‘ವ್ಯವಹಾರದ ಕಾರಣಕ್ಕೆ ಏಪ್ರಿಲ್ ಮೊದಲ ವಾರ ಚೆನ್ನೈಗೆ ಹೋಗಿ, ಅಲ್ಲಿಂದ ವಿಜಯವಾಡಕ್ಕೆ ನಂತರ ಬೆಂಗಳೂರಿಗೆ ಬರುವ ವೇಳೆಗೆ ತುಂಬ ಸುಸ್ತಾಗಿತ್ತು. ಕುಸುಮ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದಾಗ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ನಾನು ಅಪ್ಪಟ ಆಸ್ತಿಕ. ದೇವರಿದ್ದಾನೆ. ಯಾರೂ ಹೆದರಬೇಡಿ ಎಂದು ಸ್ಪರ್ಶ ಆಸ್ಪತ್ರೆ ಸೇರುವ ಮೊದಲು ಮನೆಯವರಿಗೆಲ್ಲ ಧೈರ್ಯ ಹೇಳಿದ್ದೆ. ಮೂರು ದಿನಗಳ ಕಾಲ ಐಸಿಯುನಲ್ಲಿದ್ದದ್ದು ನನಗೆ ನೆನಪೇ ಇಲ್ಲ. ಎಚ್ಚರ ಬಂದ ಮೇಲೆ ಜನರಲ್ ವಾರ್ಡ್ಗೆ ಸ್ಥಳಾಂತರಿಸಿದರು. 14 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದೆ. ಸಕ್ಕರೆ ಕಾಯಿಲೆ ಇರುವ ಕಾರಣ ಏನಾಗುತ್ತದೋ ಎಂಬ ಅಳುಕು ಮನಸ್ಸಿನ ಮೂಲೆಯಲ್ಲಿ ಕಾಡುತ್ತಿತ್ತು. ಕೊನೆಗೂ ಕೊರೊನಾ ಗೆದ್ದು ಪುನರ್ಜನ್ಮದೊಂದಿಗೆ ಮನೆಗೆ ಮರಳಿದ್ದೇನೆ’.