<p><strong>ಹೊಸದುರ್ಗ:</strong> ‘ಸರ್ಕಾರಿ ಜಾಗದಲ್ಲಿ ಶಾಸಕರ ಸಂಬಂಧಿಕರು, ಅನುಯಾಯಿಗಳು ಅನಧಿಕೃತ ಬಡಾವಣೆ ಮಾಡುವುದು, ಅನಧಿಕೃತವಾಗಿ ಮಣ್ಣು ಹೊಡೆಯುವುದು ಸೇರಿ ಹಲವು ಕಾರ್ಯಗಳಿಗೆ ಒತ್ತುವರಿ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕ್ರಮವಹಬೇಕು’ ಎಂದು ಮಾಜಿ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.</p>.<p>‘ಕ್ಯಾದಿಗೆರೆ ಕಾವಲ್ ಬಳಿ ರಾತ್ರಿಯಿಡಿ ವಿಪರೀತ ಮಣ್ಣು ಸಾಗಿಸಲಾಗುತ್ತಿದೆ. ಗೊರವಿನಕಲ್ಲು, ಕೆಲ್ಲೋಡು, ಸಿದ್ಧಪ್ಪನ ಬೆಟ್ಟ, ಸದ್ಗುರು ಸೇವಾಶ್ರಮ ಆಸ್ಪತ್ರೆ ಪಕ್ಕದಲ್ಲಿನ ಸರ್ಕಾರಿ ಸ್ಥಳಗಳನ್ನು ಶಾಸಕ ಬಿ.ಜಿ. ಗೋವಿಂದಪ್ಪ ಅವರ ಅನುಯಾಯಿಗಳು (ಫಾಲೋವರ್ಸ್) ಒತ್ತುವರಿ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದ್ದಾರೆ.</p>.<p>‘ಶಾಸಕ ಬಿ.ಜಿ.ಗೋವಿಂದಪ್ಪ ಚುನಾವಣೆಗಾಗಿ ₹ 20 ಕೋಟಿ ವ್ಯಯಿಸಿದ್ದಾರೆ. ಜನರೇನು ಸುಮ್ಮನೆ ಮತ ಹಾಕಿಲ್ಲ. ₹ 500 ಕೊಟ್ಟಿರುವುದಾಗಿ ಸ್ವತಃ ಶಾಸಕರೇ ಬಹಿರಂಗ ಹೇಳಿಕೆ ನೀಡಿದ್ದಾರೆ’ ಎಂದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸದುರ್ಗ:</strong> ‘ಸರ್ಕಾರಿ ಜಾಗದಲ್ಲಿ ಶಾಸಕರ ಸಂಬಂಧಿಕರು, ಅನುಯಾಯಿಗಳು ಅನಧಿಕೃತ ಬಡಾವಣೆ ಮಾಡುವುದು, ಅನಧಿಕೃತವಾಗಿ ಮಣ್ಣು ಹೊಡೆಯುವುದು ಸೇರಿ ಹಲವು ಕಾರ್ಯಗಳಿಗೆ ಒತ್ತುವರಿ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕ್ರಮವಹಬೇಕು’ ಎಂದು ಮಾಜಿ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.</p>.<p>‘ಕ್ಯಾದಿಗೆರೆ ಕಾವಲ್ ಬಳಿ ರಾತ್ರಿಯಿಡಿ ವಿಪರೀತ ಮಣ್ಣು ಸಾಗಿಸಲಾಗುತ್ತಿದೆ. ಗೊರವಿನಕಲ್ಲು, ಕೆಲ್ಲೋಡು, ಸಿದ್ಧಪ್ಪನ ಬೆಟ್ಟ, ಸದ್ಗುರು ಸೇವಾಶ್ರಮ ಆಸ್ಪತ್ರೆ ಪಕ್ಕದಲ್ಲಿನ ಸರ್ಕಾರಿ ಸ್ಥಳಗಳನ್ನು ಶಾಸಕ ಬಿ.ಜಿ. ಗೋವಿಂದಪ್ಪ ಅವರ ಅನುಯಾಯಿಗಳು (ಫಾಲೋವರ್ಸ್) ಒತ್ತುವರಿ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದ್ದಾರೆ.</p>.<p>‘ಶಾಸಕ ಬಿ.ಜಿ.ಗೋವಿಂದಪ್ಪ ಚುನಾವಣೆಗಾಗಿ ₹ 20 ಕೋಟಿ ವ್ಯಯಿಸಿದ್ದಾರೆ. ಜನರೇನು ಸುಮ್ಮನೆ ಮತ ಹಾಕಿಲ್ಲ. ₹ 500 ಕೊಟ್ಟಿರುವುದಾಗಿ ಸ್ವತಃ ಶಾಸಕರೇ ಬಹಿರಂಗ ಹೇಳಿಕೆ ನೀಡಿದ್ದಾರೆ’ ಎಂದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>