ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಗಂಧ ಸಮರ್ಪಣೆ: ಹಿಂದೂ ಮುಖಂಡರ ಅಭಿನಂದನೆ

Published 18 ಜೂನ್ 2023, 16:24 IST
Last Updated 18 ಜೂನ್ 2023, 16:24 IST
ಅಕ್ಷರ ಗಾತ್ರ

ಹಿರಿಯೂರು: ಶ್ರೀರಂಗಪಟ್ಟಣದಲ್ಲಿ ಜೂನ್ 18ರಂದು ನಡೆಯುವ ಟಿಪ್ಪು ಸುಲ್ತಾನ್‌ರವರ ಗಂಧ ಉತ್ಸವಕ್ಕೆ ಗಂಧ ಸಮರ್ಪಣೆ ಮಾಡಲು ಹೊರಟಿದ್ದ ರಾಜ್ಯ ಟಿಪ್ಪು ಸುಲ್ತಾನ್ ಮಹಾವೇದಿಕೆ ರಾಜ್ಯಾಧ್ಯಕ್ಷ ಚಿತ್ರದುರ್ಗದ ಟಿಪ್ಪು ಖಾಸಿಂ ಅಲಿಯವರನ್ನು ಹಿಂದೂ ಮುಖಂಡರು ಭಾನುವಾರ ನಗರದಲ್ಲಿ ಸನ್ಮಾನಿಸಿ, ಅಭಿನಂದಿಸಿದರು.

ಶ್ರೀರಂಗಪಟ್ಟಣದಲ್ಲಿ ನಡೆಯುವ ಗಂಧ ಉತ್ಸವಕ್ಕೆ ಕರ್ನಾಟಕ ಮಾತ್ರವಲ್ಲದೆ ದೇಶದ ಬೇರೆ ರಾಜ್ಯಗಳು, ವಿದೇಶಗಳಿಂದ ಕೂಡ ಟಿಪ್ಪು ಅಭಿಮಾನಿಗಳು ಬರಲಿದ್ದಾರೆ. ಗಂಧ ಉತ್ಸವದ ಉದ್ದೇಶ ದೇಶದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ, ಭಾವೈಕ್ಯತೆ ಮೂಡಲಿ ಎಂಬುದಾಗಿದೆ ಎಂದು ಖಾಸಿಂ ಅಲಿ ಹೇಳಿದರು.

ಅಂತರರಾಷ್ಟ್ರೀಯ ಕುಸ್ತಿ ಪಟು ಸದ್ದಾಂ ಪೈಲ್ವಾನ್, ಶಾಬಾಜ್ ಸುಲ್ತಾನ್, ಅಸಾಮ್ ಮೌಲಾನ, ಅಜ್ಮತ್ ಮೌಲಾನ ಖಾಸಿಂ ಅಲಿ ಜೊತೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT