<p><strong>ತುರುವನೂರು:</strong> ಗೋಶಾಲೆ ಸ್ಥಾಪಿಸಬೇಕು ಎಂದು ಒತ್ತಾಯಿಸಿ ರೈತರು ತಮ್ಮ ಜಾನುವಾರಿನೊಂದಿಗೆ ತುರುವನೂರು ನಾಡಕಚೇರಿಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.<br /><br />ಜಾನುವಾರಿಗೆ ಮೇವು ಪೂರೈಸಲಾಗದ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.</p>.<p>ಗೋಶಾಲೆ ಸ್ಥಾಪಿಸಿ ಜಾನುವಾರಿಗೆ ಮೇವು, ನೀರು ಪೂರೈಸುವಂತೆ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಜಾನುವಾರು ಸಮೇತ ನಾಡಕಚೇರಿಗೆ ಮುತ್ತಿಗೆ ಹಾಕಿದ್ದೇವೆ ಎಂದು ರೈತರು ಅಳಲು ತೋಡಿಕೊಂಡರು.</p>.<p>‘ರಾಸುಗಳು ಮೇವು, ನೀರು ಇಲ್ಲದೆ ನಿತ್ರಾಣಗೊಂಡಿವೆ. ಗೋಶಾಲೆ ಪ್ರಾರಂಭ ಮಾಡುವಂತೆ ಅನೇಕ ಬಾರಿ ಒತ್ತಾಯಿಸಿದರೂ ಇನ್ನೂ ಆರಂಭವಾಗಿಲ್ಲ. ಮೇವು ಬ್ಯಾಂಕ್ ಸ್ಥಾಪನೆ ಮಾಡಿದ್ದಾರೆ. ಆದರೆ ಇದುವರೆಗೂ ಮೇವು ವಿತರಣೆ ಮಾಡಿಲ್ಲ’ ಎಂದು ರೈತ ಸುನೀಲ್ ಆರೋಪಿಸಿದರು</p>.<p>‘ಮೇವು ಬ್ಯಾಂಕ್ನಿಂದ ಮೇವು ಖರೀದಿಸಲು ನಮ್ಮ ಬಳಿ ಹಣವಿಲ್ಲ. ಹಾಗಾಗಿ ಮೇವು ಬ್ಯಾಂಕ್ ಸ್ಥಾಪನೆಗಿಂತ ಗೋಶಾಲೆ ಆರಂಭವಾದರೆ ಜಾನುವಾರಿಗೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಅವರು.</p>.<p>‘ಐದಾರು ವರ್ಷಗಳಿಂದ ಮಳೆ ಇಲ್ಲದೆ ಕಷ್ಟದಿಂದ ಜೀವನ ಮಾಡುತ್ತಿದ್ದೇವೆ. ಮೇವು ಬ್ಯಾಂಕ್ನಿಂದ ಮೇವು ಖರೀದಿಸಲು ಬಿಡಿಗಾಸು ಇಲ್ಲ. ಹಾಗಾಗಿ ಶೀಘ್ರವಾಗಿ ಗೋಶಾಲೆ ತೆರೆದು ಜಾನುವಾರು ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಬೇಕು’ ಎನ್ನುತ್ತಾರೆ ರೈತ ಗೋಪಿ.</p>.<p>‘ಜಿಲ್ಲಾಡಳಿತದಿಂದ ಈಗಾಗಲೇ ತುರುವನೂರು ಗ್ರಾಮದಲ್ಲಿ ಮೇವು ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ. ಆದರೆ ಯಾವ ರೈತರೂ ಮೇವು ಬ್ಯಾಂಕ್ನಿಂದ ಮೇವು ಖರೀದಿಸಲು ಮುಂದಾಗಿಲ್ಲ’ ಎಂದು ನಾಡಕಚೇರಿ ಅಧಿಕಾರಿಗಳು ಹೇಳಿದರು.</p>.<p>ರಾಜಣ್ಣ, ಗೋಪಾಲಪ್ಪ, ಗಂಗಾಧರ್, ಹನುಮಂತರೆಡ್ಡಿ ಸೇರಿ ಹಲವು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುರುವನೂರು:</strong> ಗೋಶಾಲೆ ಸ್ಥಾಪಿಸಬೇಕು ಎಂದು ಒತ್ತಾಯಿಸಿ ರೈತರು ತಮ್ಮ ಜಾನುವಾರಿನೊಂದಿಗೆ ತುರುವನೂರು ನಾಡಕಚೇರಿಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.<br /><br />ಜಾನುವಾರಿಗೆ ಮೇವು ಪೂರೈಸಲಾಗದ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.</p>.<p>ಗೋಶಾಲೆ ಸ್ಥಾಪಿಸಿ ಜಾನುವಾರಿಗೆ ಮೇವು, ನೀರು ಪೂರೈಸುವಂತೆ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಜಾನುವಾರು ಸಮೇತ ನಾಡಕಚೇರಿಗೆ ಮುತ್ತಿಗೆ ಹಾಕಿದ್ದೇವೆ ಎಂದು ರೈತರು ಅಳಲು ತೋಡಿಕೊಂಡರು.</p>.<p>‘ರಾಸುಗಳು ಮೇವು, ನೀರು ಇಲ್ಲದೆ ನಿತ್ರಾಣಗೊಂಡಿವೆ. ಗೋಶಾಲೆ ಪ್ರಾರಂಭ ಮಾಡುವಂತೆ ಅನೇಕ ಬಾರಿ ಒತ್ತಾಯಿಸಿದರೂ ಇನ್ನೂ ಆರಂಭವಾಗಿಲ್ಲ. ಮೇವು ಬ್ಯಾಂಕ್ ಸ್ಥಾಪನೆ ಮಾಡಿದ್ದಾರೆ. ಆದರೆ ಇದುವರೆಗೂ ಮೇವು ವಿತರಣೆ ಮಾಡಿಲ್ಲ’ ಎಂದು ರೈತ ಸುನೀಲ್ ಆರೋಪಿಸಿದರು</p>.<p>‘ಮೇವು ಬ್ಯಾಂಕ್ನಿಂದ ಮೇವು ಖರೀದಿಸಲು ನಮ್ಮ ಬಳಿ ಹಣವಿಲ್ಲ. ಹಾಗಾಗಿ ಮೇವು ಬ್ಯಾಂಕ್ ಸ್ಥಾಪನೆಗಿಂತ ಗೋಶಾಲೆ ಆರಂಭವಾದರೆ ಜಾನುವಾರಿಗೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಅವರು.</p>.<p>‘ಐದಾರು ವರ್ಷಗಳಿಂದ ಮಳೆ ಇಲ್ಲದೆ ಕಷ್ಟದಿಂದ ಜೀವನ ಮಾಡುತ್ತಿದ್ದೇವೆ. ಮೇವು ಬ್ಯಾಂಕ್ನಿಂದ ಮೇವು ಖರೀದಿಸಲು ಬಿಡಿಗಾಸು ಇಲ್ಲ. ಹಾಗಾಗಿ ಶೀಘ್ರವಾಗಿ ಗೋಶಾಲೆ ತೆರೆದು ಜಾನುವಾರು ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಬೇಕು’ ಎನ್ನುತ್ತಾರೆ ರೈತ ಗೋಪಿ.</p>.<p>‘ಜಿಲ್ಲಾಡಳಿತದಿಂದ ಈಗಾಗಲೇ ತುರುವನೂರು ಗ್ರಾಮದಲ್ಲಿ ಮೇವು ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ. ಆದರೆ ಯಾವ ರೈತರೂ ಮೇವು ಬ್ಯಾಂಕ್ನಿಂದ ಮೇವು ಖರೀದಿಸಲು ಮುಂದಾಗಿಲ್ಲ’ ಎಂದು ನಾಡಕಚೇರಿ ಅಧಿಕಾರಿಗಳು ಹೇಳಿದರು.</p>.<p>ರಾಜಣ್ಣ, ಗೋಪಾಲಪ್ಪ, ಗಂಗಾಧರ್, ಹನುಮಂತರೆಡ್ಡಿ ಸೇರಿ ಹಲವು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>