<p><strong>ಚಳ್ಳಕೆರೆ:</strong> ತಾಲ್ಲೂಕಿನ ರಾಮಜೋಗಿಹಳ್ಳಿ ಗ್ರಾಮದ ಗೊಲ್ಲರಹಟ್ಟಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಸೊಸೆಯೇ ಅತ್ತೆಯನ್ನು ಕಬ್ಬಿಣದ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾಳೆ.</p>.<p>ರುದ್ರಮ್ಮ (60) ಕೊಲೆಯಾದವರು. ಇವರ ಸೊಸೆ ಮುದ್ದಕ್ಕ ಕೊಲೆ ಮಾಡಿದಾಕೆ. ಪೊಲೀಸರು ಮುದ್ದಕ್ಕಳನ್ನು ಬಂಧಿಸಿದ್ದಾರೆ.</p>.<p>ಸೋಮಗುದ್ದು ಗ್ರಾಮದವಳಾದ ಮುದ್ದಕ್ಕಳನ್ನು ರುದ್ರಮ್ಮ ಅವರ ಪುತ್ರ ಸಂಪತ್ಕುಮಾರ್ ಜೊತೆ ಹಲವು ವರ್ಷಗಳ ಹಿಂದೆ ವಿವಾಹ ಮಾಡಲಾಗಿತ್ತು. ಸಂಸಾರದಲ್ಲಿ ಹೊಂದಾಣಿಕೆ ಇಲ್ಲದೇ ಇರುವುದರಿಂದ ಈ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು.</p>.<p>ನಿರಂತರ ಜಗಳದಿಂದ ಬೇಸತ್ತ ಸೊಸೆ ಮುದ್ದಕ್ಕ ‘ಹೀಗೆ ಮಾಡುತ್ತಿರು. ಒಂದಲ್ಲ ಒಂದು ದಿನ ನಿನಗೆ ಗತಿ ಕಾಣಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದ್ದಳು.</p>.<p>ಶನಿವಾರ ರಾತ್ರಿ 11ರ ನಂತರ ಮಾವ ಕೆಂಚಪ್ಪ ಮತ್ತು ಮಗ ಸಂಪತ್ಕುಮಾರ್ ಇಬ್ಬರು ಪ್ರತ್ಯೇಕ ಕೊಠಡಿಯಲ್ಲಿ ಮಲಗಿದ್ದರು. ಅತ್ತೆ ರುದ್ರಮ್ಮ ಮತ್ತು ಸೊಸೆ ಮುದ್ದಕ್ಕ ಮತ್ತು ಮಗ ಅಭಿಷೇಕ ಸೇರಿ ಮೂವರು ಒಂದೇ ಕೊಠಡಿಯಲ್ಲಿ ಮಲಗಿದ್ದರು. ಮುದ್ದಕ್ಕ ಭಾನುವಾರ ಬೆಳಿಗ್ಗೆ 3 ಗಂಟೆಯಲ್ಲಿ ಗಾಢ ನಿದ್ರೆಯಲ್ಲಿ ಮಲಗಿದ್ದ ಅತ್ತೆ ರುದ್ರಮ್ಮ ಅವರ ತಲೆ ಹಾಗೂ ಕಿವಿಗೆ ರಕ್ತ ಸೋರುವ ಹಾಗೆ ಕಬ್ಬಿಣದ ಸುತ್ತಿಗೆಯಿಂದ ಬಲವಾಗಿ ಹೊಡೆದು ಕೊಲೆ ಮಾಡಿದ್ದಾಳೆ.</p>.<p>ರುದ್ರಮ್ಮ ಕಿರುಚಿದ ಶಬ್ಧ ಕೇಳಿದ ಶಬ್ದ ಕೇಳಿದ ಪತಿ ಕೆಂಚಪ್ಪ ಹೋಗಿ ನೋಡಿದಾಗ ಪತ್ನಿಯ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕಂಡು ಗಾಬರಿಗೊಂಡು ಮೂಕಸ್ಮಿತರಾದರು.</p>.<p>ಕೊಲೆಯ ವಿಚಾರವನ್ನು ಗ್ರಾಮದ ಮಂಜಣ್ಣ ಅವರಿಗೆ ತಿಳಿಸಿದ್ದು, ಸೊಸೆಯ ವಿರುದ್ಧ ಚಳ್ಳಕೆರೆ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ’ ಎಂದು ಪಿಎಸ್ಐ ಮಹೇಶ್ಗೌಡ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಳ್ಳಕೆರೆ:</strong> ತಾಲ್ಲೂಕಿನ ರಾಮಜೋಗಿಹಳ್ಳಿ ಗ್ರಾಮದ ಗೊಲ್ಲರಹಟ್ಟಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಸೊಸೆಯೇ ಅತ್ತೆಯನ್ನು ಕಬ್ಬಿಣದ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾಳೆ.</p>.<p>ರುದ್ರಮ್ಮ (60) ಕೊಲೆಯಾದವರು. ಇವರ ಸೊಸೆ ಮುದ್ದಕ್ಕ ಕೊಲೆ ಮಾಡಿದಾಕೆ. ಪೊಲೀಸರು ಮುದ್ದಕ್ಕಳನ್ನು ಬಂಧಿಸಿದ್ದಾರೆ.</p>.<p>ಸೋಮಗುದ್ದು ಗ್ರಾಮದವಳಾದ ಮುದ್ದಕ್ಕಳನ್ನು ರುದ್ರಮ್ಮ ಅವರ ಪುತ್ರ ಸಂಪತ್ಕುಮಾರ್ ಜೊತೆ ಹಲವು ವರ್ಷಗಳ ಹಿಂದೆ ವಿವಾಹ ಮಾಡಲಾಗಿತ್ತು. ಸಂಸಾರದಲ್ಲಿ ಹೊಂದಾಣಿಕೆ ಇಲ್ಲದೇ ಇರುವುದರಿಂದ ಈ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು.</p>.<p>ನಿರಂತರ ಜಗಳದಿಂದ ಬೇಸತ್ತ ಸೊಸೆ ಮುದ್ದಕ್ಕ ‘ಹೀಗೆ ಮಾಡುತ್ತಿರು. ಒಂದಲ್ಲ ಒಂದು ದಿನ ನಿನಗೆ ಗತಿ ಕಾಣಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದ್ದಳು.</p>.<p>ಶನಿವಾರ ರಾತ್ರಿ 11ರ ನಂತರ ಮಾವ ಕೆಂಚಪ್ಪ ಮತ್ತು ಮಗ ಸಂಪತ್ಕುಮಾರ್ ಇಬ್ಬರು ಪ್ರತ್ಯೇಕ ಕೊಠಡಿಯಲ್ಲಿ ಮಲಗಿದ್ದರು. ಅತ್ತೆ ರುದ್ರಮ್ಮ ಮತ್ತು ಸೊಸೆ ಮುದ್ದಕ್ಕ ಮತ್ತು ಮಗ ಅಭಿಷೇಕ ಸೇರಿ ಮೂವರು ಒಂದೇ ಕೊಠಡಿಯಲ್ಲಿ ಮಲಗಿದ್ದರು. ಮುದ್ದಕ್ಕ ಭಾನುವಾರ ಬೆಳಿಗ್ಗೆ 3 ಗಂಟೆಯಲ್ಲಿ ಗಾಢ ನಿದ್ರೆಯಲ್ಲಿ ಮಲಗಿದ್ದ ಅತ್ತೆ ರುದ್ರಮ್ಮ ಅವರ ತಲೆ ಹಾಗೂ ಕಿವಿಗೆ ರಕ್ತ ಸೋರುವ ಹಾಗೆ ಕಬ್ಬಿಣದ ಸುತ್ತಿಗೆಯಿಂದ ಬಲವಾಗಿ ಹೊಡೆದು ಕೊಲೆ ಮಾಡಿದ್ದಾಳೆ.</p>.<p>ರುದ್ರಮ್ಮ ಕಿರುಚಿದ ಶಬ್ಧ ಕೇಳಿದ ಶಬ್ದ ಕೇಳಿದ ಪತಿ ಕೆಂಚಪ್ಪ ಹೋಗಿ ನೋಡಿದಾಗ ಪತ್ನಿಯ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕಂಡು ಗಾಬರಿಗೊಂಡು ಮೂಕಸ್ಮಿತರಾದರು.</p>.<p>ಕೊಲೆಯ ವಿಚಾರವನ್ನು ಗ್ರಾಮದ ಮಂಜಣ್ಣ ಅವರಿಗೆ ತಿಳಿಸಿದ್ದು, ಸೊಸೆಯ ವಿರುದ್ಧ ಚಳ್ಳಕೆರೆ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ’ ಎಂದು ಪಿಎಸ್ಐ ಮಹೇಶ್ಗೌಡ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>