‘ಲಾಕ್ಡೌನ್ ಸಂದರ್ಭದಲ್ಲಿ ಆಹಾರದ ಕಿಟ್ ಕೇಳಲು ಮನೆ ಬಳಿಗೆ ಬಂದಿದ್ದ ಗ್ರಾಮದ ಮಹಿಳೆಯರನ್ನು ಗದರಿಸಿ ಅವಮಾನಿಸಿದ ಪರಿಣಾಮವಾಗಿ ಈ ಬಿರುದು ನೀಡುತ್ತಿದ್ದೇವೆ’ ಎಂಬ ಒಕ್ಕಣೆ ಭಿತ್ತಿಪತ್ರದಲ್ಲಿದೆ. ಎಂ.ಕೆ.ಹಟ್ಟಿ ಹೆದ್ದಾರಿ ಕೆಳ ಸೇತುವೆಯಲ್ಲಿನ ನೀರಿನ ಸಮಸ್ಯೆಗೆ ಪರಿಹಾರ ಒದಗಿಸದಿರುವುದು, ಯುವಕರು ಹಾಗೂ ಮಹಿಳೆಯರ ಬಗ್ಗೆ ಆಡಿದ ಮಾತು ಹಾಗೂ ಗ್ರಾಮಕ್ಕೆ ಮೂರು ವರ್ಷಗಳಿಂದ ಅನುದಾನ ನೀಡಿಲ್ಲ ಎಂಬ ಅಂಶಗಳನ್ನು ಉಲ್ಲೇಖಿಸಲಾಗಿದೆ