‘ಇದೇ ರೀತಿ ತ್ಯಾಜ್ಯವನ್ನು ಕೆರೆಗೆ ಹಾಕುತ್ತಿದ್ದರೆ ಕೆಲವೇ ವರ್ಷಗಳಲ್ಲಿ ಕೆರೆ ಮುಚ್ಚಿ ಕಣ್ಮರೆಯಾದರೂ ಆಶ್ಚರ್ಯವಿಲ್ಲ. ತ್ಯಾಜ್ಯದಿಂದ ಕೆರೆ ಹಾಳಾಗುತ್ತಿದ್ದರೂ ಗ್ರಾಮ ಪಂಚಾಯಿತಿಯವರಾಗಲಿ, ಗ್ರಾಮದ ಮುಖಂಡರಾಗಲಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕೆರೆಯ ಉಳಿವಿನ ಬಗ್ಗೆ ಕೆಲವರಿಗೆ ಆಸಕ್ತಿ ಇದೆಯಾದರೂ, ಅವರಿಗೆ ಕೈಜೋಡಿಸುವವರು ಇಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕೆರೆಯ ಸೌಂದರ್ಯ ಹಾಳು ಮಾಡುತ್ತಿರುವವ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೆರೆಯ ಸುತ್ತಲಿನ ತ್ಯಾಜ್ಯ, ಗಿಡಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಬೇಕು’ ಎಂದು ಸುನೀಲ್, ಈಶ್ವರಪ್ಪ, ಪ್ರಕಾಶ್, ರಾಜಪ್ಪ, ಸಿದ್ಧಣ್ಣ ಆಗ್ರಹಿಸಿದರು.