ಕೋಟೆ ಬಡಾವಣೆಯಲ್ಲಿರುವ ದೊರೆಗಳ ಮನೆ, ದೂಪದ ಸೇವೆಯವರ ಮನೆ ಹಾಗೂ ಗೊಂಚಿಗಾರರ ಮನೆಗೆ ದೇವಿಯನ್ನು ಹೊತ್ತು ತಂದು ಉಡಿ ಅಕ್ಕಿ ತುಂಬಿ ಪೂಜೆ ನೆರವೇರಿಸಲಾಯಿತು. ಮನೆ ಮಗಳು ತವರು ಮನೆಯಿಂದ ತೆರಳುವಾಗ ಆಗುವ ಸಂಕಟ, ದುಃಖ ಹೇಗಿರುತ್ತದಯೋ ಹಾಗೇ ದೇವಿಯನ್ನು ಹೊತ್ತ ಪೂಜಾರಿ ಭಾರದ ಹೆಜ್ಜೆಗಳನ್ನಿಡುತ್ತಾ ನಿಧಾನಕ್ಕೆ ಸಾಗಿದರು. ನಂತರ ಹಟ್ಟಿಮಲ್ಲಪ್ಪನಾಯಕ ವೃತ್ತಕ್ಕೆ ಬಂದು ಜೋರಾಗಿ ಹೊರಟಿತು. ತೇರುಬೀದಿ, ವಾಲ್ಮೀಕಿವೃತ್ತ, ಜೆ.ಸಿ.ರಸ್ತೆ, ಅಂಬೇಡ್ಕರ್ ವೃತ್ತದ ಮೂಲಕ ಎನ್.ಮಹದೇವಪುರ ಗ್ರಾಮಕ್ಕೆ ತೆರಳಲಾಯಿತು.