<p>ಚಳ್ಳಕೆರೆ: ತಾಲ್ಲೂಕಿನಲ್ಲಿ ಶುಕ್ರವಾರ ತಡರಾತ್ರಿ ಸುರಿದ ಗುಡುಗು ಸಹಿತ ಮಳೆ ಹಾಗೂ ಬಿರುಗಾಳಿಯ ಪರಿಣಾಮ ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮದಲ್ಲಿ 8 ಮನೆಗಳು ಭಾಗಶಃ ಕುಸಿದಿದ್ದು, ₹ 4 ಲಕ್ಷನಷ್ಟ ಉಂಟಾಗಿದೆ.</p>.<p>ಗಡಿ ಭಾಗದ ಜಾಜೂರು ಗ್ರಾಮದ ರೈತ ಶ್ರೀನಿವಾಸಗೌಡ ಅವರು 3 ಎಕರೆ ಪ್ರದೇಶದಲ್ಲಿ ಬೆಳೆಸಿದ್ದ ಪಪ್ಪಾಯ ಬೆಳೆ ಹಾನಿಗೀಡಾಗಿದೆ. ಈ ಮೂಲಕ <br /> ತಾಲ್ಲೂಕಿನಲ್ಲಿ ಒಟ್ಟು ₹ 8 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.</p>.<p>ಮನೆಗೆ ನುಗ್ಗಿದ ಹಳ್ಳದ ನೀರು: ಜಾಜೂರು ಗ್ರಾಮದ ಎ.ಕೆ.ಕಾಲೊನಿ ಬಳಿ ಮಳೆ ನೀರು ಹರಿದು ಹೋಗುವ ಹಳ್ಳದ ಪ್ರದೇಶದಲ್ಲಿ ಮನೆ ನಿರ್ಮಿಸಿದ್ದು, ಹಳ್ಳದ ನೀರು ಮನೆಗೆ ನುಗ್ಗಿ ಮನೆಯಲ್ಲಿನ ದವಸ-ಧಾನ್ಯ, ಬಟ್ಟೆ ಇನ್ನಿತರ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ನಿರಾಶ್ರಿತ ಕುಟುಂಬಗಳು ರಾತ್ರೋ ರಾತ್ರಿ ಬೇರೆಡೆಗೆ ಸ್ಥಳಾಂತರಗೊಂಡಿವೆ.</p>.<p>ಮಹಿಳಾ ಸಂಘದ ಪ್ರತಿನಿಧಿ ಲಕ್ಷ್ಮಮ್ಮ ಅವರು ಹಳ್ಳದ ಜಾಗದಲ್ಲಿ ನಿರ್ಮಿಸಿರುವ ಅಕ್ರಮ ಮನೆ ಕಟ್ಟಡವನ್ನು ತೆರವುಗೊಳಿಸಬೇಕು. ಮಳೆನೀರು ವೇದಾವತಿ ನದಿಗೆ ಹರಿದು ಹೋಗಲು ಹಳ್ಳದ ಜಾಗದಲ್ಲಿ ದೊಡ್ಡ ಕಾಲುವೆ ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಮುಖಂಡ ತಿಮ್ಮಣ್ಣ ಆಗ್ರಹಿಸಿದರು.</p>.<p>ಹಳ್ಳದ ನೀರು ಮನೆಗೆ ಏಕಾಏಕಿ ನುಗ್ಗಿದ್ದರಿಂದ ಇಡೀ ರಾತ್ರಿ ನಿದ್ದೆಗೆಟ್ಟು ಕೂರಬೇಕಾಯಿತು. ಮನೆಯಲ್ಲಿದ್ದ ವಸ್ತುಗಳು ನಾಶವಾಗಿ ತೀವ್ರ ನಷ್ಟ ಉಂಟಾಗಿದೆ ಎಂದು ಮಹಿಳೆ ನಾಗಮ್ಮ ಅಳಲು ತೋಡಿಕೊಂಡರು.</p>.<p>ಮಳೆ ವರದಿ: ತಾಲ್ಲೂಕಿನ ತಳಕು 51.2, ನಾಯಕನಹಟ್ಟಿ ಹೋಬಳಿ 65.6, ಪರಶುರಾಂಪು ಹೋಬಳಿ 36.4, ದೇವರಮರಿಕುಂಟೆ 41.2, ಹಾಗೂ ಚಳ್ಳಕೆರೆ ಕಸಬಾ ಹೋಬಳಿಯಲ್ಲಿ 50.0 ಮಿಲಿ ಮೀಟರ್ ಮಳೆಯಾಗಿರುವುದು ಮಳೆ ಮಾಪನ ಕೇಂದ್ರದಲ್ಲಿ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಳ್ಳಕೆರೆ: ತಾಲ್ಲೂಕಿನಲ್ಲಿ ಶುಕ್ರವಾರ ತಡರಾತ್ರಿ ಸುರಿದ ಗುಡುಗು ಸಹಿತ ಮಳೆ ಹಾಗೂ ಬಿರುಗಾಳಿಯ ಪರಿಣಾಮ ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮದಲ್ಲಿ 8 ಮನೆಗಳು ಭಾಗಶಃ ಕುಸಿದಿದ್ದು, ₹ 4 ಲಕ್ಷನಷ್ಟ ಉಂಟಾಗಿದೆ.</p>.<p>ಗಡಿ ಭಾಗದ ಜಾಜೂರು ಗ್ರಾಮದ ರೈತ ಶ್ರೀನಿವಾಸಗೌಡ ಅವರು 3 ಎಕರೆ ಪ್ರದೇಶದಲ್ಲಿ ಬೆಳೆಸಿದ್ದ ಪಪ್ಪಾಯ ಬೆಳೆ ಹಾನಿಗೀಡಾಗಿದೆ. ಈ ಮೂಲಕ <br /> ತಾಲ್ಲೂಕಿನಲ್ಲಿ ಒಟ್ಟು ₹ 8 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.</p>.<p>ಮನೆಗೆ ನುಗ್ಗಿದ ಹಳ್ಳದ ನೀರು: ಜಾಜೂರು ಗ್ರಾಮದ ಎ.ಕೆ.ಕಾಲೊನಿ ಬಳಿ ಮಳೆ ನೀರು ಹರಿದು ಹೋಗುವ ಹಳ್ಳದ ಪ್ರದೇಶದಲ್ಲಿ ಮನೆ ನಿರ್ಮಿಸಿದ್ದು, ಹಳ್ಳದ ನೀರು ಮನೆಗೆ ನುಗ್ಗಿ ಮನೆಯಲ್ಲಿನ ದವಸ-ಧಾನ್ಯ, ಬಟ್ಟೆ ಇನ್ನಿತರ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ನಿರಾಶ್ರಿತ ಕುಟುಂಬಗಳು ರಾತ್ರೋ ರಾತ್ರಿ ಬೇರೆಡೆಗೆ ಸ್ಥಳಾಂತರಗೊಂಡಿವೆ.</p>.<p>ಮಹಿಳಾ ಸಂಘದ ಪ್ರತಿನಿಧಿ ಲಕ್ಷ್ಮಮ್ಮ ಅವರು ಹಳ್ಳದ ಜಾಗದಲ್ಲಿ ನಿರ್ಮಿಸಿರುವ ಅಕ್ರಮ ಮನೆ ಕಟ್ಟಡವನ್ನು ತೆರವುಗೊಳಿಸಬೇಕು. ಮಳೆನೀರು ವೇದಾವತಿ ನದಿಗೆ ಹರಿದು ಹೋಗಲು ಹಳ್ಳದ ಜಾಗದಲ್ಲಿ ದೊಡ್ಡ ಕಾಲುವೆ ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಮುಖಂಡ ತಿಮ್ಮಣ್ಣ ಆಗ್ರಹಿಸಿದರು.</p>.<p>ಹಳ್ಳದ ನೀರು ಮನೆಗೆ ಏಕಾಏಕಿ ನುಗ್ಗಿದ್ದರಿಂದ ಇಡೀ ರಾತ್ರಿ ನಿದ್ದೆಗೆಟ್ಟು ಕೂರಬೇಕಾಯಿತು. ಮನೆಯಲ್ಲಿದ್ದ ವಸ್ತುಗಳು ನಾಶವಾಗಿ ತೀವ್ರ ನಷ್ಟ ಉಂಟಾಗಿದೆ ಎಂದು ಮಹಿಳೆ ನಾಗಮ್ಮ ಅಳಲು ತೋಡಿಕೊಂಡರು.</p>.<p>ಮಳೆ ವರದಿ: ತಾಲ್ಲೂಕಿನ ತಳಕು 51.2, ನಾಯಕನಹಟ್ಟಿ ಹೋಬಳಿ 65.6, ಪರಶುರಾಂಪು ಹೋಬಳಿ 36.4, ದೇವರಮರಿಕುಂಟೆ 41.2, ಹಾಗೂ ಚಳ್ಳಕೆರೆ ಕಸಬಾ ಹೋಬಳಿಯಲ್ಲಿ 50.0 ಮಿಲಿ ಮೀಟರ್ ಮಳೆಯಾಗಿರುವುದು ಮಳೆ ಮಾಪನ ಕೇಂದ್ರದಲ್ಲಿ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>