ಸೆ. 25ರಂದು 500– 600 ಜನ ಕಾಲ್ನಡಿಗೆಯಲ್ಲಿ ತೆರಳಿ ಕಲ್ಲತ್ತಿಗಿರಿಯಲ್ಲಿ ಗಂಗಾಪೂಜೆ ಸಲ್ಲಿಸಿದರು. ಸಂಜೆ ಸ್ವಾಮಿಗೆ ನವಗ್ರಹ ಪೂಜೆ ನಡೆಸುವುದರ ಮೂಲಕ ನವರಾತ್ರಿ ಉತ್ಸವ ಆರಂಭಿಸಲಾಯಿತು. ಆ. 3ರವರೆಗೂ ದೇವರಿಗೆ ನಿತ್ಯ ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ, ಮಹಾಪೂಜೆ ನೈವೇದ್ಯ, ಮಹಾಮಂಗಳಾರತಿ ಸಲ್ಲಿಸಲಾಗಿದೆ. ಆ. 4ರ ಆಯುಧಪೂಜೆ ದಿನದಂದು ಕುದುರೆಪೂಜೆ ಹಾಗೂ ಧ್ವಜಾರೋಹಣ ಕಾರ್ಯಕ್ರಮ ನೆರವೇರಿದವು.