಕಾರ ಮಾಡಿದರು. ಶನಿವಾರ ಬೆಳಿಗ್ಗೆ ಪೂಜೆ ಸಲ್ಲಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ಗ್ರಾಮಸ್ಥರು ಗಣೇಶನ ದರ್ಶನ ಪಡೆದರು. ಮೂರು ದಿನಗಳವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು, ಗಮನ ಸೆಳೆಯುತ್ತಿವೆ. </p>.<p>ಮೊಳಕಾಲ್ಮುರು ಠಾಣೆ ವ್ಯಾಪ್ತಿಯಲ್ಲಿ 63 ಕಡೆ ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಇದರಲ್ಲಿ ಶನಿವಾರ 6 ಮೂರ್ತಿಗಳ ವಿಸರ್ಜನೆ ನಡೆಯಿತು. ಉಳಿದಂತೆ ಸೋಮವಾರ 43, ಬುಧವಾರ 12 ಮೂರ್ತಿಗಳ ವಿಸರ್ಜನೆ ಜರುಗಲಿದೆ. ಪಟ್ಟಣದ ಹಿಂದೂ ಮಹಾಗಣಪತಿ ಮತ್ತು ವಿವಿಧ ಬಡಾವಣೆಗಳ ಮೂರ್ತಿಗಳ ವಿಸರ್ಜನೆಯನ್ನು ಸೆ.15 ರಂದು ನಡೆಯಲಿದೆ ಎಂದು ಪಿಎಸ್ಐ ಜಿ. ಪಾಂಡುರಂಗಪ್ಪ ತಿಳಿಸಿದರು.</p>.<p>ರಾಂಪುರ ಠಾಣೆ ವ್ಯಾಪ್ತಿಯಲ್ಲಿ 65 ಕಡೆ ಸಾರ್ವಜನಿಕ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗಿದ್ದು, ವಿವಿಧ ಗ್ರಾಮಗಳಲ್ಲಿ ಗ್ರಾಮದೇವತೆ ಮಾರಮ್ಮದೇವಿಯ ಹಬ್ಬವಿರುವ ಕಾರಣ, ರಾಂಪುರದ 2 ಮೂರ್ತಿಗಳನ್ನು ಹೊರತುಪಡಿಸಿದಲ್ಲಿ ಉಳಿದ ಮೂರ್ತಿಗಳ ವಿಸರ್ಜನೆ ಸೋಮವಾರ ಜರುಗಲಿದೆ ಎಂದು ಪಿಎಸ್ಐ ಮಹೇಶ್ ಹೊಸಪೇಟೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>