<p><strong>ಮೊಳಕಾಲ್ಮುರು: </strong>ಈ ಬಾರಿ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ನೈಸರ್ಗಿಕ ಕೃಷಿ ಪದ್ಧತಿಯ ಶೇಂಗಾ ರಾಸಾಯನಿಕ ಪದ್ಧತಿ ಶೇಂಗಾಕ್ಕೆ ಹೋಲಿಸಿದರೆ ಆರೋಗ್ಯಪೂರ್ಣ ಬೆಳವಣಿಗೆ ಕಂಡಿದೆ.</p>.<p>ಕೇಂದ್ರ ಸರ್ಕಾರದ ‘ಶೂನ್ಯ ಬಂಡವಾಳ ಯೋಜನೆ’ ಅಡಿ ತಾಲ್ಲೂಕಿನಲ್ಲಿ ಬಿತ್ತನೆ ಮಾಡಿರುವ ಮಾದರಿ ಶೇಂಗಾ ಹೊಲಗಳಲ್ಲಿ ಬೆಳೆದಿರುವ ಶೇಂಗಾ ಇದಕ್ಕೆ ಸಾಕ್ಷಿಯಾಗಿದೆ. ಕಳೆದ ವರ್ಷ ಜಾರಿಗೆ ಬಂದಿದ್ದ ಶೂನ್ಯ ಬಂಡವಾಳ ಯೋಜನೆ ಹೆಸರನ್ನು ಈ ವರ್ಷ ‘ನೈಸರ್ಗಿಕ ಕೃಷಿ ಪದ್ಧತಿ’ ಎಂದು ಹೆಸರು ಬದಲಾಯಿಸಲಾಗಿದೆ.</p>.<p>‘ನೈಸರ್ಗಿಕ ಪದ್ಧತಿಯಲ್ಲಿ ಬಿತ್ತನೆ ಮಾಡಲು ಈ ವರ್ಷ ಸಿದ್ದಯ್ಯನಕೋಟೆ, ಸೂಲೇನಹಳ್ಳಿ, ಸೋಮೇನಹಳ್ಳಿ ಗ್ರಾಮಗಳನ್ನು ಆಯ್ಕೆ ಮಾಡಲಾಗಿತ್ತು. ಪ್ರತಿ ಗ್ರಾಮದಲ್ಲಿ 35 ಹೆಕ್ಟೇರ್ನಂತೆ ಒಟ್ಟು ಮೂರು ಗ್ರಾಮಗಳಿಂದ 105 ಹೆಕ್ಟೇರ್ನಲ್ಲಿ ಬಿತ್ತನೆ ಮಾಡಲಾಗಿದೆ. ಇದಕ್ಕೆ ಸರ್ಕಾರದಿಂದ ಪ್ರತಿ ಹೆಕ್ಟೇರ್ಗೆ ₹ 3,600 ಪ್ರೋತ್ಸಾಹಧನ ನೀಡಲಾಗುತ್ತದೆ. ಇದರಲ್ಲಿ ಕೃಷಿಗೆ ಅಗತ್ಯವಿರುವ ಜೀವಾಮೃತ ಸಿದ್ಧತೆಯನ್ನು ಸ್ವತಃ ರೈತರು ಮಾಡಿಕೊಳ್ಳಬೇಕಿದೆ’ ಎಂದು ಕೃಷಿ ಇಲಾಖೆ ಸಾವಯವ ಅಧಿಕಾರಿ ರಾಜಣ್ಣ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.</p>.<p>‘ಪ್ರಸಕ್ತ ವರ್ಷ ಪ್ರತಿ ರೈತರ ಜಮೀನಿನಲ್ಲಿ ಒಂದು ಎಕರೆ ಪ್ರದೇಶದಲ್ಲಿ ರೈತರ ಸಾಮಾನ್ಯ ಪದ್ಧತಿ ಹಾಗೂ ಅದರ ಪಕ್ಕದಲ್ಲಿ ನೈಸರ್ಗಿಕ ಪದ್ಧತಿಯಂತೆ ಬಿತ್ತನೆ ಮಾಡಿಸಲಾಗಿತ್ತು. ಸಾಮಾನ್ಯ ಪದ್ಧತಿ ಶೇಂಗಾ ಗಿಡಗಳಲ್ಲಿ ಪ್ರತಿ ಗಿಡಕ್ಕೆ 5-8 ಕಾಯಿಗಳಿದ್ದರೆ, ನೈಸರ್ಗಿಕ ಪದ್ಧತಿಯಲ್ಲಿ 20ಕ್ಕೂ ಹೆಚ್ಚು ಕಾಯಿಗಳು ಕಟ್ಟಿವೆ. ಆರೋಗ್ಯಪೂರ್ಣವಾಗಿವೆ. ಸಾಮಾನ್ಯ ಪದ್ಧತಿ ಕೃಷಿಯಲ್ಲಿ ಪ್ರತಿ ಎಕರೆಗೆ ₹ 8 ಸಾವಿರ ಖರ್ಚು ಬರುತ್ತದೆ. ನೈಸರ್ಗಿಕ ಪದ್ಧತಿಯಲ್ಲಿ ರೈತರು ಸಹಾಯಧನದಲ್ಲಿ ಸಗಣಿ, ಬೆಲ್ಲ, ಸುಣ್ಣ ಬಳಸಿ ಜೀವಾಮೃತ ಮಾಡಿಕೊಂಡು ಹಾಕುವ ಕಾರಣ ಖರ್ಚು ತೀರಾ ಕಡಿಮೆ’ ಎಂದು<br />ಹೇಳಿದರು.</p>.<p>ಗೋಪಾಲ್, ನಾಗರಾಜ್ ಅವರ ಹೊಲದಲ್ಲಿ ಈ ಬೆಳವಣಿಗೆ ಕಾಣಬಹುದು.</p>.<p>ನೈಸರ್ಗಿಕ ಪದ್ಧತಿ ಆಗು ಹೋಗುಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಅಂಕಿ-ಅಂಶ ಸಹಿತ ಸಾಬೀತು ಆಗಿಲ್ಲ. ಇನ್ನು ಸಂಶೋಧನೆ ಹಂತದಲ್ಲಿದೆ. ಆದರೆ, ನಶಿಸುತ್ತಿರುವ ಮಣ್ಣಿನ ಫಲವತ್ತತೆ ಕಾಪಾಡಲು ಈ ಪದ್ಧತಿ ಸಹಕಾರಿಯಾಗಿದೆ. ಜಾನುವಾರು ಹೊಂದಿರುವ ರೈತರು ಇದನ್ನು ಕೈಗೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ರೈತರು ಇದನ್ನು ಅಳವಡಿಸಿಕೊಳ್ಳಬೇಕು ಎಂದು ಕೃಷಿ ಅಧಿಕಾರಿಗಳು ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊಳಕಾಲ್ಮುರು: </strong>ಈ ಬಾರಿ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ನೈಸರ್ಗಿಕ ಕೃಷಿ ಪದ್ಧತಿಯ ಶೇಂಗಾ ರಾಸಾಯನಿಕ ಪದ್ಧತಿ ಶೇಂಗಾಕ್ಕೆ ಹೋಲಿಸಿದರೆ ಆರೋಗ್ಯಪೂರ್ಣ ಬೆಳವಣಿಗೆ ಕಂಡಿದೆ.</p>.<p>ಕೇಂದ್ರ ಸರ್ಕಾರದ ‘ಶೂನ್ಯ ಬಂಡವಾಳ ಯೋಜನೆ’ ಅಡಿ ತಾಲ್ಲೂಕಿನಲ್ಲಿ ಬಿತ್ತನೆ ಮಾಡಿರುವ ಮಾದರಿ ಶೇಂಗಾ ಹೊಲಗಳಲ್ಲಿ ಬೆಳೆದಿರುವ ಶೇಂಗಾ ಇದಕ್ಕೆ ಸಾಕ್ಷಿಯಾಗಿದೆ. ಕಳೆದ ವರ್ಷ ಜಾರಿಗೆ ಬಂದಿದ್ದ ಶೂನ್ಯ ಬಂಡವಾಳ ಯೋಜನೆ ಹೆಸರನ್ನು ಈ ವರ್ಷ ‘ನೈಸರ್ಗಿಕ ಕೃಷಿ ಪದ್ಧತಿ’ ಎಂದು ಹೆಸರು ಬದಲಾಯಿಸಲಾಗಿದೆ.</p>.<p>‘ನೈಸರ್ಗಿಕ ಪದ್ಧತಿಯಲ್ಲಿ ಬಿತ್ತನೆ ಮಾಡಲು ಈ ವರ್ಷ ಸಿದ್ದಯ್ಯನಕೋಟೆ, ಸೂಲೇನಹಳ್ಳಿ, ಸೋಮೇನಹಳ್ಳಿ ಗ್ರಾಮಗಳನ್ನು ಆಯ್ಕೆ ಮಾಡಲಾಗಿತ್ತು. ಪ್ರತಿ ಗ್ರಾಮದಲ್ಲಿ 35 ಹೆಕ್ಟೇರ್ನಂತೆ ಒಟ್ಟು ಮೂರು ಗ್ರಾಮಗಳಿಂದ 105 ಹೆಕ್ಟೇರ್ನಲ್ಲಿ ಬಿತ್ತನೆ ಮಾಡಲಾಗಿದೆ. ಇದಕ್ಕೆ ಸರ್ಕಾರದಿಂದ ಪ್ರತಿ ಹೆಕ್ಟೇರ್ಗೆ ₹ 3,600 ಪ್ರೋತ್ಸಾಹಧನ ನೀಡಲಾಗುತ್ತದೆ. ಇದರಲ್ಲಿ ಕೃಷಿಗೆ ಅಗತ್ಯವಿರುವ ಜೀವಾಮೃತ ಸಿದ್ಧತೆಯನ್ನು ಸ್ವತಃ ರೈತರು ಮಾಡಿಕೊಳ್ಳಬೇಕಿದೆ’ ಎಂದು ಕೃಷಿ ಇಲಾಖೆ ಸಾವಯವ ಅಧಿಕಾರಿ ರಾಜಣ್ಣ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.</p>.<p>‘ಪ್ರಸಕ್ತ ವರ್ಷ ಪ್ರತಿ ರೈತರ ಜಮೀನಿನಲ್ಲಿ ಒಂದು ಎಕರೆ ಪ್ರದೇಶದಲ್ಲಿ ರೈತರ ಸಾಮಾನ್ಯ ಪದ್ಧತಿ ಹಾಗೂ ಅದರ ಪಕ್ಕದಲ್ಲಿ ನೈಸರ್ಗಿಕ ಪದ್ಧತಿಯಂತೆ ಬಿತ್ತನೆ ಮಾಡಿಸಲಾಗಿತ್ತು. ಸಾಮಾನ್ಯ ಪದ್ಧತಿ ಶೇಂಗಾ ಗಿಡಗಳಲ್ಲಿ ಪ್ರತಿ ಗಿಡಕ್ಕೆ 5-8 ಕಾಯಿಗಳಿದ್ದರೆ, ನೈಸರ್ಗಿಕ ಪದ್ಧತಿಯಲ್ಲಿ 20ಕ್ಕೂ ಹೆಚ್ಚು ಕಾಯಿಗಳು ಕಟ್ಟಿವೆ. ಆರೋಗ್ಯಪೂರ್ಣವಾಗಿವೆ. ಸಾಮಾನ್ಯ ಪದ್ಧತಿ ಕೃಷಿಯಲ್ಲಿ ಪ್ರತಿ ಎಕರೆಗೆ ₹ 8 ಸಾವಿರ ಖರ್ಚು ಬರುತ್ತದೆ. ನೈಸರ್ಗಿಕ ಪದ್ಧತಿಯಲ್ಲಿ ರೈತರು ಸಹಾಯಧನದಲ್ಲಿ ಸಗಣಿ, ಬೆಲ್ಲ, ಸುಣ್ಣ ಬಳಸಿ ಜೀವಾಮೃತ ಮಾಡಿಕೊಂಡು ಹಾಕುವ ಕಾರಣ ಖರ್ಚು ತೀರಾ ಕಡಿಮೆ’ ಎಂದು<br />ಹೇಳಿದರು.</p>.<p>ಗೋಪಾಲ್, ನಾಗರಾಜ್ ಅವರ ಹೊಲದಲ್ಲಿ ಈ ಬೆಳವಣಿಗೆ ಕಾಣಬಹುದು.</p>.<p>ನೈಸರ್ಗಿಕ ಪದ್ಧತಿ ಆಗು ಹೋಗುಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಅಂಕಿ-ಅಂಶ ಸಹಿತ ಸಾಬೀತು ಆಗಿಲ್ಲ. ಇನ್ನು ಸಂಶೋಧನೆ ಹಂತದಲ್ಲಿದೆ. ಆದರೆ, ನಶಿಸುತ್ತಿರುವ ಮಣ್ಣಿನ ಫಲವತ್ತತೆ ಕಾಪಾಡಲು ಈ ಪದ್ಧತಿ ಸಹಕಾರಿಯಾಗಿದೆ. ಜಾನುವಾರು ಹೊಂದಿರುವ ರೈತರು ಇದನ್ನು ಕೈಗೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ರೈತರು ಇದನ್ನು ಅಳವಡಿಸಿಕೊಳ್ಳಬೇಕು ಎಂದು ಕೃಷಿ ಅಧಿಕಾರಿಗಳು ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>