ದಾವಣಗೆರೆ ನಿವಾಸಿಗಳಾದ ರವಿಕುಮಾರ್ ಹಾಗೂ ರಾಜಶೇಖರ್ ಎಂಬುವರು ಕೂಲಿಯನ್ನು ಅರಸಿ, ಕೆಲವು ತಿಂಗಳ ಹಿಂದೆ ಚಿಕ್ಕಮಗಳೂರಿಗೆ ತೆರಳಿ, ಅಲ್ಲಿ ಕಾಫಿ ತೋಟ
ವೊಂದರಲ್ಲಿ ಕೂಲಿ ಮಾಡಿ
ಕೊಂಡಿದ್ದರು. ಕೊರೊನಾ ಹಿನ್ನೆಲೆಯಲ್ಲಿ ತೋಟಗಳ ಮಾಲೀಕರು ಕೆಲಸ ಬಿಡಿಸಿ ಊರಿಗೆ ಹೋಗುವಂತೆ ತಿಳಿಸಿದ್ದರು. ಸಾರಿಗೆ ವ್ಯವಸ್ಥೆ ಇಲ್ಲದ್ದರಿಂದ ಅವರು ನಡೆದುಕೊಂಡು ಊರಿಗೆ ಹೋಗುತ್ತಿದ್ದರು. ಇದನ್ನು ಕಂಡ ಪಿಎಸ್ಐ ಮೋಹನ್ ಕುಮಾರ್ನಿತ್ರಾಣ ಸ್ಥಿತಿಯ
ಲ್ಲಿದ್ದ ಇಬ್ಬರಿಗೂ ಊಟ ಕೊಡಿಸಿ, ಆರೋಗ್ಯ ತಪಾಸಣೆ ನಡೆಸುವಂತೆ ಸಿಬ್ಬಂದಿಗೆ ಸೂಚಿಸಿದರು ಎಂದು ರಾಜಶೇಖರ್ ತಿಳಿಸಿದರು.