‘ಚಿಂತಕ ಚಂದ್ರಕಾಂತ್ ಬಿಜ್ಜರಗಿ ಅವರ ಕುರುಬರು ಆಳಿದ ವಿಜಯನಗರ ಸಾಮ್ರಾಜ್ಯ ಎಂಬ ಕೃತಿ ಓದಬೇಕು. ವಿದೇಶಿ ತಜ್ಞರ ಹೇಳಿಕೆ, ಗೆಜೆಟಿಯರ್, ಗದ್ಯ ಕೃತಿಗಳು, ಕಾವ್ಯಗಳು, ಶಾಸನಗಳು, ಸರ್ವಜ್ಞನ ತ್ರಿಪದಿ ಒಳಗೊಂಡು ಜನಪದರ ಹಾಡು-ಕಥೆ-ವಾಡಿಕೆಗಳಲ್ಲೂ ಕುರುಬರು ಎಂದು ಉಲ್ಲೇಖಿಸಲಾಗಿದೆ. ಲಿಂಗದಳ್ಳಿ ಹಾಲಪ್ಪ ಅವರ ಕರ್ನಾಟಕ ಸಾಮ್ರಾಜ್ಯ ವಿಜಯನಗರ ಕೃತಿ, ರಾಬರ್ಟ್ ಸಿವೆಲ್, ಎಚ್.ವಿಲ್ಸನ್ ಮಿ.ಕೌಟೋ ಸೇರಿ ಹತ್ತಾರು ವಿದೇಶಿ ವಿದ್ವಾಂಸರು, ಇತಿಹಾಸ ಸಂಶೋಧಕರು ಹಕ್ಕಬುಕ್ಕರನ್ನು ಕುರುಬರು ಎಂದಿದ್ದಾರೆ’ ಎಂದು ಹೇಳಿದರು.