ಸರ್ಕಾರದ ತೀರ್ಮಾನ ಮುಸ್ಲಿಂ ಸಮುದಾಯದ ಪಾಲಿಗೆ ಉತ್ತಮ ಬೆಳವಣಿಗೆ. ರಾಜ್ಯದ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ ಬಹಳಷ್ಟು ಕಡೆಗಳಲ್ಲಿ ಮುಸ್ಲಿಮರು ಬಳಸುವ ಕನ್ನಡ ಅಷ್ಟೊಂದು ಪಕ್ವವಿಲ್ಲ. ಹೀಗಾಗಿ ಕನ್ನಡ ಕಲಿಕೆ ಕಡ್ಡಾಯ ಮಾಡಿದಲ್ಲಿ ಕನ್ನಡ ಬರೆಯಲು, ಓದಲು ಕಲಿಯುತ್ತಾರೆ. ನಾಡಿನ ಭಾಷೆಯ ಬಗ್ಗೆ ಪ್ರಭುತ್ವ ಸಾಧಿಸುತ್ತಾರೆ. ಭಾಷಾ ಏಕತೆ ಮೂಡಿ ಸಹಸಮುದಾಯಗಳೊಂದಿಗೆ ಸಹಬಾಳ್ವೆ ನಡೆಸಲು ಸಹಾಯವಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.