‘ಬಿಜೆಪಿ ಆಡಳಿತದಲ್ಲಿ ಕಾನೂನು, ಸಾಮಾಜಿಕ ಸಾಮರಸ್ಯ, ಶಾಂತಿ–ಸಹಬಾಳ್ವೆ ಎಂಬ ಮಾತುಗಳು ಅರ್ಥ ಕಳೆದುಕೊಂಡಿವೆ. ಕರ್ನಾಟಕ ಜಂಗಲ್ ರಾಜ್ಯ ಆಗುತ್ತಿರುವ ಸಂಶಯ ಮೂಡುತ್ತಿದೆ. ಜಾರಕಿಹೊಳಿ ವಿರುದ್ಧದ ರಾಸಲೀಲೆ ಪ್ರಕರಣ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿರುವಾಗ ಜನಪ್ರತಿನಿಧಿಯೊಬ್ಬರ ಬಗ್ಗೆ ಆಡಿರುವ ಮಾತುಗಳು ಬಿಜೆಪಿ ಮುಖಂಡರ ಮನಸ್ಥಿತಿ ಎಂತಹುದು ಎಂಬುದನ್ನು ತೋರಿಸುತ್ತದೆ. ಮಹಿಳೆಯರಿಗೆ, ಸಾರ್ವಜನಿಕರಿಗೆ ತೊಂದರೆ ಕೊಡುವಂತಹ, ಅವಮಾನಿಸುವಂತಹ ಯಾವುದೇ ಘಟನೆ ನಡೆದರೂ ಕಾಂಗ್ರೆಸ್ ಕೈಕಟ್ಟಿ ಕೂರುವುದಿಲ್ಲ’ ಎಂದು ಕೆಪಿಸಿಸಿ ಸದಸ್ಯ ಅಮೃತೇಶ್ವರಸ್ವಾಮಿ ಎಚ್ಚರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ನಗರಸಭೆ ಉಪಾಧ್ಯಕ್ಷ ಬಿ.ಎನ್. ಪ್ರಕಾಶ್, ಸದಸ್ಯರಾದ ರತ್ನಮ್ಮ, ಮಮತಾ, ಗೀತಾ, ಶಿವರಂಜನಿ, ವಿಶಾಲಾಕ್ಷಮ್ಮ, ಕವಿತಾ, ಮದಲಾ ಮರಿಯಾ, ಕಾರ್ಮಿಕ ಘಟಕದ ಅಧ್ಯಕ್ಷ ಶಿವಕುಮಾರ್, ಎಸ್ಸಿ ಘಟಕದ ಉಪಾಧ್ಯಕ್ಷ ಜ್ಞಾನೇಶ್, ಸಾಮಾಜಿಕ ಜಾಲ ತಾಣದ ಅಧ್ಯಕ್ಷ ಪಾಲಾಕ್ಷ ಯಾದವ್, ಜಗಜೀವನ್ ಅವರೂ ಪಾಲ್ಗೊಂಡಿದ್ದರು.