<p><strong>ಚಿತ್ರದುರ್ಗ:</strong> ‘ಮದಕರಿನಾಯಕ ಹೆಸರಿನಲ್ಲಿ ತೆಗೆಯಲು ಮುಂದಾಗಿರುವ ಸಿನಿಮಾದಲ್ಲಿ ಶೇ 50ರಷ್ಟಾದರೂ ನೈಜತೆ ಇರಬೇಕು’ ಎಂದು ಚಿತ್ರನಾಯಕ ವೇದಿಕೆ ಅಧ್ಯಕ್ಷ ಕೆ.ಟಿ. ಪ್ರಶಾಂತ ಕುಮಾರ್ ಒತ್ತಾಯಿಸಿದರು.</p>.<p>‘ಕಾದಂಬರಿ ಹಾಗೂ ಕಾಲ್ಪನಿಕ ಕಥೆ ಆಧರಿತ ಸಿನಿಮಾ ಮಾಡಲು ಚಿತ್ರದ ನಿರ್ಮಾಪಕರು, ನಿರ್ದೇಶಕರು ಮುಂದಾಗಿದ್ದಾರೆ. ನೈಜ ಇತಿಹಾಸ ಮರೆಮಾಚಿದರೆ, ಸಂಭಾಷಣೆಯಲ್ಲಿ ಅವಾಚ್ಯ, ಅಸಭ್ಯ ಶಬ್ಧಗಳನ್ನು ಬಳಸಿದರೆ ಕಾನೂನಾತ್ಮಕ ಹೋರಾಟಕ್ಕೆ ಸಿದ್ಧ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಚಿನ್ಮೂಲಾದ್ರಿ ಸಂಸ್ಥಾನ ಪತನವಾದ ನಂತರದಿಂದ ಈವರೆಗೂ ಮದಕರಿನಾಯಕರ ಹೆಸರನ್ನು ಅನೇಕ ಕ್ಷೇತ್ರಗಳಲ್ಲಿ ಬಳಸಿಕೊಂಡು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಚಿತ್ರದುರ್ಗದಲ್ಲಿ ಮದಕರಿನಾಯಕ ಹಾಗೂ ಅವರ ವಂಶಸ್ಥರಿಗೆ ಸಿಗಬೇಕಾದ ಗೌರವ ಸ್ಥಾನಮಾನ ಸಿಕ್ಕಿಲ್ಲ. ಅದಕ್ಕೆ ಚಿತ್ರತಂಡವೂ ಹೊರತಲ್ಲ’ ಎಂದು ದೂರಿದರು.</p>.<p>‘ಮದಕರಿನಾಯಕರ ಇತಿಹಾಸ ತಿಳಿಯಲು ವಂಶಸ್ಥರನ್ನು ಚಿತ್ರತಂಡ ಭೇಟಿ ಮಾಡಿ ಚರ್ಚಿಸಬಹುದಿತ್ತು. ಆದರೆ, ಈ ಕೆಲಸಕ್ಕೆ ಮುಂದಾಗದೇ ಅಗೌರವ ತೋರಿಸಿದ್ದಾರೆ. ಐತಿಹಾಸಿಕ ಘಟನಾವಳಿಗಳು ಮತ್ತು ದಾಖಲೆಗಳು ವಂಶಸ್ಥರ ಬಳಿ ಮಾತ್ರ ಇದ್ದು, ಕಥೆ ಹಾಗೂ ಕಾದಂಬರಿ ಆಧರಿತ ಚಿತ್ರ ತೆಗೆಯಲು ಹೊರಟಿರುವವರು ಎಷ್ಟರಮಟ್ಟಿಗೆ ನೈಜತೆ ಕೊಡಬಲ್ಲರು ಎಂಬ ಪ್ರಶ್ನೆ ಕಾಡುತ್ತಿದೆ’ ಎಂದರು.</p>.<p>‘ಮದಕರಿನಾಯಕರ ಜನಪರ ಆಡಳಿತ, ಶೌರ್ಯ, ಪರಾಕ್ರಮ, ತ್ಯಾಗ ಬಲಿದಾನಕ್ಕೆ ಎಲ್ಲಿಯೂ ಧಕ್ಕೆ ಉಂಟಾಗದ ರೀತಿಯಲ್ಲಿ ಚಿತ್ರ ನಿರ್ಮಿಸಬೇಕು. ವಂಶಸ್ಥರನ್ನು ಭೇಟಿಯಾಗಿ ಅವರಿಂದ ಮಾಹಿತಿ ಪಡೆದು ಬಳಸಿಕೊಳ್ಳಬೇಕು. ಸುದೀಪ್ ಈ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂಬುದು ನಮ್ಮ ಒತ್ತಾಯವಲ್ಲ. ಸಿನಿಮಾದಲ್ಲಿ ಯಾರೇ ಅಭಿನಯಿಸಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಸತ್ಯಕ್ಕೆ ಹತ್ತಿರವಾದ ಶೈಲಿಯಲ್ಲಿ ಸಿನಿಮಾ ಮೂಡಿಬರಬೇಕು’ ಎಂದು ಆಗ್ರಹಿಸಿದರು.</p>.<p>ವೇದಿಕೆ ಪ್ರಧಾನ ಕಾರ್ಯದರ್ಶಿ ಜೆ. ಓಬಳೇಶಕುಮಾರ್, ನಾಯಕ ಸಮುದಾಯದ ಮುಖಂಡರಾದ ತಿಪ್ಪೇಸ್ವಾಮಿ, ಓಬಣ್ಣ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ:</strong> ‘ಮದಕರಿನಾಯಕ ಹೆಸರಿನಲ್ಲಿ ತೆಗೆಯಲು ಮುಂದಾಗಿರುವ ಸಿನಿಮಾದಲ್ಲಿ ಶೇ 50ರಷ್ಟಾದರೂ ನೈಜತೆ ಇರಬೇಕು’ ಎಂದು ಚಿತ್ರನಾಯಕ ವೇದಿಕೆ ಅಧ್ಯಕ್ಷ ಕೆ.ಟಿ. ಪ್ರಶಾಂತ ಕುಮಾರ್ ಒತ್ತಾಯಿಸಿದರು.</p>.<p>‘ಕಾದಂಬರಿ ಹಾಗೂ ಕಾಲ್ಪನಿಕ ಕಥೆ ಆಧರಿತ ಸಿನಿಮಾ ಮಾಡಲು ಚಿತ್ರದ ನಿರ್ಮಾಪಕರು, ನಿರ್ದೇಶಕರು ಮುಂದಾಗಿದ್ದಾರೆ. ನೈಜ ಇತಿಹಾಸ ಮರೆಮಾಚಿದರೆ, ಸಂಭಾಷಣೆಯಲ್ಲಿ ಅವಾಚ್ಯ, ಅಸಭ್ಯ ಶಬ್ಧಗಳನ್ನು ಬಳಸಿದರೆ ಕಾನೂನಾತ್ಮಕ ಹೋರಾಟಕ್ಕೆ ಸಿದ್ಧ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಚಿನ್ಮೂಲಾದ್ರಿ ಸಂಸ್ಥಾನ ಪತನವಾದ ನಂತರದಿಂದ ಈವರೆಗೂ ಮದಕರಿನಾಯಕರ ಹೆಸರನ್ನು ಅನೇಕ ಕ್ಷೇತ್ರಗಳಲ್ಲಿ ಬಳಸಿಕೊಂಡು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಚಿತ್ರದುರ್ಗದಲ್ಲಿ ಮದಕರಿನಾಯಕ ಹಾಗೂ ಅವರ ವಂಶಸ್ಥರಿಗೆ ಸಿಗಬೇಕಾದ ಗೌರವ ಸ್ಥಾನಮಾನ ಸಿಕ್ಕಿಲ್ಲ. ಅದಕ್ಕೆ ಚಿತ್ರತಂಡವೂ ಹೊರತಲ್ಲ’ ಎಂದು ದೂರಿದರು.</p>.<p>‘ಮದಕರಿನಾಯಕರ ಇತಿಹಾಸ ತಿಳಿಯಲು ವಂಶಸ್ಥರನ್ನು ಚಿತ್ರತಂಡ ಭೇಟಿ ಮಾಡಿ ಚರ್ಚಿಸಬಹುದಿತ್ತು. ಆದರೆ, ಈ ಕೆಲಸಕ್ಕೆ ಮುಂದಾಗದೇ ಅಗೌರವ ತೋರಿಸಿದ್ದಾರೆ. ಐತಿಹಾಸಿಕ ಘಟನಾವಳಿಗಳು ಮತ್ತು ದಾಖಲೆಗಳು ವಂಶಸ್ಥರ ಬಳಿ ಮಾತ್ರ ಇದ್ದು, ಕಥೆ ಹಾಗೂ ಕಾದಂಬರಿ ಆಧರಿತ ಚಿತ್ರ ತೆಗೆಯಲು ಹೊರಟಿರುವವರು ಎಷ್ಟರಮಟ್ಟಿಗೆ ನೈಜತೆ ಕೊಡಬಲ್ಲರು ಎಂಬ ಪ್ರಶ್ನೆ ಕಾಡುತ್ತಿದೆ’ ಎಂದರು.</p>.<p>‘ಮದಕರಿನಾಯಕರ ಜನಪರ ಆಡಳಿತ, ಶೌರ್ಯ, ಪರಾಕ್ರಮ, ತ್ಯಾಗ ಬಲಿದಾನಕ್ಕೆ ಎಲ್ಲಿಯೂ ಧಕ್ಕೆ ಉಂಟಾಗದ ರೀತಿಯಲ್ಲಿ ಚಿತ್ರ ನಿರ್ಮಿಸಬೇಕು. ವಂಶಸ್ಥರನ್ನು ಭೇಟಿಯಾಗಿ ಅವರಿಂದ ಮಾಹಿತಿ ಪಡೆದು ಬಳಸಿಕೊಳ್ಳಬೇಕು. ಸುದೀಪ್ ಈ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂಬುದು ನಮ್ಮ ಒತ್ತಾಯವಲ್ಲ. ಸಿನಿಮಾದಲ್ಲಿ ಯಾರೇ ಅಭಿನಯಿಸಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಸತ್ಯಕ್ಕೆ ಹತ್ತಿರವಾದ ಶೈಲಿಯಲ್ಲಿ ಸಿನಿಮಾ ಮೂಡಿಬರಬೇಕು’ ಎಂದು ಆಗ್ರಹಿಸಿದರು.</p>.<p>ವೇದಿಕೆ ಪ್ರಧಾನ ಕಾರ್ಯದರ್ಶಿ ಜೆ. ಓಬಳೇಶಕುಮಾರ್, ನಾಯಕ ಸಮುದಾಯದ ಮುಖಂಡರಾದ ತಿಪ್ಪೇಸ್ವಾಮಿ, ಓಬಣ್ಣ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>