<p><strong>ಚಿತ್ರದುರ್ಗ: </strong>ನಗರದಲ್ಲಿ ಭಾನುವಾರ ನಡೆದ ಕೆಎಸ್ಆರ್ಪಿ, ಐಆರ್ಬಿ ಕಾನ್ಸ್ಟೆಬಲ್ ಹುದ್ದೆ ನೇಮಕಾತಿಯ ಲಿಖಿತ ಪರೀಕ್ಷೆಯನ್ನು ಹಣದ ಆಸೆಗೆ ಅಭ್ಯರ್ಥಿ ಬದಲಿಗೆ ಬರೆಯಲು ಬಂದಿದ್ದ ನಕಲಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.</p>.<p>ಗೋಕಾಕ್ ತಾಲ್ಲೂಕಿನ ಮರಡಿ ಶಿವಪುರ ಗ್ರಾಮದ ಸಿದ್ಧಾರೂಢ ಮಲ್ಲಪ್ಪ ಒಡೆಯರ್ ಬಂಧಿತ ಆರೋಪಿ. ಬಸವರಾಜ ಸಿದ್ದಪ್ಪ ಚೆನ್ನಪ್ಪ ಗೋಳ್ ಎಂಬುವರ ಬದಲಿಗೆ ಪರೀಕ್ಷೆ ಬರೆಯಲು ಚಿತ್ರದುರ್ಗಕ್ಕೆ ಬಂದಿದ್ದ. ಈ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.</p>.<p>‘ಬಂಧಿತ ನಕಲಿ ಅಭ್ಯರ್ಥಿಗೆ ಗೋಕಾಕ್ ತಾಲ್ಲೂಕಿನ ಅಡಗಿನಾಳ್ ಗ್ರಾಮದ ಭೀಮ್ ಶೀ ಹುಲ್ಲೋಳ್, ಉದಗಟ್ಟಿ ಗ್ರಾಮದ ಲಕ್ಷ್ಮಣ್ ಪರನ್ನವರ್ ಎಂಬುವವರು ಬೇರೊಬ್ಬರ ಹೆಸರಿನಲ್ಲಿ ಪರೀಕ್ಷೆ ಬರೆದು ಪಾಸಾದರೆ, ₹ 2 ಲಕ್ಷ ನೀಡುವುದಾಗಿ ಆಮಿಷ ಒಡ್ಡಿದ್ದರು. ಅದಕ್ಕಾಗಿ ಪರೀಕ್ಷೆ ಬರೆಯಲು ಬಂದಿದ್ದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಹೇಳಿದ್ದಾನೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದರು.</p>.<p>‘ಅಧಿಕಾರಿಗಳು ಪರೀಕ್ಷಾ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅನುಮಾನಸ್ಪದವಾಗಿ ಕಂಡ ಈ ವ್ಯಕ್ತಿಯನ್ನು ಪರಿಶೀಲಿಸಿದ್ದಾರೆ. ಪರೀಕ್ಷಾ ಪ್ರವೇಶ ಪತ್ರ, ಅಭ್ಯರ್ಥಿ ಭಾವಚಿತ್ರ, ಆಧಾರ್ ಗುರುತಿನ ಚೀಟಿ ಸೇರಿ ಅಗತ್ಯ ದಾಖಲೆಗಳು ಒಂದಕ್ಕೊಂದು ತಾಳೆಯಾಗಿಲ್ಲ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.</p>.<p>‘ಭಾವಚಿತ್ರದಲ್ಲಿ ಬದಲಾವಣೆ ಕಂಡಿದ್ದರಿಂದ ಕಾಲೇಜಿನ ಪ್ರಾಂಶುಪಾಲ ನಾಗರಾಜ್, ಪರೀಕ್ಷಾ ಉಸ್ತುವಾರಿ ಅಧಿಕಾರಿ ಆರ್.ವಿ.ಶ್ರೀಧರ್ ಅವರ ಗಮನಕ್ಕೆ ಮೇಲ್ವಿಚಾರಕರು ತಂದಿದ್ದಾರೆ. ಕೂಲಂಕಷವಾಗಿ ಮತ್ತೊಮ್ಮೆ ವಿಚಾರಿಸಿದಾಗ ನಕಲಿ ಅಭ್ಯರ್ಥಿ ಎಂಬುದಾಗಿ ತಿಳಿದ ಕಾರಣ ಪೊಲೀಸರು ಬಂಧಿಸಿದ್ದಾರೆ’ ಎಂದು ಮಾಹಿತಿ ನೀಡಿದರು.</p>.<p>‘ಪರೀಕ್ಷಾ ಅವ್ಯವಹಾರ, ವಂಚನೆ, ಅಭ್ಯರ್ಥಿ ಹೆಸರಿನಲ್ಲಿ ಕೋಟಾ ರುಜು (ಫೋರ್ಜರಿ ಸಹಿ) ಸಂಬಂಧ ವಿವಿಧ ಐಪಿಸಿ ಕಲಂನಡಿ ಹಾಗೂ ರಾಜ್ಯ ಶಿಕ್ಷಣ ಕಾಯ್ದೆ 1983ರ ಅಡಿಯಲ್ಲಿ ನಗರಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತನಿಖೆ ಮುಂದುವರಿದಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ: </strong>ನಗರದಲ್ಲಿ ಭಾನುವಾರ ನಡೆದ ಕೆಎಸ್ಆರ್ಪಿ, ಐಆರ್ಬಿ ಕಾನ್ಸ್ಟೆಬಲ್ ಹುದ್ದೆ ನೇಮಕಾತಿಯ ಲಿಖಿತ ಪರೀಕ್ಷೆಯನ್ನು ಹಣದ ಆಸೆಗೆ ಅಭ್ಯರ್ಥಿ ಬದಲಿಗೆ ಬರೆಯಲು ಬಂದಿದ್ದ ನಕಲಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.</p>.<p>ಗೋಕಾಕ್ ತಾಲ್ಲೂಕಿನ ಮರಡಿ ಶಿವಪುರ ಗ್ರಾಮದ ಸಿದ್ಧಾರೂಢ ಮಲ್ಲಪ್ಪ ಒಡೆಯರ್ ಬಂಧಿತ ಆರೋಪಿ. ಬಸವರಾಜ ಸಿದ್ದಪ್ಪ ಚೆನ್ನಪ್ಪ ಗೋಳ್ ಎಂಬುವರ ಬದಲಿಗೆ ಪರೀಕ್ಷೆ ಬರೆಯಲು ಚಿತ್ರದುರ್ಗಕ್ಕೆ ಬಂದಿದ್ದ. ಈ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.</p>.<p>‘ಬಂಧಿತ ನಕಲಿ ಅಭ್ಯರ್ಥಿಗೆ ಗೋಕಾಕ್ ತಾಲ್ಲೂಕಿನ ಅಡಗಿನಾಳ್ ಗ್ರಾಮದ ಭೀಮ್ ಶೀ ಹುಲ್ಲೋಳ್, ಉದಗಟ್ಟಿ ಗ್ರಾಮದ ಲಕ್ಷ್ಮಣ್ ಪರನ್ನವರ್ ಎಂಬುವವರು ಬೇರೊಬ್ಬರ ಹೆಸರಿನಲ್ಲಿ ಪರೀಕ್ಷೆ ಬರೆದು ಪಾಸಾದರೆ, ₹ 2 ಲಕ್ಷ ನೀಡುವುದಾಗಿ ಆಮಿಷ ಒಡ್ಡಿದ್ದರು. ಅದಕ್ಕಾಗಿ ಪರೀಕ್ಷೆ ಬರೆಯಲು ಬಂದಿದ್ದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಹೇಳಿದ್ದಾನೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದರು.</p>.<p>‘ಅಧಿಕಾರಿಗಳು ಪರೀಕ್ಷಾ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅನುಮಾನಸ್ಪದವಾಗಿ ಕಂಡ ಈ ವ್ಯಕ್ತಿಯನ್ನು ಪರಿಶೀಲಿಸಿದ್ದಾರೆ. ಪರೀಕ್ಷಾ ಪ್ರವೇಶ ಪತ್ರ, ಅಭ್ಯರ್ಥಿ ಭಾವಚಿತ್ರ, ಆಧಾರ್ ಗುರುತಿನ ಚೀಟಿ ಸೇರಿ ಅಗತ್ಯ ದಾಖಲೆಗಳು ಒಂದಕ್ಕೊಂದು ತಾಳೆಯಾಗಿಲ್ಲ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.</p>.<p>‘ಭಾವಚಿತ್ರದಲ್ಲಿ ಬದಲಾವಣೆ ಕಂಡಿದ್ದರಿಂದ ಕಾಲೇಜಿನ ಪ್ರಾಂಶುಪಾಲ ನಾಗರಾಜ್, ಪರೀಕ್ಷಾ ಉಸ್ತುವಾರಿ ಅಧಿಕಾರಿ ಆರ್.ವಿ.ಶ್ರೀಧರ್ ಅವರ ಗಮನಕ್ಕೆ ಮೇಲ್ವಿಚಾರಕರು ತಂದಿದ್ದಾರೆ. ಕೂಲಂಕಷವಾಗಿ ಮತ್ತೊಮ್ಮೆ ವಿಚಾರಿಸಿದಾಗ ನಕಲಿ ಅಭ್ಯರ್ಥಿ ಎಂಬುದಾಗಿ ತಿಳಿದ ಕಾರಣ ಪೊಲೀಸರು ಬಂಧಿಸಿದ್ದಾರೆ’ ಎಂದು ಮಾಹಿತಿ ನೀಡಿದರು.</p>.<p>‘ಪರೀಕ್ಷಾ ಅವ್ಯವಹಾರ, ವಂಚನೆ, ಅಭ್ಯರ್ಥಿ ಹೆಸರಿನಲ್ಲಿ ಕೋಟಾ ರುಜು (ಫೋರ್ಜರಿ ಸಹಿ) ಸಂಬಂಧ ವಿವಿಧ ಐಪಿಸಿ ಕಲಂನಡಿ ಹಾಗೂ ರಾಜ್ಯ ಶಿಕ್ಷಣ ಕಾಯ್ದೆ 1983ರ ಅಡಿಯಲ್ಲಿ ನಗರಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತನಿಖೆ ಮುಂದುವರಿದಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>