<p>ಹೊಸದುರ್ಗ: ತಾಲ್ಲೂಕಿನ ಅತ್ತಿಘಟ್ಟ ಗ್ರಾಮದಲ್ಲಿ ತೋಟದ ರಕ್ಷಣೆಗಾಗಿ ಸಾಕಿದ್ದ ಮುಧೋಳ ತಳಿಯ ನಾಯಿ ದುಷ್ಕರ್ಮಿಗಳು ಇಟ್ಟಿದ್ದ ಸ್ಫೋಟಕ ಸೇವಿಸಿ ಸಾವನ್ನಪ್ಪಿದೆ.</p>.<p>ಅತ್ತಿಘಟ್ಟ ಗ್ರಾಮದ ನಿವಾಸಿ ಯೋಗೇಶ್ ಫೆ. 17 ರಂದು ಸಂಜೆ ತಮ್ಮ ನಾಯಿಗಳಿಗೆ ಆಹಾರ ಹಾಕಿ ಮನೆಗೆ ಮರಳಿದ್ದರು. ಆದರೆ, ಮರುದಿನ ಬೆಳಿಗ್ಗೆ ಬಂದು ನೋಡಿದಾಗ ಮುಧೋಳ ನಾಯಿ ನಾಪತ್ತೆಯಾಗಿತ್ತು. ಫೆ. 20 ರಂದು ಸಂಜೆ ತೋಟಕ್ಕೆ ನೀರು ಹರಿಸಲು ಹೋದಾಗ ಕಾಣೆಯಾಗಿದ್ದ ನಾಯಿ ಮೃತಪಟ್ಟಿತ್ತು.</p>.<p>ಸ್ಫೋಟಕ ವಸ್ತುವನ್ನು ಕಚ್ಚಿದ್ದು, ಸ್ಫೋಟಕವು ಬಾಯಲ್ಲೇ ಸಿಡಿದ ಪರಿಣಾಮ ನಾಯಿಯ ಬಾಯಿ ಹರಿದು ಹೋಗಿ ಸ್ಥಳದಲ್ಲೇ ಮೃತಪಟ್ಟಿದೆ. ಕಾಡು ಪ್ರಾಣಿಗಳ ಬೇಟೆಗಾಗಿ ದುಷ್ಕರ್ಮಿಗಳು ಇಟ್ಟಿದ್ದ ಸ್ಫೋಟಕವನ್ನು ನಾಯಿ ತಿಂದಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>
<p>ಹೊಸದುರ್ಗ: ತಾಲ್ಲೂಕಿನ ಅತ್ತಿಘಟ್ಟ ಗ್ರಾಮದಲ್ಲಿ ತೋಟದ ರಕ್ಷಣೆಗಾಗಿ ಸಾಕಿದ್ದ ಮುಧೋಳ ತಳಿಯ ನಾಯಿ ದುಷ್ಕರ್ಮಿಗಳು ಇಟ್ಟಿದ್ದ ಸ್ಫೋಟಕ ಸೇವಿಸಿ ಸಾವನ್ನಪ್ಪಿದೆ.</p>.<p>ಅತ್ತಿಘಟ್ಟ ಗ್ರಾಮದ ನಿವಾಸಿ ಯೋಗೇಶ್ ಫೆ. 17 ರಂದು ಸಂಜೆ ತಮ್ಮ ನಾಯಿಗಳಿಗೆ ಆಹಾರ ಹಾಕಿ ಮನೆಗೆ ಮರಳಿದ್ದರು. ಆದರೆ, ಮರುದಿನ ಬೆಳಿಗ್ಗೆ ಬಂದು ನೋಡಿದಾಗ ಮುಧೋಳ ನಾಯಿ ನಾಪತ್ತೆಯಾಗಿತ್ತು. ಫೆ. 20 ರಂದು ಸಂಜೆ ತೋಟಕ್ಕೆ ನೀರು ಹರಿಸಲು ಹೋದಾಗ ಕಾಣೆಯಾಗಿದ್ದ ನಾಯಿ ಮೃತಪಟ್ಟಿತ್ತು.</p>.<p>ಸ್ಫೋಟಕ ವಸ್ತುವನ್ನು ಕಚ್ಚಿದ್ದು, ಸ್ಫೋಟಕವು ಬಾಯಲ್ಲೇ ಸಿಡಿದ ಪರಿಣಾಮ ನಾಯಿಯ ಬಾಯಿ ಹರಿದು ಹೋಗಿ ಸ್ಥಳದಲ್ಲೇ ಮೃತಪಟ್ಟಿದೆ. ಕಾಡು ಪ್ರಾಣಿಗಳ ಬೇಟೆಗಾಗಿ ದುಷ್ಕರ್ಮಿಗಳು ಇಟ್ಟಿದ್ದ ಸ್ಫೋಟಕವನ್ನು ನಾಯಿ ತಿಂದಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>