‘ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಲ್ಲಿ ತಾಲ್ಲೂಕಿನಲ್ಲಿ ಚೆಕ್ ಡ್ಯಾಂ ಕಾಮಗಾರಿ ನಡೆಸಲು ₹60 ಲಕ್ಷ ನಿಗದಿ ಮಾಡಲಾಗಿತ್ತು. ಈ ಯೋಜನೆಯಲ್ಲಿ 17 ಕಾಮಗಾರಿ ಗುರುತಿಸಿದ್ದರೂ ಕೇವಲ 3 ಕಾಮಗಾರಿ ಮಾತ್ರ ಮಾಡಿದ್ದಾರೆ. ₹60 ಲಕ್ಷದಲ್ಲಿ ಕೇವಲ ₹ 6.38 ಲಕ್ಷ ಬಳಕೆ ಆಗಿದ್ದು, ಉಳಿದ ಹಣ ವಾಪಸ್ ಹೋಗಿದೆ. ನಿಗದಿತ ಸಮಯದಲ್ಲಿ ಎಲ್ಲ ಕಾಮಗಾರಿ ಮುಗಿಸಿದ್ದರೆ, ಪೂರ್ತಿ ಹಣ ಬಳಸಿಕೊಳ್ಳಬಹುದಿತ್ತು. 17 ಚೆಕ್ ಡ್ಯಾಂ ನಿರ್ಮಿಸಿದ್ದರೆ ಅಂತರ್ಜಲ ಹೆಚ್ಚುತ್ತಿತ್ತು. ಕೃಷಿ ಇಲಾಖೆ ಅಧಿಕಾರಿಗಳು ಸರ್ಕಾರದ ಅನುದಾನವನ್ನು ಸರಿಯಾಗಿ ಬಳಕೆ ಮಾಡದೆ ಅಸಡ್ಡೆ ತೋರಿದ್ದಾರೆ’ ಎಂದು ದೂರಿದರು.