<p>ನಾಯಕನಹಟ್ಟಿ: ಪ್ರಸಿದ್ಧ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಗೋಧೋಳಿ ಸಮಯದಲ್ಲಿ ಶುಕ್ರವಾರ ಗೋವುಗಳಿಗೆ ಪೂಜೆ ಸಲ್ಲಿಸಲಾಯಿತು.</p>.<p>ದೇವಾಲಯದ ಒಳಮಠದ ಮುಂಭಾಗದಲ್ಲಿ ಗೋವುಗಳಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲು ಸಕಲ ಸಿದ್ಧತೆ ಮಾಡಲಾಗಿತ್ತು. ದೇವಸ್ಥಾನದ ಸಿಬ್ಬಂದಿ, ಅರ್ಚಕರು ಹಾಗೂ ಗ್ರಾಮಸ್ಥರು ಪೂಜೆ ಸಲ್ಲಿಸಿದರು.</p>.<p>ಒಂಬತ್ತು ಗೋವುಗಳನ್ನು ಒಳಮಠದ ಮುಂಭಾಗ ಕರೆತರಲಾಯಿತು. ಅದಕ್ಕೆ ಪುಷ್ಪಾಲಂಕಾರ ನೆರವೇರಿಸಿದ ನಂತರ ಅರ್ಚಕರು ಪೂಜೆ ಸಲ್ಲಿಸಿದರು. ಮಹಿಳೆಯರು ಆರತಿ ಬೆಳಗಿ ಭಕ್ತಿ ಸಮರ್ಪಿಸಿದರು.</p>.<p>ಪೂಜೆಯ ನಂತರ ಗ್ರಾಮದ ಮುಖಂಡರು ಸಂಪ್ರದಾಯ ಬದ್ಧವಾಗಿ ಗೋವುಗಳಿಗೆ ಅಕ್ಕಿ ಹಾಗೂ ಬೆಲ್ಲವನ್ನು ನೀಡಿದರು. ಒಳಮಠದ ಪ್ರಾಂಗಣದಲ್ಲಿ ಕರಡಿವಾದ್ಯಗಳೊಂದಿಗೆ ಗೋವುಗಳನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿಸಲಾಯಿತು.</p>.<p>ನಂತರ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.</p>.<p>‘ಎಲ್ಲಾ ಶುಭ ಕಾರ್ಯಕ್ರಮಗಳಲ್ಲಿ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಗೋವುಗಳು ಸಂಸ್ಕೃತಿಯ ಪ್ರತೀಕವಾಗಿವೆ. ಸರ್ಕಾರ ಗೋಪೂಜಾ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿರುವುದು ಸಂತಸದ ವಿಷಯ’ ಎಂದು ಅಭಿಷೇಕ ಮಂಟಪದ ಅರ್ಚಕರಾದ ಮಹಾಂತೇಶ ದಿವಾಕರ ಹೇಳಿದರು.</p>.<p>ದೇವಸ್ಥಾನದ ಸಿಬ್ಬಂದಿ ಎಸ್. ಸತೀಶ್, ಮಂಜುನಾಥ್, ಅರ್ಚಕರಾದ ತಿಪ್ಪೇಸ್ವಾಮಿ, ಅಭಿಷೇಕ್, ಶಿವಲಿಂಗಮೂರ್ತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಾಯಕನಹಟ್ಟಿ: ಪ್ರಸಿದ್ಧ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಗೋಧೋಳಿ ಸಮಯದಲ್ಲಿ ಶುಕ್ರವಾರ ಗೋವುಗಳಿಗೆ ಪೂಜೆ ಸಲ್ಲಿಸಲಾಯಿತು.</p>.<p>ದೇವಾಲಯದ ಒಳಮಠದ ಮುಂಭಾಗದಲ್ಲಿ ಗೋವುಗಳಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲು ಸಕಲ ಸಿದ್ಧತೆ ಮಾಡಲಾಗಿತ್ತು. ದೇವಸ್ಥಾನದ ಸಿಬ್ಬಂದಿ, ಅರ್ಚಕರು ಹಾಗೂ ಗ್ರಾಮಸ್ಥರು ಪೂಜೆ ಸಲ್ಲಿಸಿದರು.</p>.<p>ಒಂಬತ್ತು ಗೋವುಗಳನ್ನು ಒಳಮಠದ ಮುಂಭಾಗ ಕರೆತರಲಾಯಿತು. ಅದಕ್ಕೆ ಪುಷ್ಪಾಲಂಕಾರ ನೆರವೇರಿಸಿದ ನಂತರ ಅರ್ಚಕರು ಪೂಜೆ ಸಲ್ಲಿಸಿದರು. ಮಹಿಳೆಯರು ಆರತಿ ಬೆಳಗಿ ಭಕ್ತಿ ಸಮರ್ಪಿಸಿದರು.</p>.<p>ಪೂಜೆಯ ನಂತರ ಗ್ರಾಮದ ಮುಖಂಡರು ಸಂಪ್ರದಾಯ ಬದ್ಧವಾಗಿ ಗೋವುಗಳಿಗೆ ಅಕ್ಕಿ ಹಾಗೂ ಬೆಲ್ಲವನ್ನು ನೀಡಿದರು. ಒಳಮಠದ ಪ್ರಾಂಗಣದಲ್ಲಿ ಕರಡಿವಾದ್ಯಗಳೊಂದಿಗೆ ಗೋವುಗಳನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿಸಲಾಯಿತು.</p>.<p>ನಂತರ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.</p>.<p>‘ಎಲ್ಲಾ ಶುಭ ಕಾರ್ಯಕ್ರಮಗಳಲ್ಲಿ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಗೋವುಗಳು ಸಂಸ್ಕೃತಿಯ ಪ್ರತೀಕವಾಗಿವೆ. ಸರ್ಕಾರ ಗೋಪೂಜಾ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿರುವುದು ಸಂತಸದ ವಿಷಯ’ ಎಂದು ಅಭಿಷೇಕ ಮಂಟಪದ ಅರ್ಚಕರಾದ ಮಹಾಂತೇಶ ದಿವಾಕರ ಹೇಳಿದರು.</p>.<p>ದೇವಸ್ಥಾನದ ಸಿಬ್ಬಂದಿ ಎಸ್. ಸತೀಶ್, ಮಂಜುನಾಥ್, ಅರ್ಚಕರಾದ ತಿಪ್ಪೇಸ್ವಾಮಿ, ಅಭಿಷೇಕ್, ಶಿವಲಿಂಗಮೂರ್ತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>