<p><strong>ಹಿರಿಯೂರು:</strong> ‘ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸುತ್ತೇವೆ. ರಕ್ತದಲ್ಲಿ ಬರೆದು ಕೊಡುತ್ತೇನೆ, ಅಧಿಕಾರ ತ್ಯಾಗ ಮಾಡುತ್ತೇನೆ’ ಎಂದ ಯಾರೊಬ್ಬರೂ ತಮ್ಮ ಮಾತು ಉಳಿಸಿಕೊಂಡಿಲ್ಲ’ ಎಂದು ಆದಿ ಜಾಂಬವ ಬೃಹನ್ಮಠದ ಷಡಕ್ಷರಮುನಿ ಸ್ವಾಮೀಜಿ ಆರೋಪಿಸಿದರು.</p>.<p>ನಗರದಲ್ಲಿ ಶುಕ್ರವಾರ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದರು.</p>.<p>‘ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿಯವರು ಧರಣಿ ನಡೆಸುತ್ತಿದ್ದರೂ<br />ಸರ್ಕಾರ ನಿರ್ಲಕ್ಷ್ಯ ವಹಿಸಿರುವುದು ಬೇಸರದ ಸಂಗತಿ. ಒಂದು ವಾರದಲ್ಲಿ ಸರ್ಕಾರ ಸ್ಪಂದಿಸದೇ ಹೋದಲ್ಲಿ ನಾಡಿನ ಎಲ್ಲ ಮಠಾಧೀಶರು ಬೀದಿಗಳಿದು ಹೋರಾಟ ನಡೆಸಬೇಕಾಗುತ್ತದೆ’ ಎಂದು ಸ್ವಾಮೀಜಿ ಎಚ್ಚರಿಸಿದರು.</p>.<p>‘ಸದನದಲ್ಲಿ ಸಮುದಾಯದ ಪರವಾಗಿ ಗಟ್ಟಿ ದನಿ ಎತ್ತುವವರನ್ನು ಆರಿಸಿಕೊಳ್ಳುವ ತುರ್ತು ಅಗತ್ಯದ ಕಾಲ ಸನ್ನಿಹಿತವಾಗಿದೆ’ ಎಂದರು.</p>.<p>ಮುಖಂಡ ಹರ್ತಿಕೋಟೆ ವೀರೇಂದ್ರ ಸಿಂಹ, ದಲಿತ ಹೋರಾಟಗಾರ ಟಿ. ಡಿ. ರಾಜಗಿರಿ, ವದ್ದೀಗೆರೆ ಕಾಂತರಾಜ್ ಮಾತನಾಡಿದರು.</p>.<p>ನಗರದ ರಂಜಿತಾ ಹೋಟೆಲ್ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆ ತಾಲ್ಲೂಕು ಕಚೇರಿ ತಲುಪಿದ ನಂತರ ಶಿರಸ್ತೇದಾರ್ ಸಣ್ಣಪ್ಪ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.</p>.<p class="Subhead"><strong>ಡಿ.ಟಿ. ಶ್ರೀನಿವಾಸ್ ಭಾಗಿ–ವಿರೋಧ:</strong> ಪ್ರತಿಭಟನಾ ಮೆರವಣಿಗೆ ಗಾಂಧಿ ವೃತ್ತಕ್ಕೆ ಬಂದಾಗ ರಾಜ್ಯ ಪ್ರವರ್ಗ–1 ರ ಒಕ್ಕೂಟದ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್ ಪಾಲ್ಗೊಂಡರು. ಕಾಂಗ್ರೆಸ್ ಬೆಂಬಲಿತ ಪ್ರತಿಭಟನಕಾರರು, ಕೆಲವು ದಲಿತ ಮುಖಂಡರು ಇದನ್ನು ವಿರೋಧಿಸಿದರು. ಶ್ರೀನಿವಾಸ್ ಪರ ಕೆಲವರು ಬೆಂಬಲಕ್ಕೆ ನಿಂತರು. ನಂತರ ಮುಖಂಡರು ಮನವಿ ಮಾಡಿದ್ದರ ಪರಿಣಾಮ ಗೊಂದಲ ತಣ್ಣಗಾಯಿತು.</p>.<p>ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗೇಂದ್ರನಾಯ್ಕ, ಭೂತಾ ಭೋವಿ, ಕೃಷ್ಣಮೂರ್ತಿ, ಜಯಶೀಲ ನಾಯ್ಕ, ಖಾದಿ ರಮೇಶ್, ಶಿವಪ್ಪ ನಾಯಕ, ಈ. ಮಂಜುನಾಥ್, ಜೀವೇಶ್, ಸಣ್ಣಪ್ಪ, ಮಟ್ಟಿ ಹನುಮಂತರಾಯಪ್ಪ, ಗೋಪಾಲ್, ತಿಮ್ಮರಾಜ್, ಡಿಶ್ ಮಂಜಣ್ಣ, ರಂಗಸ್ವಾಮಿ, ಜೋಗಪ್ಪ, ಮಂಜುಮಾಳಿಗೆ, ಎಂ.ಡಿ. ರವಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರಿಯೂರು:</strong> ‘ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸುತ್ತೇವೆ. ರಕ್ತದಲ್ಲಿ ಬರೆದು ಕೊಡುತ್ತೇನೆ, ಅಧಿಕಾರ ತ್ಯಾಗ ಮಾಡುತ್ತೇನೆ’ ಎಂದ ಯಾರೊಬ್ಬರೂ ತಮ್ಮ ಮಾತು ಉಳಿಸಿಕೊಂಡಿಲ್ಲ’ ಎಂದು ಆದಿ ಜಾಂಬವ ಬೃಹನ್ಮಠದ ಷಡಕ್ಷರಮುನಿ ಸ್ವಾಮೀಜಿ ಆರೋಪಿಸಿದರು.</p>.<p>ನಗರದಲ್ಲಿ ಶುಕ್ರವಾರ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದರು.</p>.<p>‘ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿಯವರು ಧರಣಿ ನಡೆಸುತ್ತಿದ್ದರೂ<br />ಸರ್ಕಾರ ನಿರ್ಲಕ್ಷ್ಯ ವಹಿಸಿರುವುದು ಬೇಸರದ ಸಂಗತಿ. ಒಂದು ವಾರದಲ್ಲಿ ಸರ್ಕಾರ ಸ್ಪಂದಿಸದೇ ಹೋದಲ್ಲಿ ನಾಡಿನ ಎಲ್ಲ ಮಠಾಧೀಶರು ಬೀದಿಗಳಿದು ಹೋರಾಟ ನಡೆಸಬೇಕಾಗುತ್ತದೆ’ ಎಂದು ಸ್ವಾಮೀಜಿ ಎಚ್ಚರಿಸಿದರು.</p>.<p>‘ಸದನದಲ್ಲಿ ಸಮುದಾಯದ ಪರವಾಗಿ ಗಟ್ಟಿ ದನಿ ಎತ್ತುವವರನ್ನು ಆರಿಸಿಕೊಳ್ಳುವ ತುರ್ತು ಅಗತ್ಯದ ಕಾಲ ಸನ್ನಿಹಿತವಾಗಿದೆ’ ಎಂದರು.</p>.<p>ಮುಖಂಡ ಹರ್ತಿಕೋಟೆ ವೀರೇಂದ್ರ ಸಿಂಹ, ದಲಿತ ಹೋರಾಟಗಾರ ಟಿ. ಡಿ. ರಾಜಗಿರಿ, ವದ್ದೀಗೆರೆ ಕಾಂತರಾಜ್ ಮಾತನಾಡಿದರು.</p>.<p>ನಗರದ ರಂಜಿತಾ ಹೋಟೆಲ್ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆ ತಾಲ್ಲೂಕು ಕಚೇರಿ ತಲುಪಿದ ನಂತರ ಶಿರಸ್ತೇದಾರ್ ಸಣ್ಣಪ್ಪ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.</p>.<p class="Subhead"><strong>ಡಿ.ಟಿ. ಶ್ರೀನಿವಾಸ್ ಭಾಗಿ–ವಿರೋಧ:</strong> ಪ್ರತಿಭಟನಾ ಮೆರವಣಿಗೆ ಗಾಂಧಿ ವೃತ್ತಕ್ಕೆ ಬಂದಾಗ ರಾಜ್ಯ ಪ್ರವರ್ಗ–1 ರ ಒಕ್ಕೂಟದ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್ ಪಾಲ್ಗೊಂಡರು. ಕಾಂಗ್ರೆಸ್ ಬೆಂಬಲಿತ ಪ್ರತಿಭಟನಕಾರರು, ಕೆಲವು ದಲಿತ ಮುಖಂಡರು ಇದನ್ನು ವಿರೋಧಿಸಿದರು. ಶ್ರೀನಿವಾಸ್ ಪರ ಕೆಲವರು ಬೆಂಬಲಕ್ಕೆ ನಿಂತರು. ನಂತರ ಮುಖಂಡರು ಮನವಿ ಮಾಡಿದ್ದರ ಪರಿಣಾಮ ಗೊಂದಲ ತಣ್ಣಗಾಯಿತು.</p>.<p>ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗೇಂದ್ರನಾಯ್ಕ, ಭೂತಾ ಭೋವಿ, ಕೃಷ್ಣಮೂರ್ತಿ, ಜಯಶೀಲ ನಾಯ್ಕ, ಖಾದಿ ರಮೇಶ್, ಶಿವಪ್ಪ ನಾಯಕ, ಈ. ಮಂಜುನಾಥ್, ಜೀವೇಶ್, ಸಣ್ಣಪ್ಪ, ಮಟ್ಟಿ ಹನುಮಂತರಾಯಪ್ಪ, ಗೋಪಾಲ್, ತಿಮ್ಮರಾಜ್, ಡಿಶ್ ಮಂಜಣ್ಣ, ರಂಗಸ್ವಾಮಿ, ಜೋಗಪ್ಪ, ಮಂಜುಮಾಳಿಗೆ, ಎಂ.ಡಿ. ರವಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>