‘ದೊರೆಯ ಚರಿತೆಗಳು ಭವಿ ಚರಿತೆಗಳೆಂದು ಅವುಗಳನ್ನು ದೂರಿಟ್ಟು, ಶಿವಭಕ್ತರನ್ನು ತಲೆಯ ಮೇಲೆ ಹೊತ್ತು ಹರಿಹರನ ಕೃತಿಗಳು ಮೆರೆಯುತ್ತವೆ. ಸಾಮಾನ್ಯ ವ್ಯಕ್ತಿಯನ್ನು ಅಸಾಮಾನ್ಯನನ್ನಾಗಿ, ಅಸಾಮಾನ್ಯನನ್ನು ಸಾಮಾನ್ಯನನ್ನಾಗಿ ರಗಳೆಗಳಲ್ಲಿ ಚಿತ್ರಿಸಿ
ದ್ದಾನೆ. ಈತನ ರಗಳೆಗಳಲ್ಲಿ ತಳ ಸಮುದಾಯದ ಕಥಾನಾಯಕರೇ ಹೆಚ್ಚು. ಈತನ ವೃತ್ತಿ ಮತ್ತು ಶಿವಭಕ್ತಿ ಅಭೇದ್ಯ. ಶೂದ್ರೋದ್ಧಾರದ ಆದ್ಯ ಕವಿ. ಮೂಲತಃ ಸೈದ್ಧಾಂತಿಕ ಕವಿಯಾದ ಹರಿಹರನಿಗೆ ಕನ್ನಡ ಚರಿತ್ರೆಯಲ್ಲಿ ಸಿಗಬೇಕಾಗಿದ್ದ ಸ್ಥಾನಮಾನ ಸಿಗಲಿಲ್ಲ’ ಎಂದು ವಿವರಿಸಿದರು.