‘ತುಂಗಭದ್ರಾ ಹಿನ್ನೀರು ಕುಡಿಯುವ ನೀರಿನ ಯೋಜನೆಯನ್ನು ಶೀಘ್ರ ಸಾಕಾರ ಮಾಡಿಸಲಾಗುವುದು.ಕೈಗಾರಿಕಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. 20 ವರ್ಷಗಳ ರಾಜಕೀಯ ಜೀವನವನ್ನು ಚೌಕಟ್ಟಿನಲ್ಲಿ ಇಟ್ಟುಕೊಂಡು ಕೆಲಸ ಮಾಡಿದ್ದೇನೆ. ಭರವಸೆ ನೀಡಿ ಮರೆಯುವ ಕೆಲಸ ಮಾಡಿಲ್ಲ’ ಎಂದರು.
ಹಲವು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಮಾರ್, ಮುಖಂಡರಾದ ಬಿ. ಯೋಗೇಶ್ ಬಾಬು, ಬೇಡರೆಡ್ಡಿಹಳ್ಳಿ ನಾಗೇಶ್ ರೆಡ್ಡಿ, ಬಾಲರಾಜ್, ಸಿ.ಬಿ. ಮೋಹನ್, ಟಿ. ಚಂದ್ರಣ್ಣ ಇದ್ದರು.